ಸೈಕಲ್ ಮೇಲೆ ಮೃತದೇಹ ಸಾಗಿಸುತ್ತಿರುವ ದೃಶ್ಯ 
ದೇಶ

ಅಸ್ಸಾಂ: ಸೈಕಲ್ ಮೇಲೆ ಯುವಕನ ಮೃತದೇಹ ರವಾನೆ ವಿಡಿಯೋ ವೈರಲ್; ತನಿಖೆಗೆ ಸಿಎಂ ಆದೇಶ

ಅಸ್ಸಾಂ ಸಿಎಂ ಸರ್ಬನಾನಂದ ಸೋನೋವಾಲ್ ಅವರ ವಿಧಾನಸಭಾ ಕ್ಷೇತ್ರವಾದ ಮಜುಲಿಯಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ರಸ್ತೆ ಇರದ ಕಾರಣ...

ಗುವಾಹಟಿ: ಅಸ್ಸಾಂ ಸಿಎಂ ಸರ್ಬನಾನಂದ ಸೋನೋವಾಲ್ ಅವರ ವಿಧಾನಸಭಾ ಕ್ಷೇತ್ರವಾದ ಮಜುಲಿಯಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ರಸ್ತೆ ಇರದ ಕಾರಣ ಯುವಕನೋರ್ವ ತನ್ನ ಸಹೋದರನ ಶವವನ್ನು ಆಸ್ಪತ್ರೆಯಿಂದ ತನ್ನ ಮನೆಗೆ ಸೈಕಲ್ ಮೇಲೆ ಸಾಗಿಸಿದ ಅಮಾನವೀಯ ಘಟನೆ ನಡೆದಿದೆ. 
ಲೂತ್ ಖಬಾಲು ಗ್ರಾಮದ ಜನರು ಊರಿನಿಂದ ಆಚೆ ಹೋಗಲು ರಸ್ತೆ ಮಾರ್ಗವಿಲ್ಲ. ಆದರೆ ಬ್ರಿಡ್ಜ್ ಮಾತ್ರ ಇದ್ದು ಇದರ ಮೂಲಕವೇ ಮುಖ್ಯ ರಸ್ತೆಗೆ ಸಾಗಬೇಕು. ಈ ಬ್ರಿಡ್ಜ್ ಮೇಲೆ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಇದೇ ಗ್ರಾಮದ ವ್ಯಕ್ತಿಯೊರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶವ ಸಾಗಾಣೆಗಾಗಿ ಸೈಕಲ್ ಮೇಲೆ ತೆಗೆದುಕೊಂಡು ಹೋಗಲಾಗಿದೆ. 
ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಸಿಎಂ ಅವರು ಘಟನೆ ಕುರಿತಂತೆ ಸಂತಾಪ ಸೂಚಿಸಿ ತನಿಖೆಗೆ ಆದೇಶಿಸಿದ್ದಾರೆ. ಘಟನೆ ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

SCROLL FOR NEXT