ಮನೋಹರ್ ಪರ್ರಿಕರ್ 
ದೇಶ

ಗ್ಲಾಮರಸ್ ಉದ್ಯೋಗಗಳಿಗೆ ಮಾರು ಹೋಗದಂತೆ ಐಐಟಿ ಪದವೀಧರರಿಗೆ ಮನೋಹರ್ ಪರ್ರಿಕರ್ ಸಲಹೆ

ಗ್ಲಾಮರಸ್ ಉದ್ಯೋಗಗಳಿಗೆ ಐಐಟಿ ಪದವೀಧರರು ಮಾರು ಹೋಗಬಾರದು ಎಂದು ಗೋವಾ ಮುಖ್ಯಮಂತ್ರಿ....

ಪಣಜಿ: ಗ್ಲಾಮರಸ್ ಉದ್ಯೋಗಗಳಿಗೆ ಐಐಟಿ ಪದವೀಧರರು ಮಾರು ಹೋಗಬಾರದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಸಲಹೆ ನೀಡಿದ್ದಾರೆ.
ಮುಂಬೈಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ 55ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ಐಐಟಿ ಪದವೀಧರರು ಗ್ಲಾಮರಸ್ ಉದ್ಯೋಗಗಳಿಗೆ ಮಾರು ಹೋಗಬಾರದು. ವಿಶ್ವಾದ್ಯಂತ ಇಂದು ಸವಾಲುಗಳು ಹೆಚ್ಚುತ್ತಿದ್ದು ಜೀವನಮಟ್ಟ ಸಂಕೀರ್ಣವಾಗುತ್ತಿದೆ. ಇಲ್ಲಿನ ಸವಾಲು ಮತ್ತು ಸಂಕೀರ್ಣತೆಯನ್ನು ಬಗೆಹರಿಸಲು ಉದ್ಯಮಶೀಲತೆ ಮತ್ತು ಬೌದ್ಧಿಕ ಶಕ್ತಿ ತೋರಿಸುವ ನೈತಿಕ ಜವಾಬ್ದಾರಿ ಐಐಟಿ ಪದವೀಧರರಿಗಿದೆ ಎಂದು ಹೇಳಿದರು.
ಇಂದಿನ ಯುವ ಪದವೀಧರರು ಎದುರಿಸುವ ಸವಾಲುಗಳ ಬಗ್ಗೆ ಮಾತನಾಡಿದ ಅವರು, ಅಂದು ನಾವು ಐಐಟಿ ಪದವಿ ಮುಗಿಸಿ ಹೊರಬಂದಾಗಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಮುಂದಿನ 10 ವರ್ಷಗಳಲ್ಲಿ ಏನಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇನ್ನು 40-50 ವರ್ಷಗಳಿಗೆ ಯೋಜನೆ ಹಾಕಿಕೊಳ್ಳುವುದು ದೂರದ ಮಾತು. ವಿಶ್ವದಲ್ಲಿನ ಆಗುಹೋಗುಗಳು ಬದಲಾಗುತ್ತಿರುವಾಗ ವೃತ್ತಿಪರರು ಕೂಡ ಅಭೂತಪೂರ್ವವಾಗಿ ಬದಲಾಗುತ್ತಿರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT