ಪಣಜಿ: ಗ್ಲಾಮರಸ್ ಉದ್ಯೋಗಗಳಿಗೆ ಐಐಟಿ ಪದವೀಧರರು ಮಾರು ಹೋಗಬಾರದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಸಲಹೆ ನೀಡಿದ್ದಾರೆ.
ಮುಂಬೈಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ 55ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ಐಐಟಿ ಪದವೀಧರರು ಗ್ಲಾಮರಸ್ ಉದ್ಯೋಗಗಳಿಗೆ ಮಾರು ಹೋಗಬಾರದು. ವಿಶ್ವಾದ್ಯಂತ ಇಂದು ಸವಾಲುಗಳು ಹೆಚ್ಚುತ್ತಿದ್ದು ಜೀವನಮಟ್ಟ ಸಂಕೀರ್ಣವಾಗುತ್ತಿದೆ. ಇಲ್ಲಿನ ಸವಾಲು ಮತ್ತು ಸಂಕೀರ್ಣತೆಯನ್ನು ಬಗೆಹರಿಸಲು ಉದ್ಯಮಶೀಲತೆ ಮತ್ತು ಬೌದ್ಧಿಕ ಶಕ್ತಿ ತೋರಿಸುವ ನೈತಿಕ ಜವಾಬ್ದಾರಿ ಐಐಟಿ ಪದವೀಧರರಿಗಿದೆ ಎಂದು ಹೇಳಿದರು.
ಇಂದಿನ ಯುವ ಪದವೀಧರರು ಎದುರಿಸುವ ಸವಾಲುಗಳ ಬಗ್ಗೆ ಮಾತನಾಡಿದ ಅವರು, ಅಂದು ನಾವು ಐಐಟಿ ಪದವಿ ಮುಗಿಸಿ ಹೊರಬಂದಾಗಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಮುಂದಿನ 10 ವರ್ಷಗಳಲ್ಲಿ ಏನಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಇನ್ನು 40-50 ವರ್ಷಗಳಿಗೆ ಯೋಜನೆ ಹಾಕಿಕೊಳ್ಳುವುದು ದೂರದ ಮಾತು. ವಿಶ್ವದಲ್ಲಿನ ಆಗುಹೋಗುಗಳು ಬದಲಾಗುತ್ತಿರುವಾಗ ವೃತ್ತಿಪರರು ಕೂಡ ಅಭೂತಪೂರ್ವವಾಗಿ ಬದಲಾಗುತ್ತಿರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos