ಹಾದಿಯಾ 
ದೇಶ

ಹಾದಿಯಾ ತನ್ನ ಪೋಷಕರ ಬಳಿ ಸುರಕ್ಷಿತಳಾಗಿದ್ದಾಳೆ: ರಾಷ್ಟ್ರೀಯ ಮಹಿಳಾ ಆಯೋಗ

ಕೇರಳ ಲವ್ ಜಿಹಾದ್ ಪ್ರಕರಣದಿಂದ ಇಡೀ ದೇಶದ ಗಮನ ಸೆಳೆದಿರುವ ಯುವತಿ ಹಾದಿಯಾ ಪೋಷಕರ ಬಳಿ ಸುರಕ್ಷಿತಳಾಗಿದ್ದಾಳೆಂದು ರಾಷ್ಟ್ರೀಯ ಮಹಿಳಾ ಆಯೋಗ ಸೋಮವಾರ ಹೇಳಿದೆ...

ಕೊಟ್ಟಾಯಂ: ಕೇರಳ ಲವ್ ಜಿಹಾದ್ ಪ್ರಕರಣದಿಂದ ಇಡೀ ದೇಶದ ಗಮನ ಸೆಳೆದಿರುವ ಯುವತಿ ಹಾದಿಯಾ ಪೋಷಕರ ಬಳಿ ಸುರಕ್ಷಿತಳಾಗಿದ್ದಾಳೆಂದು ರಾಷ್ಟ್ರೀಯ ಮಹಿಳಾ ಆಯೋಗ ಸೋಮವಾರ ಹೇಳಿದೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಉಸ್ತುವಾರಿ ಹೊತ್ತಿರುವ ರೇಖಾ ಶರ್ಮಾ ಅವರು, ಈಗಷ್ಟೇ ಹಾದಿಯಾಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಆಕೆ ಪೋಷಕರೊಂದಿಗೆ ಸಂತೋಷವಾಗಿ ಹಾಗೂ ಆರೋಗ್ಯವಾಗಿದ್ದಾಳೆ. ಯಾರೂ ಅವಳಿಗೆ ಹಿಂಸೆಯನ್ನು ನೀಡುತ್ತಿಲ್ಲ ಎಂದು ಹೇಳಿದ್ದಾರೆ. 
ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಕೇರಳ ಹೈ ಕೋರ್ಟ್ 4 ತಿಂಗಳ ಹಿಂದಷ್ಟೇ ಹಾದಿಯಾಳನ್ನು ಆಕೆಯ ಪೋಷಕರಾದ ಕೆ.ಎಂ. ಅಶೋಕನ್ ಮತ್ತು ಪೊನ್ನಮ್ಮ ಅವರ ವಶಕ್ಕೆ ನೀಡಿತ್ತು. 
ಹಾದಿಯಾಳನ್ನು ಗೃಹ ಬಂಧನದಲ್ಲಿ ಇಡುವ ಮೂಲಕ ಮಹಿಳಾ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕೇರಳದ ಕೆಲ ಮುಸ್ಲಿಂ ಸಂಘಟನೆಗಳು ಆರೋಪ ಮಾಡಿದ್ದವು. 
ಆ ಆರೋಪಗಳ ಹಿನ್ನಲೆಯಲ್ಲಿ ರೇಖಾ ಅವರು ಸೋಮವಾರ ಕೊಟ್ಟಾಯಂನಲ್ಲಿರುವ ಹಾದಿಯಾಳ ಮನೆಗೆ ಭೇಟಿನೀಡಿ ಹಾದಿಯಾಳೊಂದಿಗೆ ಮಾತುಕತೆ ನಡೆಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT