ರಾಹುಲ್ ಗಾಂಧಿ 
ದೇಶ

ಉನ್ನಾವೊ ಅತ್ಯಾಚಾರ ಸಂಸ್ತ್ರಸ್ತೆ ತಂದೆಯ ಮರಣದ ವಿರುದ್ಧವೂ ಪ್ರಧಾನಿ ಉಪವಾಸ ಮಾಡುವವರಿದ್ದಾರೆ: ರಾಹುಲ್ ವ್ಯಂಗ್ಯ

ಏ. 12ರಂದು ಪ್ರಧಾನಿ ಮೋದಿ ನಡೆಸಲು ಉದ್ದೇಶಿಸಿರುವ ಒಂದು ದಿನದ ಉಪವಾಸ ಸತ್ಯಾಗ್ರಹಹ ಕುರಿತು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಘಟಿಸಿದ ಉನ್ನಾವೊ.....

ನವದೆಹಲಿ: ಏ. 12ರಂದು ಪ್ರಧಾನಿ ಮೋದಿ ನಡೆಸಲು ಉದ್ದೇಶಿಸಿರುವ ಒಂದು ದಿನದ ಉಪವಾಸ ಸತ್ಯಾಗ್ರಹಹ ಕುರಿತು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಘಟಿಸಿದ ಉನ್ನಾವೊ ಸಾಮೂಹಿಕ ಅತ್ಯಾಚಾರದ ಹತ್ಯೆಯ ಬಗ್ಗೆಯೂ ಅವರು ಉಪವಾಸ ನಡೆಸುತ್ತಾರೆ ಎಂದರು.
"ಉತ್ತರ ಪ್ರದೇಶದಲ್ಲಿ ನಡೆಸ ಅತ್ಯಾಚಾರ ಸಂತ್ರಸ್ತೆ ತಂದೆಯ ಮೇಲಿನ ದೌರ್ಜನ್ಯವು ಮಾನವೀತೆಗೆ ಭಂಗ ತರುವಂತಹುದಾಗಿದೆ. ಮಹಿಳೆಯ ವಿರುದ್ಧದ ದೌರ್ಜನ್ಯಗಳ ಬಗ್ಗೆ ಕೂಡ ಪ್ರಧಾನಿ ಶೀಘ್ರದಲ್ಲೇ ಉಪವಾಸ ನಡೆಸುತ್ತಾರೆ.ಎಂದು ನಾವು ಭಾವಿಸುತ್ತೇವೆ, ಬಿಜೆಪಿ ಆಳ್ವಿಕೆಯ ಅಡಿಯಲ್ಲಿ ಅನ್ಯಾಯ ಮತ್ತು ಅರಾಜಕತೆ ಹೆಚ್ಚುತ್ತಿದೆ " ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಹೇಳಿದ್ದಾರೆ.
 23 ದಿನಗಳ ಸಂಸತ್‌ ಕಲಾಪ ಸಂಪೂರ್ಣ ವ್ಯರ್ಥವಾಗಲು ಕಾರಣವಾದ ಪ್ರತಿಪಕ್ಷಗಳ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಸದರು ನಡೆಸಲ್ಲ್ಲುದ್ದೇಶಿಸಿದ ಉಪವಾಸದಲ್ಲಿ ಪ್ರಧಾನಿ ಮೋದಿ ಸಹ ಭಾಗವಹಿಸಲಿದ್ದಾರೆ. ಅವರು ಗುರುವಾರ ಒಂದು ದಿನ ಉಪವಾಸ ನಡೆಸಲಿದ್ದಾರೆ.
ತನ್ನ ಮಗಳ ಮೇಲೆ ಉತ್ತರ ಪ್ರದೇಶ ಬಿಜೆಪಿ ಶಾಸಕ ಮತ್ತು ಸ್ನೇಹಿತರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯ ತಂದೆ ಮುಖ್ಯಮಂತ್ರಿ ಯೋಹ್ಗಿ ಆದಿತ್ಯನಾಥ್ ಮನೆ ಎದುರು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.  ಆಗ ಅವರನ್ನು ಪೋಲೀಸರು ಬಂಧಿಸಿದ್ದರು. ಹಾಗೆ ಪೋಲೀಸ್  ಕಸ್ಟಡಿಯಲ್ಲಿ  ಇರುವಾಗಲೇ ಆತ ನಿಧನರಾಗಿದ್ದರು.
 ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೇಂಗರ್ ಅವರು ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದ  ಮಹಿಳೆಯ ಕುಟುಂಬ ಮುಖ್ಯಮಂತ್ರಿ ನಿವಾಸದೆದುರು ಆತ್ಮಹತ್ಯೆಗೆ ಮುಂದಾದಾಗ ಸಂತ್ರಸ್ತೆಯ ತಣ್ದೆಯನ್ನು ಪೋಲೀಸರು ವಶಕ್ಕೆ ಪಡೆದಿದ್ದರು ಅಲ್ಲದೆ  ಶಾಸಕರ ಸಹಾಯಕರು, ಪೋಲೀಸರು ಅವರಿಗೆ ಮನಸೋ ಇಚ್ಚೆ ದಂಡಿಸಿದ್ದರು. 
ಸದ್ಯ ಪ್ರಕರಣ ಸಂಬಂಧ ಉತ್ತರ ಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಸ್ಥಾಪಿಸಿ ಸಂ<ತ್ರಸ್ತೆಯ ಆರೋಪಗಳ ಕುರಿತಂತೆ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT