ದೇಶ

ಈದ್ ಮಿಲಾದ್ ದಿನದಂದು ನೀತಿ ಆಯೋಗದ ಸಭೆಗೆ ಹೇಗೆ ಹೋಗಲಿ?: ಮಮತಾ ಬ್ಯಾನರ್ಜಿ

Srinivas Rao BV
ಕೋಲ್ಕತ್ತಾ: ಜೂ.16 ರಂದು ನಡೆಯಲಿರುವ ನೀತಿ ಆಯೋಗದ ಸಭೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗೈರಾಗಲಿದ್ದಾರೆ, ಇದಕ್ಕೆ ಕಾರಣವೇನೆಂದರೆ ಈದ್ ಮಿಲಾದ್.
ಈದ್ ಮಿಲಾದ್ ದಿನದಂದೇ ನೀತಿ ಆಯೋಗದ ಸಭೆ ನಿಗದಿಯಾಗಿದ್ದು, ಜೂ.16 ರಂದು ಈದ್ ಅಂಗವಾಗಿ ರಾಷ್ಟ್ರಾದ್ಯಂತ ರಜೆ ಘೋಷಿಸಲಾಗಿದೆ. ಈದ್ ಮಿಲಾದ್ ದಿನದಂದು ರಾಜ್ಯ ಬಿಟ್ಟು ಹೇಗೆ ಹೊರಗೆ ಹೋಗಲಿ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ನನಗೆ ಎಲ್ಲಾ ಹಬ್ಬಗಳೂ ಮುಖ್ಯ, ದುರ್ಗಾ ಪೂಜೆಯಂತೆಯೇ ಈದ್ ಮಿಲಾದ್ ಸಹ ಮುಖ್ಯ. ಹಬ್ಬದ ದಿನದಂದು ರಾಜ್ಯದ ಜನತೆಯನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 
SCROLL FOR NEXT