ಸಂಗ್ರಹ ಚಿತ್ರ 
ದೇಶ

ಮನೆಯೊಳಗೆ ಮಲಗಲು ಬಿಡಲ್ಲ ಎಂದದ್ದಕ್ಕೆ ತಂದೆಯನ್ನೇ ಜೀವಂತ ಸುಟ್ಟ!

ಮನೆಯೊಳಗೆ ಬರಲು ಅವಕಾಶ ನೀಡದ ತಂದೆಯನ್ನು ಮಗನೊಬ್ಬ ಜೀವಂತವಾಗಿ ಸುಟ್ಟಿರುವ ಘಟನೆ ತಮಿಳು ನಾಡಿನಲ್ಲಿ ನಡೆದಿದೆ.

ಚೆನ್ನೈ: ಮನೆಯೊಳಗೆ ಬರಲು ಅವಕಾಶ ನೀಡದ ತಂದೆಯನ್ನು ಮಗನೊಬ್ಬ ಜೀವಂತವಾಗಿ ಸುಟ್ಟಿರುವ ಘಟನೆ ತಮಿಳು ನಾಡಿನಲ್ಲಿ ನಡೆದಿದೆ.
ತಮಿಳು ನಾಡಿನ ರೋಯಪೆಟ್ಟಾದಲ್ಲಿ ನಡೆದ ಈ ಪ್ರಕರಣ್ದಲ್ಲಿ ಮಗ ತಂದೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ರೋಯಪೆಟ್ಟಾದಲ್ಲಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಾಸವಿದ್ದ ಇ.ಶಂಕರ್ (56) ಬೆಂಕಿಯಿಂದ ಸುಟ್ಟು ಸಾವನ್ನಪ್ಪಿದ್ದಾನೆ.
ಘಟನೆ ವಿವರ
ಶಂಕರ್ ಅವರಿಗೆ ಮೂವರು ಮಕ್ಕಳಿದ್ದು ಇದರಲ್ಲಿ ಒಬ್ಬ ಮಗನಿಗೆ ಮನೆಯಲ್ಲಿ ಮಲಗಲು ಅವಕಾಶ ನೀಡದ್ದಕ್ಕಾಗಿ ಮಕ್ಕಳು ತಂದೆಯ ನಡುವೆ ಜಗಳ ಪ್ರಾರಂಭವಾಗಿತ್ತು.ಶುಕ್ರವಾರ ಶಂಕರ್ ತಮ್ಮ ಮಗ ರಾಮಕೃಷ್ಣ ಜತೆ ಗಲಾಟೆ ಮಾಡಿಕೊಂಡಿದ್ದಾರೆ. ಕುಡಿತದ ಚಟವಿರುವ ನಿನಗೆ ಮನೆಯಲ್ಲಿ ಮಲಗಲು ಬಿಡುವುದಿಲ್ಲ ಎಂದು ಶಂಕರ್ ಹೇಳಿದ್ದಾರೆ.
ಮನೆಯಲ್ಲಿ ಮಾತಿನ ಚಕಮಕಿ ನಡೆದಿದ್ದು ಪಕ್ಕದ ಮನೆಯವರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಿಸಿದ್ದ ಝಾಮ್ ಬಜಾರ್ ಪೋಲೀಸರು ತಂದೆ-ಮಗನನ್ನು ಠಾಣೆಗೆ ಕರೆದೊಯ್ದು ಬುದ್ದಿ ಹೇಳಿ ಹಿಂದಕ್ಕೆ ಕಳಿಸಿದ್ದಾರೆ.
ಶುಕ್ರವಾರ ರಾತ್ರಿ ಮನೆಯ ಮೇಲಂತಸ್ಥಿನಲ್ಲಿ ಕಿರಿಯ ಮಗ, ಕೆಳಗೆ ತಂದೆ ಶಂಕರ್ ಮಲಗಿದ್ದರು. ರಾಮಕೃಷ್ಣ ಮನೆಯ ಹೊರಗೇ ಮಲಗಿದ್ದ. ಆದರೆ ನಡುರಾತ್ರಿಯ ವೇಳೆ ರಾಮಕೃಷ್ಣ ತಂದೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಸುಮಾರು ರಾತ್ರಿ 1.30ರ ವೇಳೆಗೆ ತಂದೆಯ ಅರಚಾಟ ಕೇಳಿದ ಕಿರಿಯ ಮಗ ಮೇಲಿನಿಂದ ಇಳಿದು ಬರಲು ತಂದೆ ಬೆಂಕಿಯಲ್ಲಿ ಸುಟ್ಟು ನರಳುತ್ತಿರುವುದು ಕಂಡಿದೆ. ಅದಾಗಲೇ ಶೇಕಡಾ 95ರಷ್ಟು  ಸುಟ್ಟು ಕರಕಲಾಗಿದ್ದ ಶಂಕರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೂ ಚಿಕಿತ್ಸೆ ಫಲಿಸಲ್ದೆ ಸಾವನ್ನಪ್ಪಿದ್ದಾರೆ.
ಘಟನೆ ಸಂಬ<ಧ ರಾಮಕೃಷ್ಣನನ್ನು ವಶಕ್ಕೆ ಪಡೆದು ಪೋಲೀಸರು ವಿಚಾರಿಸಲಾಗಿ ತಾನು ಪೆಟ್ರೋಲ್ ಖರೀದಿಸಿ ತಂದಿದ್ದು ಆ ರಾತ್ರಿ ಕಿಟಕಿ ಮೂಲಕ ತಂದೆಯ ಮೇಲೆ ಅದನ್ನು ಸುರಿದು ಬೆಂಕಿ ಹಚ್ಚಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT