ದೇಶ

ಮೀನು ಆಮದು ನಿಷೇಧ ತೆರವುಗೊಳಿಸುವಂತೆ ಗೋವಾ ಸರ್ಕಾರಕ್ಕೆ ಸಿಎಂ ಕುಮಾರಸ್ವಾಮಿ ಮನವಿ!

Shilpa D
ಪಣಜಿ: ಕರ್ನಾಟಕದ ಮೀನುಗಳ ಆಮದು ನಿಷೇಧವನ್ನು ತೆರವುಗೊಳಿಸಬೇಕು ಎಂದು ಸಿಎಂ ಕುಮಾರಸ್ವಾಮಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದ ಮೀನು ಬಳಕೆ ಮಾಡುವುದರಿಂದ ಕ್ಯಾನ್ಸರ್ ಭಯದಿಂದಾಗಿ, ನವೆಂಬರ್ 10 ರಂದು ಗೋವಾ ಸರ್ಕಾರ ಕರ್ನಾಟಕ ಮೀನಿನ ಮೇಲೆ ನಿಷೇಧ ಹೇರಿತ್ತು,  ಮೀನುಗಳ ಸಂಸ್ಕರಣೆಗೆ ಬಳಸುವ ರಾಸಾಯನಿಕದಿಂದಾಗಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದು ಹೇಳಲಾಗಿತ್ತು.
ಕರ್ನಾಟಕ ಮುಖ್ಯಮಂತ್ರಿ ಕುಮಾರ ಸ್ವಾಮಿ ನವೆಂಬರ್ 27 ರಂದು ತಮ್ಮ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಜ್ಯದ ಮೀನಿನ ಮೇಲೆ ಹೇರಿರುವ ನಿಷೇಧ ತೆರವುಗೊಳಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ  ತಿಳಿಸಿದ್ದಾರೆ. 
SCROLL FOR NEXT