ಸಂಗ್ರಹ ಚಿತ್ರ 
ದೇಶ

3 ತಿಂಗಳ ಸಂಬಳ ನೀಡಿ ಇಲ್ಲದಿದ್ದರೆ ಏ.1ರಿಂದ ವಿಮಾನ ಓಡಿಸಲ್ಲ; ಜೆಟ್ ಪೈಲಟ್‌ಗಳ ಬೆದರಿಕೆ

ಮೂರು ತಿಂಗಳಿನಿಂದ ಉಳಿಸಿಕೊಂಡಿರುವ ಸಂಬಳವನ್ನು ತಿಂಗಳ ಅಂತ್ಯದೊಳಗೆ ನೀಡಿ ಇಲ್ಲದಿದ್ದರೆ ಏಪ್ರಿಲ್ 1ರಿಂದ ವಿಮಾನವನ್ನು ಓಡಿಸುವುದಿಲ್ಲ ಎಂದು ಜೆಟ್ ಪೈಲಟ್ ಗಳು ಬೆದರಿಕೆ ಹಾಕಿದ್ದಾರೆ.

ನವದೆಹಲಿ: ಮೂರು ತಿಂಗಳಿನಿಂದ ಉಳಿಸಿಕೊಂಡಿರುವ ಸಂಬಳವನ್ನು ತಿಂಗಳ ಅಂತ್ಯದೊಳಗೆ ನೀಡಿ ಇಲ್ಲದಿದ್ದರೆ ಏಪ್ರಿಲ್ 1ರಿಂದ ವಿಮಾನವನ್ನು ಓಡಿಸುವುದಿಲ್ಲ ಎಂದು ಜೆಟ್ ಪೈಲಟ್ ಗಳು ಬೆದರಿಕೆ ಹಾಕಿದ್ದಾರೆ.
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೆಟ್ ಏರ್ವೇಸ್ ವಿಮಾನಯಾನ ಸಂಸ್ಥೆ, ತನ್ನ ಪೈಲಟ್ ಗಳಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಿಲ್ಲ. ಅಲ್ಲದೆ ವೈಮಾನಿಕ ಹಾರಾಟದ ವೆಚ್ಚವನ್ನು ಭರಿಸಲಾಗದೆ ವಿಮಾನಗಳ ಹಾರಾಟವನ್ನೇ ರದ್ದುಗೊಳಿಸುತ್ತಿದ್ದು, ಈ ಕುರಿತು ತುರ್ತು ಸಭೆ ನಡೆಸುವಂತೆ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ವಿಮಾನಯಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಜೆಟ್ ಏರ್ವೇಸ್ ವಿಮಾನ ಹಾರಾಟ ರದ್ದುಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿರುವ ಸುರೇಶ್ ಪ್ರಭು ಅವರು, ತುರ್ತು ಸಭೆ ನಡೆಸುವಂತೆ ವಿಮಾನಯಾನ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಮೂರು ತಿಂಗಳಿಂದ ವೇತನ ನೀಡ ಜೆಟ್ ಏರ್ವೇಸ್ ವಿರುದ್ಧ ಜೆಟ್​ ಏರ್​ವೇಸ್​​ ನಿರ್ವಹಣಾ ಇಂಜಿನಿಯರ್​ಗಳು ವಿಮಾನಯಾನ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು, ವಿಮಾನದ ಸುರಕ್ಷತೆ ಅಪಾಯದಲ್ಲಿದೆ ಎಂದು ಎಚ್ಚರಿಸಿದ್ದಾರೆ.
“ಕಳೆದ ಕೆಲ ತಿಂಗಳಿಂದ ನಮಗೆ ತೀವ್ರ ಹಣಕಾಸಿನ ಸಮಸ್ಯೆ ಎದುರದಾಗಿದೆ. ಇದರಿಂದ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಆರ್ಥಿಕ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಮಾನಸಿಕವಾಗಿ ಒತ್ತಡ ಉಂಟು ಮಾಡುತ್ತಿದೆ. ಹಾಗಾಗಿ, ವಿಮಾನದ ಸುರಕ್ಷತೆಗೆ ಕುತ್ತು ಎದುರಾಗಿದೆ,” ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಮಧ್ಯೆ, ಜೆಟ್‌ ಏರ್‌ವೇಸ್‌ ಮತ್ತೆ 4 ವಿಮಾನಗಳ ಹಾರಾಟವನ್ನು ಸೋಮವಾರ ರದ್ದುಗೊಳಿಸಿದ್ದು, ಒಟ್ಟು 41 ವಿಮಾನಗಳ ಹಾರಾಟ ಈ ತನಕ ಸ್ಥಗಿತವಾದಂತೆ ಆಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT