ನಾಗಲ್ಯಾಂಡ್ ಮುಖ್ಯಮಂತ್ರಿ 
ದೇಶ

206 ಹುದ್ದೆಗಳಿಗೆ 1200 ಅಭ್ಯರ್ಥಿಗಳ ಆಯ್ಕೆ, ನಾಗಲ್ಯಾಂಡ್ ಪೊಲೀಸ್ ನೇಮಕಾತಿ ಕರ್ಮಕಾಂಡ!

ಹಿಂಬಾಗಿಲ ಮೂಲಕ ನೇಮಕಾತಿ ಆರೋಪದ ಬೆನ್ನಲ್ಲೇ, ಹೊಸದಾಗಿ ಆಯ್ಕೆಯಾಗಿದ್ದ 1200 ಪೊಲೀಸರ ತರಬೇತಿಯನ್ನು ನಾಗಲ್ಯಾಂಡಿನ ನೀಫಿಯು ರಿಯೊ ಸರ್ಕಾರ ಮುಂದೂಡಿದೆ.

ಗುವಾಹಟಿ: ಹಿಂಬಾಗಿಲ ಮೂಲಕ ನೇಮಕಾತಿ ಆರೋಪದ ಬೆನ್ನಲ್ಲೇ, ಹೊಸದಾಗಿ ಆಯ್ಕೆಯಾಗಿದ್ದ 1200 ಪೊಲೀಸರ ತರಬೇತಿಯನ್ನು ನಾಗಲ್ಯಾಂಡಿನ ನೀಫಿಯು ರಿಯೊ ಸರ್ಕಾರ ಮುಂದೂಡಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಬುಡಕಟ್ಟು ಸಂಘಟನೆಯೊಂದು  ದಿಮಾಪುರ ಜಿಲ್ಲೆಯ ಚುಮುಕೆದಿಮಾದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳನ್ನು ರಕ್ಷಿಸುವಂತೆ ಈ ಹಿಂದೆ ಒತ್ತಡ ಹಾಕಿತ್ತು. 

ಆದಾಗ್ಯೂ, ಸರ್ಕಾರ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹಾಗೂ ಬೆಟಾಲಿಯನ್ ಕಮಾಂಡೆಟ್ ಗಳಿಗೆ ನೀಡಿರುವ ಸಂದೇಶದಲ್ಲಿ ಯಾವುದೇ ವಿವಾದ ಬಗ್ಗೆ ಉಲ್ಲೇಖ ಮಾಡಿಲ್ಲ.

ಬ್ಯಾರಕ್ ಗಳ ವ್ಯವಸ್ಥೆ,ಮತ್ತಿತರ ತರಬೇತಿ ಮೂಲಸೌಕರ್ಯಗಳು ಪೂರ್ಣಗೊಳ್ಳದ ಕಾರಣ ಮುಂದಿನ ಆದೇಶದವರೆಗೂ ಪೊಲೀಸ್ ತರಬೇತಿ ಸೆಂಟರ್ ಮತ್ತು ಎನ್ ಎಪಿಟಿಸಿಗಳಲ್ಲಿ ಮೂಲ ತರಬೇತಿಗಾಗಿ ಇಂದು ಆರ್ ಸಿಯನ್ನು ಕಳುಹಿಸದಂತೆ ಎಲ್ಲಾ ಘಟಕಗಳಿಗೆ  ನಾಗಲ್ಯಾಂಡ್ ಪೊಲೀಸ್ ಮಹಾನಿರ್ದೇಶಕರು ನಿರ್ದೇಶಿಸಿದ್ದಾರೆ. ಅಲ್ಲದೇ, ತರಬೇತಿ ಕೇಂದ್ರದ ಕಿರು ಪಟ್ಟಿಯಲ್ಲಿನ ವರದಿಗಾಗಿ ಆರ್ ಸಿಯನ್ನು ಇಡದಂತೆಯೂ ಸೂಚಿಸಲಾಗಿದೆ. 

ಇದಕ್ಕೂ ಮುಂಚೆ 206 ಹುದ್ದೆಗಳ ನೇಮಕಾತಿಗಾಗಿ ಜಾಹಿರಾತು ನೀಡಿ  1200  ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 206 ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುತ್ತಿದ್ದು, ಉಳಿದಿರುವ ಇತರರನ್ನೂ ರಕ್ಷಿಸಿ ಎಂದು ಚುಮುಕದಿಮಾದ ನಾಗ ಬುಡಕಟ್ಟು ಒಕ್ಕೂಟ  ಒತ್ತಾಯಿಸಿತ್ತು. ಹೆಚ್ಚುವರಿಯಾಗಿ 996 ಅಭ್ಯರ್ಥಿಗಳನ್ನು ಹೇಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ದಿಮಾಪುರ ನಾಗ ವಿದ್ಯಾರ್ಥಿ ಒಕ್ಕೂಟ ಕೂಡಾ ಪ್ರಶ್ನಿಸಿತ್ತು. 

ಹಿಂಬಾಗಿಲ ಮೂಲಕ ನೇಮಕಾತಿ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಚರ್ಚಿಸಲು ಇದೇ 22 ರಂದು ನಾಗ ವಿದ್ಯಾರ್ಥಿ ಫೆಡರೇಷನ್ ತನ್ನೆಲ್ಲಾ ಒಕ್ಕೂಟದೊಂದಿಗೆ ಸಭೆಯನ್ನು ಆಯೋಜಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಣೇಶೋತ್ಸವಕ್ಕೆ ಅನಗತ್ಯ ನಿರ್ಬಂಧ ಇಲ್ಲ, ಆದ್ರೆ ಅಶಾಂತಿ ಸೃಷ್ಟಿಸಲು ಬಿಜೆಪಿ ಕುತಂತ್ರ: CM ಡಿ.ಕೆ ಶಿವಕುಮಾರ್ ಕಿಡಿ

ಟಿ.ನರಸೀಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ: ಆರ್ ಅಶೋಕ್, ಯದುವೀರ್, ಪ್ರತಾಪ್ ಸಿಂಹ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

India vs Afghanistan: ಅಭಿಷೇಕ್ ಅಬ್ಬರಕ್ಕೆ ಅಫ್ಘಾನ್ ಧೂಳೀಪಟ; ಮೊದಲ T20ಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು

ಹಾವೇರಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿ ದೂರ; 'ಮುಂದಿನ ಜನ್ಮ ಇದ್ದರೆ ನಿನ್ನವನಾಗಿ ಹುಟ್ಟುವೆ' ಎಂದು ಪೋಸ್ಟ್ ಹಾಕಿ ಯುವಕ ಆತ್ಮಹತ್ಯೆ!

ಸರ್ಕಾರಿ ಸರ್ಕ್ಯೂಟ್‌ ಹೌಸ್‌ನಲ್ಲಿ 'ನೀಲಿ ಚಿತ್ರನಟಿ' ವಾಸ; ರೂರ್ಕೆಲಾದಲ್ಲಿ ಸಂಚಲನ, ಪೊಲೀಸ್ ತನಿಖೆ