ದೇಶ

ಕೇರಳ: ರೈಲಿಗೆ ಸಿಕ್ಕಿ ಆನೆಗಳು ಸಾಯುವುದನ್ನು ತಡೆಗಟ್ಟಲು ಹಳಿಗೆ ಬೇಲಿ ಹಾಕಲು ಅರಣ್ಯಾಧಿಕಾರಿಗಳು ಮುಂದು

Harshavardhan M

ಕೊಯಮತ್ತೂರು: ರೈಲಿಗೆ ಸಿಕ್ಕಿ ಆನೆಗಳು ಮೃತಪಡುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ- ತಮಿಳುನಾಡು ಅರಣ್ಯಾಧಿಕಾರಿಗಳು ಮತ್ತು ರೈಲ್ವೆ ಇಲಾಖೆ ಪರಿಹಾರ ಕಂಡುಕೊಂಡಿದ್ದಾರೆ. ಕಾಂಜಿಕ್ಕೋಡ್ ಮತ್ತು ಮದುಕ್ಕರೈ ರೈಲುಮಾರ್ಗದಲ್ಲಿ ಆನೆಗಳು ರೈಲ್ವೇ ಹಳಿ ಕ್ರಾಸ್ ಮಾಡದಂತೆ ಬೇಲಿಯನ್ನು ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

ರೈಲ್ವೇ ಹಳಿಗಳಿಗೆ ಬೇಲಿ ಹಾಕುವುದರಿಂದ ಆನೆಗಳನ್ನು ರೈಲ್ವೇ ಹಳಿಯಿಂದ ದೂರವಿಡಬಹುದು ಎನ್ನುವುದು ಕರ್ನಾಟಕದ ನಾಗರಹೊಳೆಯಲ್ಲಿನ ರೈಲು ಬೇಲಿಯನ್ನು ಕೇರಳ ಅರಣ್ಯಾಧಿಕಾರಿಗಳು ಉದಾಹರಿಸಿದ್ದಾರೆ.

ಸುಮಾರು 25 ಕಿ.ಮೀ ಉದ್ದದ ರೈಲು ಮಾರ್ಗದಲ್ಲಿ ಬೇಲಿ ಹಾಕಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಈ ಮಾರ್ಗದಲ್ಲಿ ರಾತ್ರಿಯ ರೈಲುಪ್ರಯಾಣವನ್ನು ನಿರ್ಬಂಧಿಸುವುದೇ ಪರಿಹಾರ ಎನ್ನುವುದನ್ನು ಪರಿಸರಪ್ರೇಮಿಗಳು ಪುನರುಚ್ಛರಿಸಿದ್ದಾರೆ.

SCROLL FOR NEXT