ಗಸ್ತು ಪಡೆಯ ನೌಕೆ 
ದೇಶ

ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಯುವತಿ: ಕೊಚ್ಚಿ ನೌಕಾ ದಳ ಸಿಬ್ಬಂದಿಯಿಂದ ರಕ್ಷಣೆ

ಪೆಂಡುರುತಿ ಸೇತುವೆಯಿಂದ ಒಂದಷ್ಟು ದೂರದಲ್ಲಿ ನದಿ ಸಮುದ್ರವನ್ನು ಸೇರುತ್ತಲಿತ್ತು. ಯುವತಿ ನೀರಿನೊಂದಿಗೆ ಸಮುದ್ರದತ್ತ ಸಾಗುವುದನ್ನು ಕಂಡ ಇಬ್ಬರು ನೌಕಾದಳ ಸಿಬ್ಬಂದಿ ಒಡನೆಯೇ ನೀರಿಗೆ ಹಾರಿದ್ದರು.

ಕೊಚ್ಚಿ: ಕೊಚ್ಚಿ ನಿವಾಸಿ 26ರ ಹರೆಯದ ಅಕ್ಷಮಾ ಪ್ರದೀಪ್ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ನಗರದ ವೆಂಡುರುತಿ ಸೇತುವೆಯಿಂದ ಹಾರಿದ್ದಳು. ಇದು ಸೇತುವೆಯನ್ನು ಹಾದುಹೋಗುತ್ತಿದ್ದ ನೌಕಾದಳ ಗಸ್ತುಪಡೆಯ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿತ್ತು. 

ಪೆಂಡುರುತಿ ಸೇತುವೆಯಿಂದ ಒಂದಷ್ಟು ದೂರದಲ್ಲಿ ನದಿ ಸಮುದ್ರವನ್ನು ಸೇರುತ್ತಲಿತ್ತು. ಯುವತಿ ನೀರಿನೊಂದಿಗೆ ಸಮುದ್ರದತ್ತ ಸಾಗುವುದನ್ನು ಕಂಡ ಇಬ್ಬರು ನೌಕಾದಳ ಸಿಬ್ಬಂದಿ ಒಡನೆಯೇ ಪ್ರಾಣದ ಹಂಗು ತೊರೆದು ನೀರಿಗೆ ಹಾರಿದ್ದರು.

ನೀರಿನ ಸೇಳೆತ ತೀವ್ರವಾಗಿದ್ದರೂ ಲೆಕ್ಕಿಸದೇ ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ. ಯುವತಿಯನ್ನು ನೌಕಾದಳದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT