ಶಸ್ತ್ರಾಸ್ತ್ರ ಪತ್ತೆಯಾದ ಬೋಟ್ 
ದೇಶ

ರಾಯಘಡ ಬೀಚ್ ನಲ್ಲಿ ಪತ್ತೆಯಾದ ಶಂಕಿತ ಬೋಟ್ ಆಸಿಸ್ ಮಹಿಳೆಗೆ ಸೇರಿದ್ದು; ಭಯೋತ್ಪಾದಕ ಕೃತ್ಯ ಭಯ ಬೇಡ: 'ಮಹಾ' ಸರ್ಕಾರ

ಶಸ್ತ್ರಾಸ್ತ್ರಗಳ ಸಹಿತ ಮಹಾರಾಷ್ಟ್ರದ ರಾಯಘಡ ಬೀಚ್ ನಲ್ಲಿ ಪತ್ತೆಯಾಗಿದ್ದ ಶಂಕಿತ ವಿಹಾರ ಬೋಟ್ ಆಸ್ಟ್ರೇಲಿಯಾ ಮಹಿಳೆಗೆ ಸೇರಿದ್ದಾಗಿದ್ದು, ಭಯೋತ್ಪಾದಕ ಕೃತ್ಯ ಭಯ ಬೇಡ ಎಂದು ಮಹಾರಾಷ್ಟ್ರ ಸರ್ಕಾರ ಸ್ಪಷ್ಟಪಡಿಸಿದೆ.

ಮುಂಬೈ: ಶಸ್ತ್ರಾಸ್ತ್ರಗಳ ಸಹಿತ ಮಹಾರಾಷ್ಟ್ರದ ರಾಯಘಡ ಬೀಚ್ ನಲ್ಲಿ ಪತ್ತೆಯಾಗಿದ್ದ ಶಂಕಿತ ವಿಹಾರ ಬೋಟ್ ಆಸ್ಟ್ರೇಲಿಯಾ ಮಹಿಳೆಗೆ ಸೇರಿದ್ದಾಗಿದ್ದು,  ಭಯೋತ್ಪಾದಕ ಕೃತ್ಯ ಭಯ ಬೇಡ ಎಂದು ಮಹಾರಾಷ್ಟ್ರ ಸರ್ಕಾರ ಸ್ಪಷ್ಟಪಡಿಸಿದೆ.

ಮುಂಬೈ ಬಳಿಯ ರಾಯಘಡ ಕರಾವಳಿಗೆ ತೇಲಿ ಬಂದಿದ್ದ 16 ಮೀಟರ್ ಉದ್ದದ ವಿಹಾರ ನೌಕೆಯು ಆಸ್ಟ್ರೇಲಿಯಾದ ಮಹಿಳೆಯೊಬ್ಬರ ಒಡೆತನದ್ದಾಗಿದ್ದು, ಇದು ಯಾವುದೇ ಭಯೋತ್ಪಾದಕ ಕೃತ್ಯವಲ್ಲ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. 

ಈ ಕುರಿತು ಸ್ವತಃ ಗೃಹ ಖಾತೆಯನ್ನು ಹೊಂದಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಮಾಹಿತಿ ನೀಡಿದ್ದು, 'ನೌಕೆಯಲ್ಲಿ ಮೂರು ಎಕೆ -47 ರೈಫಲ್‌ಗಳು ಮತ್ತು ಬುಲೆಟ್‌ಗಳು ಪತ್ತೆಯಾಗಿದ್ದರಿಂದ ಇದು ಉಗ್ರರ ಸಂಚಿರಬಹುದೆಂದು ಶಂಕಿಸಲಾಗಿತ್ತು. ಹಡಗಿನ ಮಾಲೀಕರು ಆಸ್ಟ್ರೇಲಿಯಾದ ಮಹಿಳೆಯಾಗಿದ್ದು, ಅವರ ಪತಿ ಆಕೆಯ ಪತಿ ಜೇಮ್ಸ್ ಹರ್ಬರ್ಟ್ ಬೋಟ್‌ನ ಕ್ಯಾಪ್ಟನ್ ಎಂದು ವಿಧಾನಸಭೆಗೆ ತಿಳಿಸಿದ್ದಾರೆ.

‘ಸದ್ಯದ ಮಾಹಿತಿ ಪ್ರಕಾರ, ಭಯೋತ್ಪಾದಕ ಕೃತ್ಯವೆಂದು ಹೇಳಲು ಬರುವುದಿಲ್ಲ. ಆದರೆ, ತನಿಖೆ ನಡೆಯುತ್ತಿದೆ. ಯಾವುದೇ ಕೋನವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ನಾನು ಪ್ರಾಥಮಿಕ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳುತ್ತಿದ್ದೇನೆ. ಸ್ಥಳೀಯ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳವು ತನಿಖೆ ನಡೆಸುತ್ತಿದೆ. ನಾಲ್ಕು ಮೀಟರ್ ಅಗಲವಿರುವ ಈ ವಿಹಾರ ನೌಕೆ ಜೂನ್‌ನಲ್ಲಿ ಮಸ್ಕತ್‌ನಿಂದ ಯುರೋಪ್‌ಗೆ ತೆರಳುತ್ತಿದ್ದಾಗ ಹವಾಮಾನ ವೈಪರೀತ್ಯಕ್ಕೆ ಸಿಲುಕಿತು. ಎಂಜಿನ್ ದೋಷ ಕಂಡು ಬಂದ ನಂತರ ಆಸ್ಟ್ರೇಲಿಯಾದ ದಂಪತಿ ಅದನ್ನು ಅಲ್ಲಿಯೇ ಬಿಟ್ಟು ಕೊರಿಯನ್ ಬೋಟ್ ಮೂಲಕ ಅವರನ್ನು ರಕ್ಷಿಸಿ ರವಾನಿಸಲಾಗಿದೆ. ಆಂದಿನಿಂದ ಈ ಬೋಟ್ ಸಮುದ್ರದಲ್ಲೇ ಇದ್ದು, ಇದೀಗ ಹರಿಹರೇಶ್ವರ ಬೀಚ್ ತಲುಪಿದೆ ಎಂದು ಅವರು ಹೇಳಿದ್ಧಾರೆ.

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವನ್ನು (ಎಟಿಎಸ್) ಕೆಲಸಕ್ಕೆ ನಿಯೋಜಿಸಲಾಗಿದೆ ಮತ್ತು "ಅಗತ್ಯವಿದ್ದರೆ" ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗುವುದು. ಎಟಿಎಸ್ ಕೂಡ ಅದರ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅಗತ್ಯವಿದ್ದರೆ ಹೆಚ್ಚುವರಿ ಪಡೆಯನ್ನು ಸಹ ನಿಯೋಜಿಸಲಾಗುವುದು. ಹೇರಳವಾದ ಎಚ್ಚರಿಕೆಯ ನಿಯಮಗಳ ಪ್ರಕಾರ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಪ್ರಕರಣ ಕುರಿತಂತೆ ತನಿಖೆ ನಡೆಸುವಂತೆ ರಾಯಗಡದ ಶಾಸಕಿ ಅದಿತಿ ತತ್ಕರೆ ಕೋರಿದ ನಂತರ, ಪ್ರಾಥಮಿಕ ಮಾಹಿತಿ ಆಧರಿಸಿ ಭಯೋತ್ಪಾದನೆಯ ಕೃತ್ಯವೆಂದು ಹೇಳಲಾಗದು. ಆದರೆ, ವಿಹಾರ ನೌಕೆ ಏಕೆ ಶಸ್ತ್ರಾಸ್ತ್ರಗಳನ್ನು ಹೊಂದಿತ್ತು ಎಂಬುದು ಸ್ಪಷ್ಟವಾಗಿಲ್ಲ ಎಂದು ಫಡ್ನವಿಸ್ ಹೇಳಿದರು.

ಈ ಮಧ್ಯೆ, ಒಮನ್ ಕರಾವಳಿಯಲ್ಲಿ ಜೂನ್‌ನಲ್ಲಿ ಹಡಗಿನ ಸಿಬ್ಬಂದಿಯನ್ನು ರಕ್ಷಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT