ಬಿಎಂಸಿ 
ದೇಶ

ಬಿಎಂಸಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮತ 'ತಿನ್ನಲು' ಎಎಪಿ ಸ್ಪರ್ಧಿಸಬೇಕು: ಮಹಾ ಬಿಜೆಪಿ

ಗುಜರಾತ್ ಚುನಾವಣೆಯ ಫಲಿತಾಂಶದಿಂದ ಪ್ರೇರಿತವಾಗಿರುವ ಮಹಾರಾಷ್ಟ್ರ ಬಿಜಪಿ, ಮುಂಬರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ಪ್ರತಿಪಕ್ಷಗಳ ಮತ 'ತಿನ್ನಲು' ಆಮ್ ಆದ್ಮಿ ಪಕ್ಷ ಸ್ಪರ್ಧಿಸಬೇಕು ಎಂದು...

ಮುಂಬೈ: ಗುಜರಾತ್ ಚುನಾವಣೆಯ ಫಲಿತಾಂಶದಿಂದ ಪ್ರೇರಿತವಾಗಿರುವ ಮಹಾರಾಷ್ಟ್ರ ಬಿಜಪಿ, ಮುಂಬರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ಪ್ರತಿಪಕ್ಷಗಳ ಮತ 'ತಿನ್ನಲು' ಆಮ್ ಆದ್ಮಿ ಪಕ್ಷ ಸ್ಪರ್ಧಿಸಬೇಕು ಎಂದು ಬಯಸುತ್ತಿದೆ.

ಬಿಎಂಸಿ ಚುನಾವಣೆಯಲ್ಲಿ ತಮ್ಮ ಮುಂದಿನ ತಕ್ಷಣದ ಎದುರಾಳಿ ಎಂದರೆ ಎಎಪಿ ಎಂದು ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಆಶಿಶ್ ಶೇಲಾರ್ ಅವರು ಹೇಳಿದ್ದಾರೆ.

ಗುಜರಾತ್‌ನಲ್ಲಿ ಬಿಜೆಪಿಯ ಪ್ರಚಂಡ ಮತ್ತು ಐತಿಹಾಸಿಕ ವಿಜಯದ ಕುರಿತು ಪ್ರತಿಕ್ರಿಯಿಸಿದ ಮುಂಬೈ ಬಿಜೆಪಿ ಘಟಕದ ಅಧ್ಯಕ್ಷ ಆಶಿಶ್ ಶೆಲಾರ್ ಅವರು ತಮ್ಮ ತಕ್ಷಣದ ಪ್ರತಿಸ್ಪರ್ಧಿ ಎಎಪಿ ಎಂದಿದ್ದಾರೆ.

“ಗುಜರಾತ್ ಚುನಾವಣೆಯಲ್ಲಿ ಎಎಪಿ ಪಡೆದ ಮತಗಳು ಮತ್ತು ಸ್ಥಾನಗಳನ್ನು ಪಡೆದ ರೀತಿ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಗೆಲುವು ಬಿಎಂಸಿ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಎದುರಾಳಿ ಎಎಪಿ ಮಾತ್ರ ಎಂದು ತೋರಿಸುತ್ತಿದೆ. ಮುಂಬೈನ ಇತರ ಪಕ್ಷಗಳಿಗೆ ಈಗ ಯಾವುದೇ ಅಸ್ತಿತ್ವ ಇಲ್ಲ” ಎಂದು ಅವರು ಹೇಳಿದ್ದಾರೆ.

ಬಿಎಂಸಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಯು ಮಹಾ ವಿಕಾಸ್ ಅಘಾಡಿ ವಿರುದ್ಧ ಮುಖ್ಯವಾಗಿ ಶಿವಸೇನೆಯ ವಿರುದ್ಧ ಹೋರಾಡಬೇಕಾಗಿದೆ. ಸೇನೆಯು 1997 ರಿಂದ ಕಳೆದ 25 ವರ್ಷಗಳಿಂದ ಬಿಎಂಸಿಯನ್ನು ಆಳುತ್ತಿದೆ. 2017 ರಲ್ಲಿ, ಬಿಜೆಪಿ 83 ಸ್ಥಾನಗಳನ್ನು ಗೆಲ್ಲುವ ಮೂಲಕ ಶಿವಸೇನೆಗೆ ಕಠಿಣ ಸ್ಪರ್ಧೆ ನೀಡಿತ್ತು. 227 ಸದಸ್ಯ ಬಲದ ಬಿಎಂಸಿಯಲ್ಲಿ ಶಿವಸೇನೆ 87 ಸ್ಥಾನಗಳನ್ನು ಗೆದ್ದಿತ್ತು.

ಆದರೆ ಈ ಬಾರಿ ಗುಜರಾತ್‌ನಲ್ಲಿ ಎಎಪಿ ಕಾಂಗ್ರೆಸ್‌ನ ಗಮನಾರ್ಹ ಮತಗಳನ್ನು ಪಡೆಯುವ ಮೂಲಕ 75 ಸ್ಥಾನಗಳ ಫಲಿತಾಂಶಗಳ ಮೇಲೆ ಪರಿಣಾಮ ಬೀರಿದೆ. ಇದು ಬಿಜೆಪಿಗೆ ನೇರವಾಗಿ ಲಾಭವಾಯಿತು. ನಾವು ಮುಂಬೈನಲ್ಲಿ ಅದೇ ತಂತ್ರವನ್ನು ಬಳಸಲು ಬಯಸುತ್ತೇವೆ. ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸಲು ಎಎಪಿ ಮತ್ತು ಎಂಎನ್‌ಎಸ್ ಗೆ ಬೆಂಬಲ ನೀಡುತ್ತೇವೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 ವಿಶ್ವಕಪ್ 2026: ವಿಂಡೀಸ್ ವಿರುದ್ಧ 196 ರನ್ ದಾಖಲೆಯ ರನ್ ಚೇಸ್; ಸೆಮಿಫೈನಲ್‌ಗೆ ಭಾರತ ಎಂಟ್ರಿ!

ಒಂದೇ ದಾಳಿಯಲ್ಲಿ ಖಮೇನಿ ಸೇರಿ 48 ಇರಾನಿನ ನಾಯಕರ ಹತ್ಯೆ: ಟ್ರಂಪ್ ಘೋಷಣೆ

ಕನ್ನಡಿಗರ ರಕ್ಷಣೆ ನಮ್ಮ ಆದ್ಯತೆ: ಸಹಾಯವಾಣಿ ಪ್ರಾರಂಭಿಸಿದ ರಾಜ್ಯ ಸರ್ಕಾರ! ಮಾಹಿತಿ ಇಲ್ಲಿದೆ...

ನಮ್ಮ ಪ್ರತೀಕಾರ ಭೀಕರವಾಗಿರುತ್ತೇ: ಖಮೇನಿ ಸಾವಿನ ಬೆನ್ನಲ್ಲೇ ಜಮ್ಕರನ್ ಮಸೀದಿ ಮೇಲೆ ಕೆಂಪು ಧ್ವಜ ಹಾರಾಟ, ಇಸ್ರೇಲ್ ಕಟ್ಟಡಗಳು ಧ್ವಂಸ!

ಸೆಮಿಸ್ ನಿರ್ಣಾಯಕ ಪಂದ್ಯದಲ್ಲಿ ಭಾರತ ಕಳಪೆ ಫೀಲ್ಡಿಂಗ್; 195 ರನ್ ಬಾರಿಸಿದ ವೆಸ್ಟ್ ಇಂಡೀಸ್!

SCROLL FOR NEXT