ಮುಂಬೈ: ಮುಂಬೈ ಪೊಲೀಸರ ವಿಶೇಷ ತನಿಖಾ ತಂಡ(ಎಸ್ಐಟಿ) ಐಐಟಿ ಬಾಂಬೆ ವಿದ್ಯಾರ್ಥಿ ದರ್ಶನ್ ಸೋಲಂಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆತನ ಬ್ಯಾಚ್ಮೇಟ್ನನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಅರ್ಮಾನ್ ಖತ್ರಿ ಎಂದು ಗುರುತಿಸಲಾಗಿದೆ. ಖತ್ರಿ ಹಾಗೂ ಸೋಲಂಕಿ ಇಬ್ಬರೂ ಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಾಸ್ಟೆಲ್ನ ಒಂದೇ ಮಹಡಿಯಲ್ಲಿ ವಾಸಿಸುತ್ತಿದ್ದರು ಮತ್ತು ಇಬ್ಬರೂ ಬ್ಯಾಚ್ಮೇಟ್ಗಳು ಎಂದು ಅವರು ಹೇಳಿದ್ದಾರೆ.
ಮಾರ್ಚ್ 3 ರಂದು ಎಸ್ಐಟಿ ವಶಪಡಿಸಿಕೊಂಡ ಸೂಸೈಡ್ ನೋಟ್ನಲ್ಲಿ, "ಅರ್ಮಾನ್ ನನ್ನನ್ನು ಕೊಂದಿದ್ದಾನೆ" ಎಂದು ಸೋಲಂಕಿ ಉಲ್ಲೇಖಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಜರಾತ್ನ ಅಹಮದಾಬಾದ್ ಮೂಲದ, ಬಿ ಟೆಕ್(ಕೆಮಿಕಲ್) ಕೋರ್ಸ್ನ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ ಸೋಲಂಕಿ ಕಳೆದ ಫೆಬ್ರವರಿ 12 ರಂದು ಉಪನಗರ ಪೊವೈನಲ್ಲಿರುವ ಐಐಟಿಬಿ ಕ್ಯಾಂಪಸ್ನಲ್ಲಿರುವ ಹಾಸ್ಟೆಲ್ ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.