ಆರೋಪಿ ಮಿಹಿರ್ ಶಾ ಬಂಧನ TNIE
ದೇಶ

BMW ಹಿಟ್ ಅಂಡ್ ರನ್ ಕೇಸ್: ಎರಡು ಬಾರ್‌ಗಳಲ್ಲಿ ವಿಪರೀತ ಮದ್ಯ ಸೇವಿಸಿದ್ದ ಮಿಹಿರ್ ಶಾ

"ತನಿಖೆಯ ಸಮಯದಲ್ಲಿ, ಬಂಧಿತ ಆರೋಪಿ ಮಿಹಿರ್ ಶಾ, ಅಪಘಾತಕ್ಕೂ ಮುನ್ನ ಮದ್ಯ ಸೇವಿಸಿರುವುದು ಕಂಡುಬಂದಿದೆ. ಘಟನೆಯ ರಾತ್ರಿ ಎರಡು ವಿಭಿನ್ನ ಸ್ಥಳಗಳಲ್ಲಿರುವ ಬಾರ್ ಗಳಲ್ಲಿ ಅವರು ಮದ್ಯ ಸೇವಿಸಿದ್ದಾರೆ."

ಮುಂಬೈ: ವರ್ಲಿ BMW ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಘಟನೆ ನಡೆದ ರಾತ್ರಿ ಬೇರೆ ಬೇರೆ ಸ್ಥಳಗಳಲ್ಲಿರುವ ಎರಡು ಬಾರ್ ಗಳಲ್ಲಿ ವಿಪರೀತ ಮದ್ಯ ಸೇವಿಸಿದ್ದರು ಎಂದು ಮುಂಬೈ ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.

ಮುಂಬೈ ಪೊಲೀಸರ ಪ್ರಕಾರ, "ತನಿಖೆಯ ಸಮಯದಲ್ಲಿ, ಬಂಧಿತ ಆರೋಪಿ ಮಿಹಿರ್ ಶಾ, ಅಪಘಾತಕ್ಕೂ ಮುನ್ನ ಮದ್ಯ ಸೇವಿಸಿರುವುದು ಕಂಡುಬಂದಿದೆ. ಘಟನೆಯ ರಾತ್ರಿ ಎರಡು ವಿಭಿನ್ನ ಸ್ಥಳಗಳಲ್ಲಿರುವ ಬಾರ್ ಗಳಲ್ಲಿ ಅವರು ಮದ್ಯ ಸೇವಿಸಿದ್ದಾರೆ."

ಜುಹು ಪ್ರದೇಶದಲ್ಲಿರುವ ವೈಸ್ ಗ್ಲೋಬಲ್ ತಪಸ್ ಬಾರ್‌ನಲ್ಲಿ ಮದ್ಯ ಸೇವಿಸಿದ ಬಳಿಕ ಆರೋಪಿ ಮಿಹಿರ್ ಶಾ ಮಲಾಡ್ ಮತ್ತು ಬೊರಿವಲಿ ನಡುವಿನ ಮತ್ತೊಂದು ಸ್ಥಳದಲ್ಲಿರುವ ಬಾರ್ ನಲ್ಲಿ ಮದ್ಯ ಸೇವಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಆರೋಪಿ ಚಾಲಕ ರಾಜಋಷಿ ರಾಜೇಂದ್ರ ಸಿಂಗ್ ಬಿಡಾವತ್ ವಿಚಾರಣೆ ನಡೆಸಿದಾಗ, ಘಟನೆಯ ದಿನ ಭಾನುವಾರದಂದು ಅವರು ಮರೈನ್ ಡ್ರೈವ್‌ಗೆ ಭೇಟಿ ನೀಡಲು ಬಂದಿದ್ದರು" ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಚಾಲಕ ರಾಜಋಷಿ ರಾಜೇಂದ್ರ ಸಿಂಗ್ ಕಾರನ್ನು ಬೋರಿವಲಿಯಿಂದ ಮರೀನ್ ಡ್ರೈವ್‌ಗೆ ಕೊಂಡೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅವರು ರೈನ್ ಡ್ರೈವ್‌ಗೆ ತಲುಪಿದ ನಂತರ, ಮಿಹಿರ್ ಶಾ, ಕಾರು ಚಲಾಯಿಸಲು ಚಾಲಕನಿಂದ ಬಲವಂತವಾಗಿ ಕಾರಿನ ಕೀಗಳನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ.

ಏತನ್ಮಧ್ಯೆ, ಹಿಂದಿನ ದಿನ ವರ್ಲಿ ಹಿಟ್ ಅಂಡ್ ರನ್ ಪ್ರಕರಣದ ಈ ಇಬ್ಬರೂ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT