ಅಗ್ನಿ ದುರಂತ ನಡೆದ ಸ್ಥಳ  online desk
ದೇಶ

ನಾವು ಈಗ ಗುಜರಾತ್ ಸರ್ಕಾರವನ್ನು ನಂಬುವುದಿಲ್ಲ: ರಾಜ್ ಕೋಟ್ ದುರಂತಕ್ಕೆ ಕಾರಣವಾದ ಲೋಪಗಳ ಬಗ್ಗೆ ಹೈಕೋರ್ಟ್ ತರಾಟೆ

ರಾಜ್ ಕೋಟ್ ನಲ್ಲಿನ ಗೇಮಿಂಗ್ ಝೋನ್ ನಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಹೈಕೋರ್ಟ್ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಅಹ್ಮದಾಬಾದ್: ರಾಜ್ ಕೋಟ್ ನಲ್ಲಿನ ಗೇಮಿಂಗ್ ಝೋನ್ ನಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಹೈಕೋರ್ಟ್ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಅಗ್ನಿ ದುರಂತದಲ್ಲಿ 28 ಮಕ್ಕಳು ಸಾವನ್ನಪ್ಪಿದ್ದರು. ದುರಂತ ಸಂಭವಿಸಿದ ಗೇಮಿಂಗ್ ಝೋನ್ ಗಳಲ್ಲಿ ಲೋಪದೋಷಗಳಿದ್ದು, ಅಗ್ನಿ ಸುರಕ್ಷತೆ ಪ್ರಮಾಣಪತ್ರ ಸೇರಿದಂತೆ ಅಗತ್ಯ ಅನುಮತಿಗಳಿಲ್ಲದೇ ಕಳೆದ 24 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದು ಎಂಬ ಮಾಹಿತಿ ಪಡೆದ ಹೈಕೋರ್ಟ್ ನಾವು ಈಗ ಗುಜರಾತ್ ಸರ್ಕಾರವನ್ನು ನಂಬುವುದಿಲ್ಲ ಎಂದು ಹೇಳಿದೆ.

ರಾಜ್‌ಕೋಟ್ ಪುರಸಭೆ, ಅಗ್ನಿ ದುರಂತ ನಡೆದ ಗೇಮಿಂಗ್ ಝೋನ್ ನಮ್ಮಿಂದ ಅನುಮೋದನೆ ಪಡೆದಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿತ್ತು. ಈ ಬಗ್ಗೆ ತೀವ್ರ ಅಸಮಾಧಾನಗೊಂಡ ಕೋರ್ಟ್, ಇದು "ಎರಡೂವರೆ ವರ್ಷಗಳಿಂದ ಇದು ನಡೆಯುತ್ತಿದೆ (ರಾಜ್‌ಕೋಟ್ ಗೇಮಿಂಗ್ ವಲಯವನ್ನು ಉಲ್ಲೇಖಿಸಿ). ನಾವು ನೀವು ಮತ್ತು ನಿಮ್ಮ ಅನುಯಾಯಿಗಳು ಏನು ಮಾಡುತ್ತೀರಿ ಎಂದು ನೀವು ಕುರುಡಾಗಿದ್ದೀರಿ ಎಂದು ಭಾವಿಸುತ್ತೀರಾ? ಎಂದು ನ್ಯಾಯಾಲಯ ಪ್ರಶ್ನಿಸಿದೆ.

ರಾಜ್‌ಕೋಟ್ ಗೇಮಿಂಗ್ ವಲಯಕ್ಕೆ ಕಳೆದ ವರ್ಷ ನವೆಂಬರ್‌ನಲ್ಲಿ ಸ್ಥಳೀಯ ಪೊಲೀಸರು ಪರವಾನಗಿ ನೀಡಿದ್ದು, ಅದನ್ನು ಡಿಸೆಂಬರ್ 31, 2024 ಕ್ಕೆ ನವೀಕರಿಸಲಾಗಿದೆ ಎಂದು ರಾಜ್‌ಕೋಟ್ ಪೊಲೀಸ್ ಕಮಿಷನರ್ ರಾಜು ಭಾರ್ಗವ ತಿಳಿಸಿದ್ದಾರೆ.

ಛಾಯಾಚಿತ್ರಗಳು ಗೇಮಿಂಗ್ ಝೋನ್‌ನಲ್ಲಿ ಅಧಿಕಾರಿಗಳಿದ್ದುದ್ದನ್ನು ತೋರಿಸಿದ ನಂತರ ವಿಚಾರಣೆಯು ರಾಜ್‌ಕೋಟ್ ಪುರಸಭೆಗೆ ವ್ಯತಿರಿಕ್ತವಾಯಿತು. "ಈ ಅಧಿಕಾರಿಗಳು ಯಾರು? ಅವರು ಆಟವಾಡಲು ಅಲ್ಲಿಗೆ ಹೋಗಿದ್ದೀರಾ?" ಎಂದು ನ್ಯಾಯಾಲಯ ಕೇಳಿದೆ. ನ್ಯಾಯಾಲಯವೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

"ಅಗ್ನಿ ಸುರಕ್ಷತಾ ಪ್ರಮಾಣೀಕರಣದ ವಿಚಾರಣೆಗಳು ನಾಲ್ಕು ವರ್ಷಗಳಿಂದ ಇತ್ಯರ್ಥವಾಗುತ್ತಿಲ್ಲ ಎಂಬುದನ್ನು ಕೇಳಿಸಿಕೊಂಡ ಕೋರ್ಟ್ ಮತ್ತಷ್ಟು ಆಕ್ರೋಶಗೊಂಡು "ನೀವು ಕುರುಡಾಗಿದ್ದೀರಾ? ನೀವು ನಿದ್ದೆ ಮಾಡಿದ್ದೀರಾ? ಈಗ ನಮಗೆ ಸ್ಥಳೀಯ ವ್ಯವಸ್ಥೆ ಮತ್ತು ರಾಜ್ಯವನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT