ಅಗ್ನಿ ದುರಂತ ನಡೆದ ಸ್ಥಳ  online desk
ದೇಶ

ನಾವು ಈಗ ಗುಜರಾತ್ ಸರ್ಕಾರವನ್ನು ನಂಬುವುದಿಲ್ಲ: ರಾಜ್ ಕೋಟ್ ದುರಂತಕ್ಕೆ ಕಾರಣವಾದ ಲೋಪಗಳ ಬಗ್ಗೆ ಹೈಕೋರ್ಟ್ ತರಾಟೆ

ರಾಜ್ ಕೋಟ್ ನಲ್ಲಿನ ಗೇಮಿಂಗ್ ಝೋನ್ ನಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಹೈಕೋರ್ಟ್ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಅಹ್ಮದಾಬಾದ್: ರಾಜ್ ಕೋಟ್ ನಲ್ಲಿನ ಗೇಮಿಂಗ್ ಝೋನ್ ನಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಹೈಕೋರ್ಟ್ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಅಗ್ನಿ ದುರಂತದಲ್ಲಿ 28 ಮಕ್ಕಳು ಸಾವನ್ನಪ್ಪಿದ್ದರು. ದುರಂತ ಸಂಭವಿಸಿದ ಗೇಮಿಂಗ್ ಝೋನ್ ಗಳಲ್ಲಿ ಲೋಪದೋಷಗಳಿದ್ದು, ಅಗ್ನಿ ಸುರಕ್ಷತೆ ಪ್ರಮಾಣಪತ್ರ ಸೇರಿದಂತೆ ಅಗತ್ಯ ಅನುಮತಿಗಳಿಲ್ಲದೇ ಕಳೆದ 24 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದು ಎಂಬ ಮಾಹಿತಿ ಪಡೆದ ಹೈಕೋರ್ಟ್ ನಾವು ಈಗ ಗುಜರಾತ್ ಸರ್ಕಾರವನ್ನು ನಂಬುವುದಿಲ್ಲ ಎಂದು ಹೇಳಿದೆ.

ರಾಜ್‌ಕೋಟ್ ಪುರಸಭೆ, ಅಗ್ನಿ ದುರಂತ ನಡೆದ ಗೇಮಿಂಗ್ ಝೋನ್ ನಮ್ಮಿಂದ ಅನುಮೋದನೆ ಪಡೆದಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿತ್ತು. ಈ ಬಗ್ಗೆ ತೀವ್ರ ಅಸಮಾಧಾನಗೊಂಡ ಕೋರ್ಟ್, ಇದು "ಎರಡೂವರೆ ವರ್ಷಗಳಿಂದ ಇದು ನಡೆಯುತ್ತಿದೆ (ರಾಜ್‌ಕೋಟ್ ಗೇಮಿಂಗ್ ವಲಯವನ್ನು ಉಲ್ಲೇಖಿಸಿ). ನಾವು ನೀವು ಮತ್ತು ನಿಮ್ಮ ಅನುಯಾಯಿಗಳು ಏನು ಮಾಡುತ್ತೀರಿ ಎಂದು ನೀವು ಕುರುಡಾಗಿದ್ದೀರಿ ಎಂದು ಭಾವಿಸುತ್ತೀರಾ? ಎಂದು ನ್ಯಾಯಾಲಯ ಪ್ರಶ್ನಿಸಿದೆ.

ರಾಜ್‌ಕೋಟ್ ಗೇಮಿಂಗ್ ವಲಯಕ್ಕೆ ಕಳೆದ ವರ್ಷ ನವೆಂಬರ್‌ನಲ್ಲಿ ಸ್ಥಳೀಯ ಪೊಲೀಸರು ಪರವಾನಗಿ ನೀಡಿದ್ದು, ಅದನ್ನು ಡಿಸೆಂಬರ್ 31, 2024 ಕ್ಕೆ ನವೀಕರಿಸಲಾಗಿದೆ ಎಂದು ರಾಜ್‌ಕೋಟ್ ಪೊಲೀಸ್ ಕಮಿಷನರ್ ರಾಜು ಭಾರ್ಗವ ತಿಳಿಸಿದ್ದಾರೆ.

ಛಾಯಾಚಿತ್ರಗಳು ಗೇಮಿಂಗ್ ಝೋನ್‌ನಲ್ಲಿ ಅಧಿಕಾರಿಗಳಿದ್ದುದ್ದನ್ನು ತೋರಿಸಿದ ನಂತರ ವಿಚಾರಣೆಯು ರಾಜ್‌ಕೋಟ್ ಪುರಸಭೆಗೆ ವ್ಯತಿರಿಕ್ತವಾಯಿತು. "ಈ ಅಧಿಕಾರಿಗಳು ಯಾರು? ಅವರು ಆಟವಾಡಲು ಅಲ್ಲಿಗೆ ಹೋಗಿದ್ದೀರಾ?" ಎಂದು ನ್ಯಾಯಾಲಯ ಕೇಳಿದೆ. ನ್ಯಾಯಾಲಯವೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

"ಅಗ್ನಿ ಸುರಕ್ಷತಾ ಪ್ರಮಾಣೀಕರಣದ ವಿಚಾರಣೆಗಳು ನಾಲ್ಕು ವರ್ಷಗಳಿಂದ ಇತ್ಯರ್ಥವಾಗುತ್ತಿಲ್ಲ ಎಂಬುದನ್ನು ಕೇಳಿಸಿಕೊಂಡ ಕೋರ್ಟ್ ಮತ್ತಷ್ಟು ಆಕ್ರೋಶಗೊಂಡು "ನೀವು ಕುರುಡಾಗಿದ್ದೀರಾ? ನೀವು ನಿದ್ದೆ ಮಾಡಿದ್ದೀರಾ? ಈಗ ನಮಗೆ ಸ್ಥಳೀಯ ವ್ಯವಸ್ಥೆ ಮತ್ತು ರಾಜ್ಯವನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ