ಜರ್ಮನ್ ಶೆಫರ್ಡ್ 
ದೇಶ

ಹೃದಯಸ್ಪರ್ಶಿ ವೀಡಿಯೊ: ಬಾಲ್ಕನಿಯಿಂದ ಜಿಗಿದು ಬೀದಿ ನಾಯಿಯಿಂದ ಮಕ್ಕಳನ್ನು ರಕ್ಷಿಸಿದ ಜರ್ಮನ್ ಶೆಫರ್ಡ್; Viral Video!

ಜರ್ಮನ್ ಶೆಫರ್ಡ್ ನಾಯಿ ಮನೆಯ ಬಾಲ್ಕನಿಯಲ್ಲಿ ಶಾಂತವಾಗಿ ಕುಳಿತು ರಸ್ತೆಯಲ್ಲಿ ಓಡಾಡುವ ಜನರನ್ನು ನೋಡುತ್ತಿರುವುದನ್ನು ಕಾಣಬಹುದು.

ಉತ್ತರಾಖಂಡದ ಋಷಿಕೇಶದಿಂದ ಹೃದಯಸ್ಪರ್ಶಿ ವೀಡಿಯೊವೊಂದು ವೈರಲ್ ಆಗಿದೆ. ಜರ್ಮನ್ ಶೆಫರ್ಡ್ (German Shepherd) ಬೀದಿ ನಾಯಿಯಿಂದ ಮಕ್ಕಳನ್ನು ರಕ್ಷಿಸಲು ಬಾಲ್ಕನಿಯಿಂದ ಹಾರಿರುವುದನ್ನು ಕಾಣಬಹುದು. ಈ ಘಟನೆ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಅಲ್ಲದೆ ಜನರು ನಾಯಿಯ ತ್ವರಿತ ಪ್ರತಿಕ್ರಿಯೆ ಮತ್ತು ರಕ್ಷಣಾತ್ಮಕ ಸ್ವಭಾವವನ್ನು ಶ್ಲಾಘಿಸುತ್ತಿದ್ದಾರೆ.

ಈ ವೈರಲ್ ವೀಡಿಯೊ ವಸತಿ ಪ್ರದೇಶದಲ್ಲಿ ನಡೆದಿರುವುದಾಗಿ ಎಂದು ವರದಿಯಾಗಿದೆ. ವೀಡಿಯೊದಲ್ಲಿ, ಜರ್ಮನ್ ಶೆಫರ್ಡ್ ನಾಯಿ ಮನೆಯ ಬಾಲ್ಕನಿಯಲ್ಲಿ ಶಾಂತವಾಗಿ ಕುಳಿತು ರಸ್ತೆಯಲ್ಲಿ ಓಡಾಡುವ ಜನರನ್ನು ನೋಡುತ್ತಿರುವುದನ್ನು ಕಾಣಬಹುದು. ನಂತರ ಕೆಲವು ಮಕ್ಕಳು ರಸ್ತೆ ದಾಟುತ್ತಿದ್ದು ಬೀದಿ ನಾಯಿ (Stray Dog) ಕೂಡ ಅವರ ಹಿಂದೆ ಓಡುತ್ತದೆ. ಇದನ್ನು ನೋಡಿದ ಜರ್ಮನ್ ಶೆಫರ್ಡ್ ಏನೂ ಯೋಚಿಸದೆ ಬಾಲ್ಕನಿಯಿಂದ ಹಾರಿ ಬೀದಿ ನಾಯಿಯ ಕಡೆಗೆ ಓಡುತ್ತದೆ. ಇದರಿಂದ ಹೆದರಿದ ಬೀದಿ ನಾಯಿ ಮಕ್ಕಳಿಂದ ದೂರ ಓಡಿ ಹೋಗುತ್ತದೆ.

@gharkekalesh ಹ್ಯಾಂಡಲ್‌ನಿಂದ ಈ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು ಶೀರ್ಷಿಕೆಯಲ್ಲಿ, ಋಷಿಕೇಶದಲ್ಲಿ ಬೀದಿ ನಾಯಿಯಿಂದ ಮಕ್ಕಳನ್ನು ರಕ್ಷಿಸಲು ಮತ್ತೊಂದು ನಾಯಿ 'Super Hero'ನಂತೆ ಹಾರಿದೆ ಎಂದು ಬರೆದಿದ್ದಾರೆ. ಜರ್ಮನ್ ಶೆಫರ್ಡ್ ನಾಯಿಯನ್ನು ನೆಟಿಜನ್‌ಗಳು ತೀವ್ರವಾಗಿ ಹೊಗಳುತ್ತಿದ್ದಾರೆ. ಕೆಲವರು ಪ್ರೀತಿಯಿಂದ 'ದೋಗೇಶ್ ಭಾಯ್' ಎಂದು ಕರೆಯುತ್ತಿದ್ದಾರೆ.

ದೇಶದಲ್ಲಿರುವ ಆಶ್ರಯ ಮನೆಗಳಿಗೆ ಬೀದಿ ನಾಯಿಗಳನ್ನು ಕಳುಹಿಸಬೇಕೆಂಬ ಸುಪ್ರೀಂ ಕೋರ್ಟ್‌ನ ಆದೇಶದ ಕುರಿತು ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಈ ವೀಡಿಯೊ ಕಾಣಿಸಿಕೊಂಡಿದೆ. ಜನರು, ವಿಶೇಷವಾಗಿ ಮಕ್ಕಳು, ರೇಬೀಸ್‌ನಂತಹ ಅಪಾಯಗಳಿಂದ ರಕ್ಷಿಸಲ್ಪಡುವಂತೆ ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ಸಂತಾನಹರಣ ಮಾಡಿ ಮತ್ತು ಆಶ್ರಯ ಮನೆಗಳಲ್ಲಿ ಇಡಲು ನ್ಯಾಯಾಲಯ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!