ದೇಶ

ಪಾಕ್‌ನಲ್ಲಿ ಪ್ರಬಲ ಭೂಕಂಪಕ್ಕೆ ಪರಮಾಣು ಪರೀಕ್ಷೆ ಕಾರಣನಾ? NCS ಸ್ಪಷ್ಟನೆ

ಮೂರು ದಿನಗಳ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಮೂರನೇ ಬಾರಿಗೆ ಭೂಕಂಪವಾಗಿದೆ. ಮೇ 10 ರಂದು ಬೆಳಗ್ಗೆ ಹಿಂದೆ ಮುಂದೆಯಂತೆ 4.7 ರಷ್ಟು ತೀವ್ರತೆಯ ಭೂಕಂಪದ 4.0 ರಷ್ಟು ಭೂಕಂಪವಾಗಿತ್ತು.

ನವದೆಹಲಿ: ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನದ ಮೇಲೆ ಪ್ರಕೃತಿಯೂ ಮುನಿಸಿಕೊಂಡಿದ್ದು, ಸೋಮವಾರ ವಿವಿಧೆಡೆ ಸೋಮವಾರ 4.6 ತೀವ್ರತೆಯ ಭೂಕಂಪ ಆಗಿದೆ. ಪಂಜಾಬ್ ಪ್ರಾಂತ್ಯದ ಪಿರ್ ಜೊಂಗಲ್ ಬಳಿ ಮಧ್ಯಾಹ್ನ 1-26ರ ಸುಮಾರಿನಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ನಿರ್ದೇಶಕ ಒ.ಪಿ ಮಿಶ್ರಾ ತಿಳಿಸಿದ್ದಾರೆ.

ಮೂರು ದಿನಗಳ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಮೂರನೇ ಬಾರಿಗೆ ಭೂಕಂಪವಾಗಿದೆ. ಮೇ 10 ರಂದು ಬೆಳಗ್ಗೆ ಹಿಂದೆ ಮುಂದೆಯಂತೆ 4.7 ರಷ್ಟು ತೀವ್ರತೆಯ ಭೂಕಂಪದ 4.0 ರಷ್ಟು ಭೂಕಂಪವಾಗಿತ್ತು. ಭಾರತದೊಂದಿಗೆ ಸೇನಾ ಕಾರ್ಯಾಚರಣೆಯಲ್ಲಿ ತೊಡಗಿದ ಪಾಕಿಸ್ತಾನದಲ್ಲಿನ ಕೆಲವು ಅಸ್ವಾಭಾವಿಕ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯಲ್ಲಿ ಪೋಸ್ಟ್ ಮಾಡಲಾಗುತ್ತಿದೆ.

ಪರಮಾಣು ಪರೀಕ್ಷೆ ನಡೆಸುವ ಮಹತ್ವದ ಸ್ಥಾವರಗಳ ಮೇಲೆ ಭಾರತ ದಾಳಿ ನಡೆಸಿದೆ. ತದನಂತರ ಪಾಕಿಸ್ತಾನ ಪರಮಾಣು ಪರೀಕ್ಷೆ ನಡೆಸುತ್ತಿರುವುದರಿಂದ ಆಗಾಗ್ಗೆ ಭೂಕಂಪ ಆಗುತ್ತಿದೆ ಎಂದು ಕೆಲವರು ಬರೆದುಕೊಂಡಿದ್ದರು.

ಇದು ನೈಸರ್ಗಿಕ ಭೂಕಂಪವಲ್ಲ ಆದರೆ ಬಹುಶಃ ಪಾಕಿಸ್ತಾನಿ ನ್ಯೂಕ್ಲಿಯರ್ ಪ್ರದೇಶದಲ್ಲಿ ಆದ ಘಟನೆಯೇ? ನ್ಯೂಕ್ಲಿಯರ್ ಸೈಟ್ ಘಟನೆಯೇ? #OperationSindoor,' ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಇಂತಹ ಹೇಳಿಕೆಗಳನ್ನು ಅಲ್ಲಗಳೆದಿರುವ NCS ನಿರ್ದೇಶಕ ಒ ಪಿ ಮಿಶ್ರಾ, ಆಗಾಗ್ಗೆ ಭೂಕಂಪ ಉಂಟಾಗುವ ಪ್ರದೇಶಗಳಲ್ಲಿ ಭೂಕಂಪ ಆಗಿದೆ. ನೈಸರ್ಗಿಕ ಭೂಕಂಪವು ಎರಡು ಹಂತಗಳನ್ನು ಹೊಂದಿರುತ್ತದೆ. ಆದರೆ ಪರಮಾಣು ಸ್ಫೋಟ ವಿಶಿಷ್ಟವಾದ ತೃತೀಯ ಹಂತವನ್ನು ಹೊಂದಿರುತ್ತದೆ. ಇದು ಪರಮಾಣು ಸ್ಫೋಟದ ನಂತರ ಮೇಲ್ಮೈ ಪ್ರತಿಧ್ವನಿಸುವಿಕೆಯಿಂದ ಉಂಟಾಗುತ್ತದೆ. ಸಿಸ್ಮೋಗ್ರಾಫ್ ಇದನ್ನು ಸ್ಪಷ್ಟವಾಗಿ ಗುರುತಿಸುತ್ತದೆ ಎಂದು ತಿಳಿಸಿದ್ದಾರೆ.

ಹಿರಿಯ ಭೂಕಂಪಶಾಸ್ತ್ರಜ್ಞ ಎ ಕೆ ಶುಕ್ಲಾ ಅವರು ಪರಮಾಣು ಸ್ಫೋಟಗಳು ಸಿಸ್ಮೋಗ್ರಾಪ್ ಗಳಲ್ಲಿ ವಿಭಿನ್ನವಾಗಿ ದಾಖಲಾಗುತ್ತವೆ. ಹಿಂದಿನ ಭೂಕಂಪಗಳು ವಿವಿಧ ಸ್ಥಳಗಳಿಂದ ವರದಿಯಾಗಿದ್ದು, ಅಲ್ಲಿ ಪರಮಾಣು ಸ್ಥಾವರ ಹೊಂದಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಪಾಕಿಸ್ತಾನವು ಭಾರತ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ನಡುವಿನ ಸಕ್ರಿಯ ಗಡಿಯಲ್ಲಿದೆ ಮತ್ತು ಬಲೂಚಿಸ್ತಾನ್, ಖೈಬರ್ ಪಖ್ತುಂಕ್ವಾ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನಂತಹ ಪ್ರಾಂತ್ಯಗಳು ಆಗಾಗ್ಗೆ ಭೂಕಂಪಗಳಿಗೆ ಗುರಿಯಾಗುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಮಂಡನೆ; 1 ಲಕ್ಷ ರೂ ದಂಡ; 10 ವರ್ಷ ಶಿಕ್ಷೆ!

EVMs ಅಲ್ಲವೇ ಅಲ್ಲ, ಪ್ರಧಾನಿ ಮೋದಿ ಇದನ್ನೇ 'ಹ್ಯಾಕ್' ಮಾಡಿದ್ದಾರೆ! ಲೋಕಸಭೆಯಲ್ಲಿ ಕಂಗನಾ

ಸಮಾಧಿಯಲ್ಲೂ ನೆಮ್ಮದಿ ಇಲ್ಲ: Devil ರಿಲೀಸ್‌ಗೂ ಮುನ್ನ ದಿನ ರೇಣುಕಾಸ್ವಾಮಿ ಸಮಾಧಿ ನಾಮಫಲಕ ಧ್ವಂಸಗೊಳಿಸಿದ ಕಿಡಿಗೇಡಿಗಳು!

ಶಾಲೆಗಳಲ್ಲಿ 'ವಂದೇ ಮಾತರಂ' ಹಾಡುವುದನ್ನು ಕಡ್ಡಾಯಗೊಳಿಸಬೇಕು: ಸುಧಾ ಮೂರ್ತಿ ಸರ್ಕಾರಕ್ಕೆ ಒತ್ತಾಯ

ಹಲವು ಅಪರಾಧಗಳಲ್ಲಿ ಭಾಗಿಯಾದ ಬಜರಂಗದಳವನ್ನು ನಿಷೇಧಿಸಿ: ಬಿಕೆ ಹರಿಪ್ರಸಾದ್ ಆಗ್ರಹ

SCROLL FOR NEXT