ಮೇಘಸ್ಫೋಟದಿಂದ ಮನೆಗಳು ಕುಸಿಯುತ್ತಿರುವುದು  
ದೇಶ

ಉತ್ತರಾಖಂಡ ಮೇಘಸ್ಫೋಟ: ಚಮೋಲಿ ಜಿಲ್ಲೆಯಲ್ಲಿ ಹತ್ತು ಮಂದಿ ನಾಪತ್ತೆ, ಸಂಪರ್ಕ ಕಳೆದುಕೊಂಡ ಗ್ರಾಮಗಳು

ಭೂಕುಸಿತ ಸಂಭವಿಸಿದ ಸಮಯದಲ್ಲಿ ಏಳು ಮಂದಿ ಮನೆಯ ಒಳಗೆ ಇದ್ದರು, ಅವರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ, ಇನ್ನೂ ಐವರು ನಾಪತ್ತೆಯಾಗಿದ್ದಾರೆ.

ಡೆಹ್ರಾಡೂನ್: ಕಳೆದೆರಡು ದಿನಗಳಿಂದ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸರಣಿ ಮೇಘ ಸ್ಫೋಟ ಉಂಟಾಗಿದ್ದು, ಮೂರು ಗ್ರಾಮಗಳಲ್ಲಿ ಕನಿಷ್ಠ ಹತ್ತು ಜನರು ನಾಪತ್ತೆಯಾಗಿದ್ದಾರೆ.

ಚಮೋಲಿ ಜಿಲ್ಲೆಯ ನಂದನಗರ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವ ಪ್ರವಾಹ ಮತ್ತು ಭೂಕುಸಿತಗಳು ಹಲವಾರು ಗ್ರಾಮಗಳನ್ನು ಅವ್ಯವಸ್ಥೆಗೆ ದೂಡಿದ್ದು, ಪ್ರಮುಖ ಸಂವಹನ ಸಂಪರ್ಕ ಕಡಿತಗೊಳಿಸಿವೆ.

ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ನಂದನಗರ, ಸರಪಾನಿ ಮತ್ತು ಧುರ್ಮಾ ಗ್ರಾಮಗಳಲ್ಲಿ ಹತ್ತು ಜನರು ಕಾಣೆಯಾಗಿದ್ದು, ಪತ್ತೆಹಚ್ಚಲು ಅಧಿಕಾರಿಗಳು ನಿರಂತರ ಹುಡುಕಾಟದಲ್ಲಿದ್ದಾರೆ.

ರಾಜ್ಯ ವಿಪತ್ತು ಕಾರ್ಯಾಚರಣೆ ಕೇಂದ್ರ, ಭಾರೀ ಮಳೆಯಿಂದಾಗಿ ನಗರ ಪಂಚಾಯತ್ ನಂದಪ್ರಯಾಗದ ಕುಂಟಾರಿ ಲಗಾಫಲಿ ವಾರ್ಡ್‌ನಲ್ಲಿ ಆರು ಮನೆಗಳಿಗೆ ಹಾನಿಯಾಗಿದೆ. ಈ ಪ್ರದೇಶದಿಂದ ಏಳು ಮಂದಿ ನಾಪತ್ತೆಯಾಗಿದ್ದು ಇಬ್ಬರನ್ನು ರಕ್ಷಿಸಲಾಗಿದೆ.

ನಂದನಗರದ ಕುಂತ್ರಿಲಗ್ಗಫಲಿಯಲ್ಲಿ, ಕಾಣೆಯಾದವರಲ್ಲಿ ಕುನ್ವರ್ ಸಿಂಗ್ ಅವರ ಕುಟುಂಬ ಸೇರಿದೆ: ಕುನ್ವರ್ ಸಿಂಗ್, ಅವರ ಪತ್ನಿ ಕೋನಾ ದೇವಿ ಮತ್ತು ಅವರ ಇಬ್ಬರು ಪುತ್ರರಾದ ವಿಕಾಸ್ ಮತ್ತು ವಿಶಾಲ್. ಇತರ ಇಬ್ಬರು ಗ್ರಾಮಸ್ಥರಾದ ದೇವೇಶ್ವರಿ ದೇವಿ ಮತ್ತು ನರೇಂದ್ರ ಸಿಂಗ್ ನಾಪತ್ತೆಯಾಗಿದ್ದಾರೆ.

ಸರಪಾನಿ ಗ್ರಾಮದಲ್ಲಿ, 70 ವರ್ಷದ ಜಗಧಾತ ಪ್ರಸಾದ್ ಮತ್ತು ಅವರ ಪತ್ನಿ ಭಾಗಾ ದೇವಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ, ಆದರೆ ಧುರ್ಮಾ ಗ್ರಾಮದ ಗುಮನ್ ಸಿಂಗ್ ಮತ್ತು ಮಮತಾ ದೇವಿ ಕೂಡ ಎಲ್ಲಿದ್ದಾರೆಂದು ತಿಳಿದಿಲ್ಲ.

ಮೋಕ್ಷ ನದಿಯ ಉದ್ದಕ್ಕೂ ಇರುವ ಸೆರಾ ಗ್ರಾಮದಲ್ಲಿ ಇದರ ಪರಿಣಾಮಗಳು ಹೆಚ್ಚು ಗೋಚರಿಸುತ್ತವೆ, ಅಲ್ಲಿ ಹಾನಿ ತೀವ್ರವಾಗಿದೆ. ಕಳೆದ ದುರಂತದ ನಂತರ ನಾವು ನಮ್ಮ ಜೀವನವನ್ನು ಮತ್ತೆ ರೂಪಿಸಲು ಆರಂಭಿಸಿದ್ದೆವು. ಈಗ ಈ ಹೊಸ ವಿಪತ್ತು ಎಲ್ಲವನ್ನೂ ನಾಶಮಾಡಿದೆ ಎಂದು ಅರ್ಜುನ್ ಸಿಂಗ್ ಹೇಳಿದರು.

ಬೆಟ್ಟದ ಮೇಲಿನ ಧುಮಿ ಗ್ರಾಮದಲ್ಲಿ, ಹಲವಾರು ವಸತಿ ಕಟ್ಟಡಗಳು ಅಸುರಕ್ಷಿತವಾಗಿವೆ, ಆದರೆ ಬಗಾದ್ ಟಾಪ್ ಪ್ರದೇಶದಲ್ಲಿ ಅಂಗಡಿಗಳು ಮತ್ತು ಮನೆಗಳು ಕೊಚ್ಚಿ ಹೋಗಿವೆ. ನಂದಪ್ರಯಾಗ ಬ್ಲಾಕ್‌ನಲ್ಲಿರುವ ಕುಂತಿ, ಫಫ್ಲಿ ಮತ್ತು ಬಂಜ್‌ಗಢದಲ್ಲಿ ಅನೇಕ ಮನೆಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ.

ಮೇಘಸ್ಫೋಟಗಳು ಪ್ರದೇಶದ ಮೂಲಸೌಕರ್ಯವನ್ನು ದುರ್ಬಲಗೊಳಿಸಿವೆ. ವಿದ್ಯುತ್ ಸರಬರಾಜು ಕಡಿತಗೊಂಡಿದೆ ಮತ್ತು ರಸ್ತೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಸೆರಾದಲ್ಲಿ ಪೆಟ್ರೋಲ್ ಪಂಪ್ ಅವಶೇಷಗಳಲ್ಲಿ ಹೂತುಹೋಗಿದೆ. ವಿದ್ಯುತ್ ಕಡಿತಗೊಂಡಿರುವುದರಿಂದ ಮೊಬೈಲ್ ನೆಟ್‌ವರ್ಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ, ಹೊರಗಿನ ಪ್ರಪಂಚದೊಂದಿಗಿನ ಸಂಪರ್ಕ ಕಡಿತಗೊಂಡಿದೆ.

ಪ್ರವಾಹ ಪೀಡಿತ ಪ್ರದೇಶಗಳನ್ನು ತಲುಪುವುದು ಪ್ರಮುಖ ಸವಾಲಾಗಿದೆ. ರಕ್ಷಣಾ ಪ್ರಯತ್ನಗಳು ಮುಂದುವರಿದಂತೆ, ಸಾವುನೋವುಗಳ ಅಧಿಕೃತ ದೃಢೀಕರಣ ಇನ್ನೂ ಸಿಕ್ಕಿಲ್ಲ.

ಭಾರೀ ಮಳೆ

ಉತ್ತರಾಖಂಡದಲ್ಲಿ ಆಗಸ್ಟ್‌ ತಿಂಗಳಿನಿಂದ ಅಸಾಧಾರಣ ಮಳೆಯಾಗುತ್ತಿದೆ. ಸೆಪ್ಟೆಂಬರ್ 16 ರಂದು ಬೆಳಗ್ಗೆ 8:30 ರವರೆಗಿನ 24 ಗಂಟೆಗಳಲ್ಲಿ ರಾಜ್ಯವು ಸಾಮಾನ್ಯಕ್ಕಿಂತ ಶೇ. 468 ರಷ್ಟು ಹೆಚ್ಚಿನ ಮಳೆಯನ್ನು ದಾಖಲಿಸಿದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ.

ಡೆಹ್ರಾಡೂನ್ ಜಿಲ್ಲೆ ಈ ನಿರಂತರ ಮಳೆಯ ಹೊರೆಯನ್ನು ಭರಿಸಿದ್ದು, ಇತ್ತೀಚಿನ 24 ಗಂಟೆಗಳ ಅವಧಿಯಲ್ಲಿ ಮತ್ತು ಸೆಪ್ಟೆಂಬರ್‌ನಲ್ಲಿ ಇದುವರೆಗಿನ ರಾಜ್ಯಾದ್ಯಂತ ಅತ್ಯಂತ ಮಳೆಯಾದ ಪ್ರದೇಶವಾಗಿ ಹೊರಹೊಮ್ಮಿದೆ.

ಆಗಸ್ಟ್‌ನಲ್ಲಿ 574.4 ಮಿಮೀ ಮಳೆಯಾಗಿದೆ, ಇದು ಮಾಸಿಕ ಸರಾಸರಿಗಿಂತ ಶೇ. 188.7 ರಷ್ಟು ಹೆಚ್ಚಾಗಿದೆ. ಸಾಮಾನ್ಯವಾಗಿ ಪರಿವರ್ತನೆಯ ತಿಂಗಳಾದ ಸೆಪ್ಟೆಂಬರ್ 16 ರವರೆಗೆ 211 ಮಿಮೀ ಮಳೆಯಾಗಿದೆ, ಇದು ಈ ಅವಧಿಗೆ ಅದರ ಸಾಮಾನ್ಯ 128.5 ಮಿಮೀಗಿಂತ ಶೇ. 64 ರಷ್ಟು ಹೆಚ್ಚಾಗಿದೆ.

ರಾಜ್ಯ ಹವಾಮಾನ ಕೇಂದ್ರದ ದತ್ತಾಂಶವು ಡೆಹ್ರಾಡೂನ್‌ನ ಅಸಾಧಾರಣ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಸೆಪ್ಟೆಂಬರ್ 1 ರಿಂದ 16 ರವರೆಗೆ, ಜಿಲ್ಲೆಯಲ್ಲಿ 384.2 ಮಿ.ಮೀ ಮಳೆಯಾಗಿದ್ದು, ಈ ಅವಧಿಯಲ್ಲಿ ವಾಡಿಕೆಯಂತೆ ಸುರಿಯುತ್ತಿದ್ದ 153 ಮಿ.ಮೀ ಮಳೆಗಿಂತ ಶೇ. 151 ರಷ್ಟು ಹೆಚ್ಚಾಗಿದೆ. ಸೆಪ್ಟೆಂಬರ್ 16 ರ ಬೆಳಿಗ್ಗೆ ಕೊನೆಗೊಂಡ 24 ಗಂಟೆಗಳಲ್ಲಿ ಪರಿಸ್ಥಿತಿ ವಿಶೇಷವಾಗಿ ತೀವ್ರವಾಗಿತ್ತು, ಡೆಹ್ರಾಡೂನ್‌ನಲ್ಲಿ ಮಾತ್ರ ಸಾಮಾನ್ಯ ಮಳೆಯಾದ 5.4 ಮಿ.ಮೀ ಮಳೆಗೆ ಬದಲಾಗಿ 66.7 ಮಿ.ಮೀ ಮಳೆಯಾಗಿದೆ - ಇದು ಆಶ್ಚರ್ಯಕರವಾಗಿ ಶೇ. 1136 ರಷ್ಟು ಹೆಚ್ಚಳವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

CEC 'ಮತ ಕಳ್ಳರ ರಕ್ಷಕ', ಕರ್ನಾಟಕದ ಆಳಂದ ಕ್ಷೇತ್ರದಲ್ಲಿ 6,000 ಮತದಾರರ ಹೆಸರು ಡಿಲೀಟ್: ರಾಹುಲ್ ಗಾಂಧಿ ಆರೋಪ

ಉಕ್ರೇನ್ ಯುದ್ಧ ಪರಿಹರಿಸಲು ಸಹಾಯಕ್ಕೆ ಭಾರತ ಸಿದ್ಧವಿದೆ: ಪುಟಿನ್ ಗೆ ಪ್ರಧಾನಿ ಮೋದಿ ಭರವಸೆ

MUDA Scam: ಮುಡಾ ಮಾಜಿ ಅಧಿಕಾರಿ ದಿನೇಶ್ ಕುಮಾರ್ 9 ದಿನ ED ವಶಕ್ಕೆ

ಹಣಕಾಸು ಸ್ವಾತಂತ್ರ್ಯಕ್ಕೆ 7 ಸರಳ ನಿಯಮಗಳು! (ಹಣಕ್ಲಾಸು)

ಸಿಂಹ ಅಲ್ಲ 'ನಾಯಿ' ಎಂದು ಹೆಸರಿಡಬೇಕಿತ್ತು: ಕಚ್ಚೆ ಹರುಕನಿಗೆ ಟಿಕೆಟ್ ಕೊಡದೆ ಬಿಜೆಪಿಯವರೇ ಕ್ಯಾಕರಿಸಿ ಉಗಿದು ಮನೆಯಲ್ಲಿ ಕೂರಿಸಿದ್ದಾರೆ!

SCROLL FOR NEXT