ಶರದ್ ಪವಾರ್‌ - ಸುಪ್ರಿಯಾ ಸುಳೆ 
ದೇಶ

ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್‌ಗಿಂತ ಸುನೇತ್ರಾ ಪವಾರ್ ಶ್ರೀಮಂತೆ; ಕುಟುಂಬದಲ್ಲಿಯೇ ಸುಪ್ರಿಯಾ ಸುಳೆ ಆಸ್ತಿ ಅಧಿಕ!

ಬಾರಾಮತಿ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಈ ಅಂಕಿಅಂಶಗಳು ಹೊರಹೊಮ್ಮಿದ್ದು, ಚುನಾವಣೆಯಲ್ಲಿ 'ಕುಟುಂಬ vs ಸಂಪತ್ತು' ಎಂಬ ಚರ್ಚೆಗೆ ಉತ್ತೇಜನ ನೀಡಿದೆ.

ನವದೆಹಲಿ: ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಪವಾರ್ ಕುಟುಂಬದಲ್ಲಿಯೇ ಅತ್ಯಂತ ಶ್ರೀಮಂತರಾಗಿದ್ದರೆ. ಅವರ ತಂದೆ ಮತ್ತು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ ಎಂದು ಚುನಾವಣಾ ಅಫಿಡವಿಟ್‌ಗಳು ತೋರಿಸಿವೆ.

ಅಫಿಡವಿಟ್‌ಗಳ ಪ್ರಕಾರ, ಸುಪ್ರಿಯಾ ಸುಳೆ ಅವರ ಕುಟುಂಬದ ಆಸ್ತಿ ₹167 ಕೋಟಿಗಳಾಗಿದ್ದು, ಇದು ಶರದ್ ಪವಾರ್ ಅವರ ಆಸ್ತಿಗಿಂತ ಮೂರು ಪಟ್ಟು ಹೆಚ್ಚು, ಅವರು ₹61 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರ ಆಸ್ತಿ ಮೌಲ್ಯ ₹122 ಕೋಟಿ ಆಗಿದೆ.

ಬಾರಾಮತಿ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಈ ಅಂಕಿಅಂಶಗಳು ಹೊರಹೊಮ್ಮಿದ್ದು, ಚುನಾವಣೆಯಲ್ಲಿ 'ಕುಟುಂಬ vs ಸಂಪತ್ತು' ಎಂಬ ಚರ್ಚೆಗೆ ಉತ್ತೇಜನ ನೀಡಿದೆ.

ಬಾರಾಮತಿ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 23 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. ಪವಾರ್ ಕುಟುಂಬದ ಭದ್ರಕೋಟೆಯಾದ ಬಾರಾಮತಿ ಕ್ಷೇತ್ರವನ್ನು ಮಹಾರಾಷ್ಟ್ರದ ಅತ್ಯಂತ ಪ್ರತಿಷ್ಠಿತ ರಾಜಕೀಯ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಈ ವಾರದ ಆರಂಭದಲ್ಲಿ, ಸುನೇತ್ರಾ ಪವಾರ್ ಅವರು ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ನಾಮಪತ್ರ ಸಲ್ಲಿಸಿದರು. ಅವರ ಎದುರು ಕಾಂಗ್ರೆಸ್ ಅಭ್ಯರ್ಥಿ ಆಕಾಶ್ ಮೋರೆ ಸ್ಪರ್ಧಿಸಿದ್ದಾರೆ. ಬಾರಾಮತಿಯ ಜನರನ್ನು ಉದ್ದೇಶಿಸಿ ಮಾತನಾಡಿದ ಸುನೇತ್ರಾ, 'ಬಾರಾಮತಿಯ ಪ್ರತಿಯೊಬ್ಬ ನಾಗರಿಕನೂ ನನ್ನ ಕುಟುಂಬದ ಸದಸ್ಯ. ನಾನು ನಿಮ್ಮನ್ನು ಎಂದಿಗೂ ಒಂಟಿಯೆಂದು ಭಾವಿಸಲು ಬಿಡುವುದಿಲ್ಲ. ಬಾರಾಮತಿಯ ಅಭಿವೃದ್ಧಿ ಹಿಂದಿನಂತೆಯೇ ತ್ವರಿತ ಗತಿಯಲ್ಲಿ ಮುಂದುವರಿಯುತ್ತದೆ' ಎಂದು ಹೇಳಿದರು.

ಜನವರಿ ಅಂತ್ಯದಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದ ಸುನೇತ್ರಾ ಅವರ ಪತಿ ಅಜಿತ್ ಪವಾರ್ ಅವರು ಸತತ ಎಂಟು ಬಾರಿ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.

ಆರಂಭದಲ್ಲಿ, ಸುನೇತ್ರಾ ಅವರು ಅವಿರೋಧವಾಗಿ ಆಯ್ಕೆಯಾಗಬೇಕೆಂಬ ಕೂಗುಗಳು ಕೇಳಿಬಂದಿದ್ದವು. ಆದರೆ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರೊಂದಿಗೆ, ನೇರ ಸ್ಪರ್ಧೆ ಏರ್ಪಟ್ಟಿದೆ.

ಸುನೇತ್ರಾ ಪವಾರ್ ಇತ್ತೀಚೆಗೆ ಬಾರಾಮತಿಯಿಂದ ತಮ್ಮ ಅತ್ತಿಗೆ ಸುಪ್ರಿಯಾ ಸುಳೆ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

EC-TMC ಸಭೆಯಲ್ಲಿ ಕೋಲಾಹಲ: ಟಿಎಂಸಿ ನಾಯಕರಿಗೆ ‘ಇಲ್ಲಿಂದ ತೊಲಗಿ’ ಎಂದ CEC, ಡೆರೆಕ್ ಒಬ್ರಿಯಾನ್ ಆಕ್ರೋಶ..!

ರಾಜಕೀಯ ಅಧಃಪತನ.. ನಿಮ್ಮ ಎಡವಟ್ಟು ಸರಿಪಡಿಸಲು ವರ್ಷಗಳೇ ಬೇಕು: Israeli ವಿಪಕ್ಷ ನಾಯಕ ಕಿಡಿ

ಕೊನೆಗೂ ಕದನ ವಿರಾಮ ಒಪ್ಪಿದ Iran; 'ವಿಶ್ವ ಶಾಂತಿಗೆ ದೊಡ್ಡ ದಿನ'ಎಂದು Donald Trump ಶ್ಲಾಘನೆ, ಅಮೆರಿಕ ನೆರವು ಘೋಷಣೆ!

ಕದನ ವಿರಾಮಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ: ಪಾಪದ ವಿಶ್ವಗುರು- ಸಂಘಿಗಳೇ... ಇದನ್ನು ನೀವು ಹೇಗೆ ಜೀರ್ಣಿಸಿಕೊಳ್ಳುತ್ತೀರಿ? ಮೋದಿ ಕಿಚಾಯಿಸಿದ DMK

Mediator In Ceasefire Talks: ಪಾಕಿಸ್ತಾನದ ಮೇಲೆ ಅಮೆರಿಕ, ಇರಾನ್ ಅಷ್ಟೊಂದು ನಂಬಿಕೆ ಇಡಲು ಕಾರಣವೇನು ಗೊತ್ತಾ?

SCROLL FOR NEXT