ಸುಪ್ರೀಂ ಕೋರ್ಟ್ 
ದೇಶ

ಅಷ್ಟೊಂದು ಪ್ರೀತಿ ಇದ್ದರೆ, ನಿಮ್ಮ ಮನೆಗೇಕೆ ಕರೆದೊಯ್ಯಬಾರದು?; ಶ್ವಾನ ಪ್ರಿಯರಿಗೆ ಸುಪ್ರೀಂ ಕೋರ್ಟ್ ಚಾಟಿ

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ಪೀಠವು, ನಾಯಿ ಕಡಿತದ ಘಟನೆಗಳಿಗೆ ನಾಯಿ ಪ್ರಿಯರು ಮತ್ತು ಅವುಗಳಿಗೆ ಆಹಾರ ನೀಡುವವರು ಸಹ 'ಜವಾಬ್ದಾರರು' ಮತ್ತು 'ಹೊಣೆಗಾರರು' ಎಂದು ಹೇಳಿತು.

ನವದೆಹಲಿ: ಕಳೆದ ಐದು ವರ್ಷಗಳಿಂದ ಬೀದಿ ಪ್ರಾಣಿಗಳ ವಿಚಾರದಲ್ಲಿ ನಿಯಮಗಳ ಅನುಷ್ಠಾನದ ಕೊರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ನಾಯಿ ಕಡಿತದ ಘಟನೆಗಳಿಗೆ 'ಭಾರಿ ಪರಿಹಾರ' ಪಾವತಿಸಲು ರಾಜ್ಯಗಳನ್ನೇ ಕೇಳುವುದಾಗಿ ಮಂಗಳವಾರ ಹೇಳಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ಪೀಠವು, ನಾಯಿ ಕಡಿತದ ಘಟನೆಗಳಿಗೆ ನಾಯಿ ಪ್ರಿಯರು ಮತ್ತು ಅವುಗಳಿಗೆ ಆಹಾರ ನೀಡುವವರು ಸಹ 'ಜವಾಬ್ದಾರರು' ಮತ್ತು 'ಹೊಣೆಗಾರರು' ಎಂದು ಹೇಳಿತು.

'ಮಕ್ಕಳು ಅಥವಾ ವೃದ್ಧರಿಗೆ ಪ್ರತಿಯೊಂದು ನಾಯಿ ಕಡಿತ, ಸಾವು ಅಥವಾ ಗಾಯಕ್ಕೆ, ಆಯಾ ರಾಜ್ಯ ಸರ್ಕಾರಗಳು ಭಾರಿ ಪರಿಹಾರ ನೀಡುವಂತೆ ನಾವು ಕೇಳಲಿದ್ದೇವೆ. ಏಕೆಂದರೆ, ಅವರು ಕಳೆದ ಐದು ವರ್ಷಗಳಲ್ಲಿ ನಿಯಮಗಳ ಅನುಷ್ಠಾನದ ವಿಚಾರದಲ್ಲಿ ಏನನ್ನೂ ಮಾಡಿಲ್ಲ. ಅಲ್ಲದೆ, ಈ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವವರ ಮೇಲೆ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುತ್ತದೆ. ನೀವು ಈ ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಿದ್ದರೆ, ನೀವು ಅವುಗಳನ್ನು ನಿಮ್ಮ ಮನೆಗೆ ಏಕೆ ಕರೆದೊಯ್ಯಬಾರದು. ಈ ನಾಯಿಗಳು ಏಕೆ ಸುತ್ತಾಡಬೇಕು, ಕಚ್ಚಬೇಕು ಮತ್ತು ಜನರನ್ನು ಹೆದರಿಸಬೇಕು?' ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದರು.

ನ್ಯಾಯಮೂರ್ತಿ ನಾಥ್ ಅವರ ಅಭಿಪ್ರಾಯಗಳಿಗೆ ಸಮ್ಮತಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ಮೆಹ್ತಾ, 'ನಾಯಿಗಳು 9 ವರ್ಷದ ಮಗುವಿನ ಮೇಲೆ ದಾಳಿ ಮಾಡಿದಾಗ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಅವುಗಳಿಗೆ ಆಹಾರ ನೀಡುತ್ತಿರುವ ಸಂಸ್ಥೆಯೇ? ಈ ಸಮಸ್ಯೆಗೆ ನಾವು ಕಣ್ಣು ಮುಚ್ಚಿ ಕೂರಬೇಕೆಂದು ನೀವು ಬಯಸುತ್ತೀರಿ' ಎಂದು ಹೇಳಿದರು.

ಬೀದಿ ನಾಯಿಗಳನ್ನು ಸಾಂಸ್ಥಿಕ ಪ್ರದೇಶಗಳು ಮತ್ತು ರಸ್ತೆಗಳಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ ನವೆಂಬರ್ 7, 2025ರ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಸಲ್ಲಿಸಲಾದ ಹಲವಾರು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧದಲ್ಲಿ ಭಾಗಿಯಾಗದಂತೆ ಯುರೋಪಿಯನ್ ದೇಶಗಳಿಗೆ ಇರಾನ್ ಎಚ್ಚರಿಕೆ; ಲೆಬನಾನ್ ಮೇಲೆ ಇಸ್ರೇಲ್ ದಾಳಿ

'ಅವರು ಒಬ್ಬ ಅನುಭವಿ ವ್ಯಕ್ತಿ ಎಂದು ಭಾವಿಸಿದ್ದೆ': ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ಟಾಂಗ್

ಸುನ್ನಿ ದೇಶಗಳ ಮೇಲೆ ಇರಾನ್ ಭೀಕರ ದಾಳಿ ಮಧ್ಯೆ ಒಮಾನ್, ಕುವೈತ್, ಕತಾರ್ ಮುಖ್ಯಸ್ಥರಿಗೆ ಮೋದಿ ಕರೆ, ತೀವ್ರ ಕಳವಳ!

IPL 2026: RCB ಅಭಿಮಾನಿಗಳಿಗೆ ಗುಡ್ ನ್ಯೂಸ್! ಅನುಮಾನಕ್ಕೆ ತೆರೆ

ಖಮೇನಿ ಹತ್ಯೆ ಬಗ್ಗೆ ಮೋದಿ ಮೌನ ಪ್ರಶ್ನಿಸಿದ ರಾಹುಲ್ ಗಾಂಧಿ; ಭಾರತದ ನಿಲುವು ಸ್ಪಷ್ಟಪಡಿಸುವಂತೆ ಆಗ್ರಹ

SCROLL FOR NEXT