ಸಾಂದರ್ಭಿಕ ಚಿತ್ರ 
ದೇಶ

2030 ರ ವೇಳೆಗೆ ಭಾರತ 'ಮೇಲ್ಮಧ್ಯಮ-ಆದಾಯದ' ದೇಶವಾಗುವ ಸಾಧ್ಯತೆ! SBI ವರದಿ ಹೇಳಿದ್ದೇನು?

ವಿಶ್ವ ಬ್ಯಾಂಕ್‌ನ ವರ್ಗೀಕರಣದ ಪ್ರಕಾರ, ಭಾರತ ಪ್ರಸ್ತುತ 'ಕಡಿಮೆ ಮಧ್ಯಮ-ಆದಾಯದ' ಗುಂಪಿನ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. 2007 ರಲ್ಲಿ ಈ ಸಾಧನೆಗೆ ಪಾತ್ರವಾಗಿತ್ತು.

ನವದೆಹಲಿ: ಭಾರತವು 2030 ರ ವೇಳೆಗೆ 'ಮೇಲ್ಮಧ್ಯಮ-ಆದಾಯದ' ದೇಶವಾಗುವ ಸಾಧ್ಯತೆಯಿದೆ. ಪ್ರಸ್ತುತ ಇರುವ ತಲಾ ಆದಾಯ ಸುಮಾರು $ 3,000 ರಿಂದ $ 4,000 ಕ್ಕೆ ಏರುವುದರೊಂದಿಗೆ ದೇಶ ಆರ್ಥಿಕವಾಗಿ ಪ್ರಗತಿಯಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಸೋಮವಾರದ ಸಂಶೋಧನಾ ವರದಿಯಲ್ಲಿ ತಿಳಿಸಿದೆ.

ವಿಶ್ವ ಬ್ಯಾಂಕ್‌ನ ವರ್ಗೀಕರಣದ ಪ್ರಕಾರ, ಭಾರತ ಪ್ರಸ್ತುತ 'ಕಡಿಮೆ ಮಧ್ಯಮ-ಆದಾಯದ' ಗುಂಪಿನ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ. 2007 ರಲ್ಲಿ ಈ ಸಾಧನೆಗೆ ಪಾತ್ರವಾಗಿತ್ತು.

SBI ಸಂಶೋಧನಾ ವರದಿ ಪ್ರಕಾರ, ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದ ತಲಾ ಆದಾಯದಲ್ಲಿ $ 1,000 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ತಲಾ ಆದಾಯ $1,000 ರಿಂದ $2,000 ಕ್ಕೆ ಹೆಚ್ಚಾಗಲು 10 ವರ್ಷಗಳನ್ನು ತೆಗೆದುಕೊಂಡಿತು. ಇನ್ನು ಉಳಿದ ಏಳು ವರ್ಷಗಳಲ್ಲಿ ಮತ್ತೆ $ 1,000 ಹೆಚ್ಚಾಗಿತ್ತು.

ಭಾರತ 2007 ರಲ್ಲಿ 'ಕಡಿಮೆ-ಆದಾಯದ ದೇಶ'ದಿಂದ 'ಕಡಿಮೆ-ಮಧ್ಯಮ ಆದಾಯ' ರಾಷ್ಟ್ರ ಎನಿಸಿಕೊಂಡಿತು. ಇದಕ್ಕಾಗಿ 60 ವರ್ಷಗಳನ್ನು ತೆಗೆದುಕೊಂಡಿತು. 1962 ರಲ್ಲಿದ್ದ ದೇಶದ ತಲಾ ಒಟ್ಟು ರಾಷ್ಟ್ರೀಯ ಆದಾಯ (GNI) $90 ರಿಂದ 2007 ರಲ್ಲಿ $910 ಕ್ಕೆ ಏರಿತು.

ಮುಂದಿನ ಕೆಲವು ವರ್ಷಗಳಲ್ಲಿ ದೇಶದ ತಲಾ ಒಟ್ಟು ರಾಷ್ಟ್ರೀಯ ಆದಾಯ ಸುಮಾರು $4,500 ರಷ್ಟು ಹೆಚ್ಚಾಗುವುದರೊಂದಿಗೆ (ಶೇ. 8.3 ರಷ್ಟು ತಲಾವಾರು ಸರಾಸರಿ ಬೆಳವಣಿಗೆ) ಭಾರತವು ಮೇಲ್ಮಧ್ಯಮ-ಆದಾಯದ ರಾಷ್ಟ್ರವಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್ ತಂಡ ಬರೆದಿರುವ ವರದಿಯಲ್ಲಿ ಹೇಳಲಾಗಿದೆ.

ವಿಶ್ವಬ್ಯಾಂಕ್‌ನಿಂದ ಮಿತಿ ಮಟ್ಟವನ್ನು ಪರಿಷ್ಕರಿಸದಿದ್ದಲ್ಲಿ ತಲಾ ಆದಾಯದಲ್ಲಿ ವಾರ್ಷಿಕ ಸರಾಸರಿ 7.5% ರಷ್ಟು ಬೆಳವಣಿಗೆಯೊಂದಿಗೆ 2047 ರ ವೇಳೆಗೆ ಭಾರತವು ಹೆಚ್ಚಿನ ಆದಾಯದ ರಾಷ್ಟ್ರದ ಸ್ಥಾನಮಾನ ಸಾಧಿಸಬಹುದು ಎಂದು ಎಸ್‌ಬಿಐ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ 'ನನ್ನ ಹೆಸರೇ' ಆಸರೆ! ಪ್ರಿಯಾಂಕ್ ಖರ್ಗೆ ಕಿಡಿ

BCCI ಆಟಗಾರರ ಒಪ್ಪಂದಕ್ಕೆ ಮೇಜರ್ ಸರ್ಜರಿ: Virat Kohli, Rohit Sharmaಗೆ ಡಿಮೋಷನ್, ವೇತನ ಕಡಿತ!

ಬಸ್ಸಿನಲ್ಲಿ ಲೈಂಗಿಕ ಕಿರುಕುಳ, ದೀಪಕ್ ದುರಂತ ಸಾವು: ಆರೋಪ ಮಾಡಿದ್ದ ಮಹಿಳೆ ವಿರುದ್ಧ ಕೇಸ್ ಜಡಿದ ಪೊಲೀಸರು!

ಕಚೇರಿಯಲ್ಲಿ 'ರಾಸಲೀಲೆ' ವಿಡಿಯೋ ವೈರಲ್: ಡಿಜಿಪಿ ರಾಮಚಂದ್ರರಾವ್ ತಲೆದಂಡ, ಸರ್ಕಾರ ಅಮಾನತು ಆದೇಶ

WPL 2026: ಇತಿಹಾಸ ಬರೆದ RCB, ಸೋಲೇ ಇಲ್ಲದೇ ಪ್ಲೇಆಫ್ ಗೆ ಲಗ್ಗೆ... ಫೈನಲ್ ಗೇರಲು ಸುವರ್ಣಾವಕಾಶ!

SCROLL FOR NEXT