ಸಿದ್ದರಾಮಯ್ಯ ಅಭಿಮಾನಿ ಹಚ್ಚೆ 
ರಾಜಕೀಯ

ಸಾಮಾಜಿಕ ನ್ಯಾಯದ ಹರಿಕಾರ, ಭಾಗ್ಯಗಳ ಸರದಾರ: ಬಡವರ ಪಾಲಿಗೆ ಸಿದ್ದು, ಮಾಜಿ ಸಿಎಂ 'ಅರಸು' ಅಪರಾವತಾರ!

ಸಿದ್ದರಾಮಯ್ಯ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕ ರಾಜ್ಯ ಕಂಡ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಅವರದ್ದು ಮುಂಚೂಣಿ ಹೆಸರು. ಅತ್ಯಂತ ಜನಪ್ರಿಯ ಮಾಜಿ ಸಿಎಂಗಳಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು.

ಮೈಸೂರು: ಸಿದ್ದರಾಮಯ್ಯ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕ ರಾಜ್ಯ ಕಂಡ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಅವರದ್ದು ಮುಂಚೂಣಿ ಹೆಸರು. ಅತ್ಯಂತ ಜನಪ್ರಿಯ ಮಾಜಿ ಸಿಎಂಗಳಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು.

ಹಲವು ಉಚಿತ ‘ಭಾಗ್ಯ’ಗಳ ಸರದಾರ ಎಂದೇ ಕರೆಯಲ್ಪಡುವ ಸಿದ್ದರಾಮಯ್ಯ, ಕರ್ನಾಟಕ ರಾಜ್ಯದ ಬಡವರ ಪಾಲಿಗೆ ಮಾಜಿ ಸಿಎಂ ದೇವರಾಜ ಅರಸ್ ಅವತಾರವೆಂದೇ ಪರಿಗಣಿತವಾಗಿದ್ದಾರೆ. 2ನೇ ಅವಧಿಗೆ ಮತ್ತೆ ಉನ್ನತ ಹುದ್ದೆಗೆ ಮರಳುವ ಮೂಲಕ ಇತಿಹಾಸ ಸೃಷ್ಟಿಸಿದ ಸಮಾಜವಾದಿ ನಾಯಕ ಹಾಗೂ ಅಹಿಂದ ಹೋರಾಟಗಾರ ನಿಯೋಜಿತ ಸಿಎಂ ಸಿದ್ದರಾಮಯ್ಯ ಹೆಸರು ಹೇಳಿದರೆ, ಸಮಾಜ ಸುಧಾರಣೆಯ ರೂವಾರಿ ಎಂದೇ ಹೆಸರಾಗಿದ್ದ ಕಾಂಗ್ರೆಸ್ಸಿನ ಮತ್ತೊಬ್ಬ ಜನಪ್ರಿಯ ಮುಖ್ಯಮಂತ್ರಿ ದೇವರಾಜ್ ಅರಸು ನೆನಪಾಗುತ್ತಾರೆ.

1972-77 ರಿಂದ ಕರ್ನಾಟಕದ ಮುಖ್ಯಮಂತ್ರಿಯಾಗಿ ಮತ್ತು 1978-80 ರವರೆಗೆ ಎರಡು ಅವಧಿಗೆ ಸೇವೆ ಸಲ್ಲಿಸಿದ ಡಿ ದೇವರಾಜ್ ಅರಸ್ ರಾಜ್ಯದಲ್ಲಿ ವ್ಯಾಪಕವಾದ ಸಾಮಾಜಿಕ-ಆರ್ಥಿಕ ಬದಲಾವಣೆಗಳನ್ನು ತಂದರು.

ವಾಸ್ತವವಾಗಿ, ಸಿದ್ದರಾಮಯ್ಯ ಅವರನ್ನು ರಾಜ್ಯ ರಾಜಕಾರಣದಲ್ಲಿ ಅರಸು ಅವತಾರವಾಗಿ ನೋಡಲಾಗುತ್ತದೆ. ಇಬ್ಬರು ನಾಯಕರು ಮೈಸೂರಿನಿಂದ ಬಂದವರು ಎಂಬ ಅಂಶವನ್ನು ಹೊರತುಪಡಿಸಿದರೆ ಇಬ್ಬರು ರಾಜಕೀಯ ನಾಯಕರ ನಡುವೆ ಅನೇಕ ಹೋಲಿಕೆಗಳಿವೆ.

ಉಳುವವನೇ ಭೂಮಿಯ ಮಾಲೀಕ ಇದು ಅರಸು ಅವರ ಪ್ರಸಿದ್ಧ ಕಾರ್ಯಕ್ರಮವಾಗಿತ್ತು. ಇದು ರೈತರನ್ನು ಸಬಲೀಕರಣಗೊಳಿಸುವ ಮೂಲಕ ಮತ್ತು ಊಳಿಗಮಾನ್ಯ ಪದ್ಧತಿಗೆ ಭಾರಿ ಹೊಡೆತವನ್ನು ನೀಡುವ ಮೂಲಕ ಗ್ರಾಮೀಣ ಆರ್ಥಿಕ ಭೂದೃಶ್ಯವನ್ನು ಬದಲಾಯಿಸಿತು. ಇದು ಕೆಳ ಮತ್ತು ಮಧ್ಯಮ ಸಾಮಾಜಿಕ ಗುಂಪುಗಳ ಸುಸ್ಥಿರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಯಿತು. ಈ ಕಾರ್ಯಕ್ರಮದಿಂದಾಗಿ ಅವರಿಗೆ ಅನೇಕ ರಾಜಕೀಯ ಶತ್ರುಗಳು ಎದುರಾದರು. ರಾಜ್ಯ ರಾಜಕೀಯದಲ್ಲಿ ಅವರು ಮಹತ್ವದ ಸ್ಥಾನ ಪಡೆದರು.

ಅಂತೆಯೇ, ಸಿದ್ದರಾಮಯ್ಯನವರ ಅಹಿಂದ ಚಳುವಳಿ ಅವರನ್ನು ಮಾಸ್ ಲೀಡರ್ ಆಗಿ ಪರಿವರ್ತಿಸಿತು. 80 ರ ದಶಕದ ಆರಂಭದಲ್ಲಿ ಸಮಾಜವಾದಿ ಚಿಂತನೆಯ ಶಾಲೆಯಿಂದ ವಕೀಲರಾಗಿದ್ದ ಸಿದ್ದಾರಾಮಯ್ಯ ರಾಜಕಾರಣಿಯಾಗಿ ಬದಲಾದರು.  ಜಾತ್ಯತೀತತೆ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಸಬಲೀಕರಣದ ಮೇಲೆ  ಅವರ ಗಮನ ಕೇಂದ್ರೀಕೃತವಾಗಿತ್ತು ಇದು ಅವರಿಗೆ ಜನಸಾಮಾನ್ಯರೊಂದಿಗೆ ಸಂಪರ್ಕವನ್ನು ಮಾತ್ರವಲ್ಲದೆ ಚುನಾವಣೆಯಲ್ಲಿ ಹೆಚ್ಚಿನ ಲಾಭ ಸಹ ನೀಡಿತು, ಅಹಿಂದ ಮತಗಳಲ್ಲಿ 80% ಕ್ಕಿಂತ ಹೆಚ್ಚು ಕಾಂಗ್ರೆಸ್ ಪಕ್ಷಕ್ಕೆ ಬಂತು.

ಮುಖ್ಯಮಂತ್ರಿ ರೇಸ್‌ನಲ್ಲಿ, ಒಕ್ಕಲಿಗರು, ಲಿಂಗಾಯತರು, ದಲಿತರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಶೇಕಡಾ 75 ಕ್ಕೂ ಹೆಚ್ಚು ಶಾಸಕರು ಅವರಿಗೆ ಬೆಂಬಲ ನೀಡಿದರು. ಅಹಿಂದ ನಾಯಕನ ಬಜೆಟ್ ಪ್ರಸ್ತಾವನೆಗಳು ದೀನದಲಿತರು, ದಲಿತರು, ರೈತರು, ಮಹಿಳೆಯರು ಮತ್ತು ಧ್ವನಿರಹಿತರಿಗೆ ಅವರ ಅನೇಕ ಭಾಗ್ಯ ಯೋಜನೆಗಳ ಮೂಲಕ ಪ್ರಯೋಜನಗಳನ್ನು ನೀಡುವುದರ ಮೇಲೆ ಕೇಂದ್ರೀಕರಿಸುತ್ತವೆ.

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ/ಎಸ್‌ಟಿ ನಿಧಿ ಹಂಚಿಕೆ, ಬಡ್ತಿಯಲ್ಲಿ ಮೀಸಲಾತಿ ಮುಂದುವರಿಸುವುದು, ಜಾತಿ ಎಣಿಕೆ ನಡೆಸುವುದು ಮುಂತಾದ ಸಾಮಾಜಿಕ ವಲಯದ ಕಾರ್ಯಕ್ರಮಗಳನ್ನು ಅವರು ಮಂಡಿಸಿದರು. ಭೂರಹಿತ ದಲಿತರ ಭೂಮಿ ಖರೀದಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮಗಳನ್ನು ಸಹ ಹೊರತಂದರು. ಅವರು ಬಡ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ಧನಸಹಾಯ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT