ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದು ಚುನಾವಣೆ ಸಮಯ ಬಂದಾಗ ನಿರ್ಧಾರ ಆಗಲಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನ ಎಲ್ಲಾ ಕಡೆ ನಮ್ಮನ್ನೇ ಪ್ರೀತಿಸ್ತಾರೆ. ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ನನ್ನನ್ನು ಕರೆಯುತ್ತಾರೆ. ಹಾಗಾಗಿ ನಾನು ಎಲ್ಲಾ ಕಡೆ ಹೋಗಬೇಕಾಗುತ್ತೆ. ಇದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ.
ಸದನದಲ್ಲೂ ನಮ್ಮ ಸಂಖ್ಯೆ ನೋಡಿ ಅಪಹಾಸ್ಯ ಮಾಡಿದ್ದಾರೆ. ಹಾಗಾಗಿ ಪಕ್ಷ ಕಟ್ಟಿ ತೋರಿಸ್ತೀವಿ. NDA ಸರ್ಕಾರ ರಚನೆ ಮಾಡ್ತೀವಿ. ಎಲ್ಲಿ ಸ್ಪರ್ಧೆ ಎನ್ನುವುದು ಮುಂದೆ ತೀರ್ಮಾನ ಮಾಡೋಣ. ನಮ್ಮ ಉದ್ದೇಶ ನಮ್ಮ ಗುರಿ ಈಡೇರಬೇಕು. ಜೆಡಿಎಸ್ ಎಲ್ಲಿದೆ ಅಂತಾರೆ. ವಿಧಾನಸಭೆಯಲ್ಲಿ ಹೇಗೆ ಚರ್ಚೆ ಆಗುತ್ತೆ ನೋಡಿದ್ದೇವೆ. ಪಕ್ಷ ಕಟ್ಟಿ ತೋರಿಸ್ತೇವೆ. ನಮ್ಮ ಗುರಿ ಮೈತ್ರಿ ಅಧಿಕಾರಕ್ಕೆ ಬರಬೇಕು ಎಂದಿದ್ದಾರೆ.
ನಾವು ಯಾವುದೇ ಬೇಡಿಕೆ ಇಟ್ಟು ನಾವು ಮೈತ್ರಿ ಮಾಡಿಕೊಂಡಿಲ್ಲ. ಮೋದಿ, ಅಮಿತ್, ಕೇಂದ್ರದ ನಾಯಕರು ಏನು ನಿರ್ಧಾರ ಮಾಡ್ತಾರೋ ಅದಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ಸ್ಪಷ್ಟಪಡಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಕೂಟದಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ ಎಂದು ನಿಖಿಲಿ ತಿಳಿಸಿದ್ದಾರೆ.