ನೆರವು ನೀಡಿದ ಪೊಲೀಸರ ಜೊತೆ ಯಶ್ವಂತಿ 
ವಿಶೇಷ

ತಡ ರಾತ್ರಿ ಪೊಲೀಸರಿಂದಲೇ ಮಹಿಳೆಯರಿಗೆ ಮನೆ ತನಕ ಡ್ರಾಪ್: ಆಂಧ್ರ ಪೊಲೀಸರ ನೂತನ ಯೋಜನೆಗೆ ಶ್ಲಾಘನೆ

ಕಾಕಿನಾಡ ನಗರದ ನಿವಾಸಿ ಯಶ್ವಂತಿ ವಿಶಾಖಪಟ್ಟಣಂ ನಿಂದ ನಗರಕ್ಕೆ ಬರುವಾಗ ತಡವಾಗಿತ್ತು. ಸಂಜೆ ತಲುಪಬೇಕಿದ್ದ ಬಸ್ಸು, ದಾರಿ ಮಧ್ಯ ಕೆಟ್ಟಿದ್ದರಿಂದ ತಡವಾಗಿತ್ತು. 

ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಡರಾತ್ರಿ ಮನೆಗೆ ಹಿಂದಿರುಗುವ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗೆ ಡ್ರಾಪ್ ಮಾಡುವುದೇ ಆ ಯೋಜನೆ.

ಮಹಿಳೆಯರ ಸುರಕ್ಷತೆಯ ಕುರಿತು ಎದ್ದಿರುವ ಅಪಸ್ವರದ ಬೆನ್ನಲ್ಲೇ ಪೊಲೀಸರ ಈ ಕ್ರಮಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಕಿನಾಡ ನಗರದ ನಿವಾಸಿ ಯಶ್ವಂತಿ ವಿಶಾಖಪಟ್ಟಣಂ ನಿಂದ ನಗರಕ್ಕೆ ಬರುವಾಗ ತಡವಾಗಿತ್ತು. ಸಂಜೆ ತಲುಪಬೇಕಿದ್ದ ಬಸ್ಸು, ದಾರಿ ಮಧ್ಯ ಕೆಟ್ಟಿದ್ದರಿಂದ ತಡವಾಗಿತ್ತು. 

ಆಗ ಸಮಯ ಮಧ್ಯರಾತ್ರಿ 1ರ ಅಸುಪಾಸು. ಆ ಸಮಯದಲ್ಲಿ ಒಬ್ಬರೇ ರಸ್ತೆಯಲ್ಲಿ ನಡೆದುಹೋಗಲೂ ಅವರಿಗೆ ಭಯವಾಯಿತು. ಇನ್ನು ರಿಕ್ಷಾ ಹಿಡಿಯಲು ಕೂಡಾ ಮನಸ್ಸು ತಡವರಿಸಿತು. ಆ ಸಮಯದಲ್ಲಿ ಅವರಿಗೆ ನೆನಪಾಗಿದ್ದು 'ಮಹಿಳೆಯರನ್ನು ಮನೆಗೆ ಸುರಕ್ಷಿತವಾಗಿ ಡ್ರಾಪ್' ಮಾಡುವ ಪೊಲೀಸರ ವಿನೂತನ ಸಹಾಯವಾಣಿ. ಬೇರೆ ದಾರಿ ಕಾಣದೆ ಯಶ್ವಂತಿ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿದ್ದರು.

ಯಶ್ವಂತಿ ತಮ್ಮ ಪರಿಸ್ಥಿತಿಯನ್ನು ಪೊಲೀಸರಿಗೆ ಮನವರಿಕೆ ಮಾಡಿ, ತಾವು ಮನೆಗೆ ತಲುಪಲು ಸಹಾಯ ಮಾಡುವಂತೆ ಕೇಳಿಕೊಂಡರು. ತಕ್ಷಣವೇ ಮನವಿಗೆ ಪೊಲೀಸರು ಸ್ಪಂದಿಸಿದ್ದರು. ಯಶ್ವಂತಿ ಇದ್ದಲ್ಲಿಗೇ ಇನ್ಸ್ ಪೆಕ್ತರ್ ಮತ್ತು ಆಗ ರೌಂಡ್ಸ್ ನಲ್ಲಿದ್ದ ಪೇದೆಗಳು ಬಂದರು. ಯಶ್ವಂತಿಯನ್ನು ಪೊಲೀಸರು ಸುರಕ್ಷಿತವಾಗಿ ಅವರ ಮನೆಗೆ ಕರೆದೊಯ್ದರು. ಇದೊಂಡು ಉದಾಹರಣೆಯಷ್ಟೇ.

Women Drop at Home ಎಂಬ ಹೆಸರಿನ ಈ ಯೋಜನೆ, ಎಸ್ಪಿ ರವೀಂದ್ರನಾಥ್ ಬಾಬು ಅವರ ಪರಿಕಲ್ಪನೆ. ಈ ಯೋಜನೆ ಶುರುವಾದಾಗಿನಿಂದಲೂಆಸಂಖ್ಯ ಮಹಿಳೆಯರಿಗೆ ರಾತ್ರಿ ವೇಳೆ ಪೊಲೀಸರ ನೆರವು ಒದಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT