ಸಾಂದರ್ಭಿಕ ಚಿತ್ರ 
ವಿಶೇಷ

ಪತ್ನಿಯ ಕೊನೆಯಾಸೆ ಈಡೇರಿಸಿದ ಪತಿ: ಉಜ್ಜೈನಿ ದೇಗುಲಕ್ಕೆ 17 ಲಕ್ಷ ರೂ. ಚಿನ್ನಾಭರಣ ದೇಣಿಗೆ

ರಶ್ಮಿ ಪ್ರಭಾ ಎಂಬ ಮಹಿಳೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯದ ಭಕ್ತೆಯಾಗಿದ್ದರು. ಆಕೆ ಕಾಯಿಲೆಗೆ ತುತ್ತಾಗಿ ಹಾಸಿಗೆಯಿಂದ ಮೇಲೇಳಲು ಆಗದ ಸ್ಥಿತಿ ನಿರ್ಮಾಣವಾಗಿತ್ತು.

ರಾಂಚಿ: ಜಾರ್ಖಂಡ್ ರಾಜ್ಯದ ವ್ಯಕ್ತಿಯೋರ್ವ ತನ್ನ ಪತ್ನಿಯ ಕಡೆಯಾಸೆಯಂತೆ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಉಜ್ಜೈನಿ ದೇಗುಲಕ್ಕೆ ದೇಣಿಗೆ ನೀಡಿದ ಅಚ್ಚರಿಯ ಘಟನೆ ನಡೆದಿದೆ. 

ರಶ್ಮಿ ಪ್ರಭಾ ಎಂಬ ಮಹಿಳೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯದ ಭಕ್ತೆಯಾಗಿದ್ದರು. ಆಕೆ ಆಗಾಗ್ಗೆ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ಆಕೆ ಕಾಯಿಲೆಗೆ ತುತ್ತಾಗಿ ಹಾಸಿಗೆಯಿಂದ ಮೇಲೇಳಲು ಆಗದ ಸ್ಥಿತಿ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಸಾಯುವ ಮುನ್ನ ದೇಗುಲಕ್ಕೆ ೧೭ ಲಕ್ಷ ರೂ. ಚಿನ್ನಾಭರಣ ದೇಣಿಗೆ ನೀಡಬೇಕು ಎಂಬ ಬಯಕೆಯನ್ನು ಪತಿ ಬಳಿ ಹಂಚಿಕೊಂಡಿದ್ದರು. ಅದರಂತೆಯೇ ಪತ್ನಿಯ ಕಡೆಯಾಸೆಯನ್ನು ಪತಿ ನೆರವೇರಿಸಿದ್ದಾರೆ. 

ಜೂನ್೨೮ರಂದು ದೇವಸ್ಥಾನವನ್ನು ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗಿತ್ತು. ಅಂದಿನಿಂದ ಅಕ್ಟೋಬರ್ ೧೫ರ ತನಕ ೨೩ ಕೋಟಿಗೂ ಅಧಿಕ ಹಣ ಭಕ್ತಾದಿಗಳಿಂದ ಸಂಗ್ರಹವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT