ವಿಗ್ರಹ ಹಸ್ತಾಂತರಿಸುತ್ತಿರುವ ಐಜಿಪಿ ರವಿದೀಪ್ ಸಿಂಗ್ 
ವಿಶೇಷ

ಕೈದಿಗಳೇ ಮಾಡಿದ ಗಣೇಶ ಮೂರ್ತಿಗಳು ಭರ್ಜರಿ ಮಾರಾಟ: ಐದೇ ನಿಮಿಷಗಳಲ್ಲಿ ಎಲ್ಲಾ ಸೇಲ್

ಮುಂಬರುವ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನ, ಬೇಕರಿ, ಕ್ಯಾಂಟೀನ್ ಮತ್ತು ಗೋಶಾಲೆ ನಿರ್ಮಾಣ ಯೋಜನೆಯನ್ನು ಕಾರಾಗೃಹ ಅಧಿಕಾರಿಗಳು ಹೊಂದಿದ್ದಾರೆ. 

ಪುದುಚೆರಿ: ಗಣೇಶ ಚತುರ್ಥಿಯ ದಿನ ಸಕಲರಿಗೂ ಒಳ್ಳೆಯದನ್ನು ಮಾಡುವುದೆಂಬ ನಂಬಿಕೆ ಪುದುಚೆರಿ ಕೈದಿಗಳ ವಿಚಾರದಲ್ಲಿ ನಿಜವಾಗಿದೆ. ಅವರು ತಯಾರಿಸಿದ್ದ 51 ಮೂರ್ತಿಗಳು ಕೇವಲ ಐದೇ ನಿಮಿಷಗಳಲ್ಲಿ ಸೇಲಾಗಿರುವುದು ಅದಕ್ಕೆ ಸಾಕ್ಷಿ. ಕೈದಿಗಳ ಸುಧಾರಣಾ ಕಾರ್ಯಕ್ರಮದ ಅಂಗವಾಗಿ ಕಾರಾಗೃಹ ಅಧಿಕಾರಿಗಳು ಕೈದಿಗಳ ಕೈಲಿ ವಿಗ್ರಹಗಳನ್ನು ಮಾಡಿಸಿದ್ದರು.

ಪುದುಚೆರಿ ಜೈಲಿನಲ್ಲಿ ವಿಗ್ರಹ ರಚನೆ ಸೇರಿದಂತೆ ಬಟ್ಟೆ ಹೊಲಿಯುವುದು, ಯೋಗ ಮತ್ತಿತರ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಅರಬಿಂದೊ ಸೊಸೈಟಿ ಸಹಯೋಗದಲ್ಲಿ ಜೈಲು ಸುಧಾರಣಾ ಕಾರ್ಯಕ್ರಮ ನಡೆಸಲಾಗುತ್ತಿದೆ.

ಗಣೇಶ ವಿಗ್ರಹ ಮಾರಾಟದಿಂದ ಸಂತುಷ್ಟರಾಗಿರುವ ಅಧಿಕಾರಿ ವರ್ಗ ವಿಗ್ರಹಗಳಿಗೆ ಇನ್ನೂ ಬೇಡಿಕೆ ಬರುತ್ತಲೇ ಇದೆ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನ, ಬೇಕರಿ, ಕ್ಯಾಂಟೀನ್ ಮತ್ತು ಗೋಶಾಲೆ ನಿರ್ಮಾಣ ಯೋಜನೆಯನ್ನು ಕಾರಾಗೃಹ ಅಧಿಕಾರಿಗಳು ಹೊಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT