ವಿಗ್ರಹ ಹಸ್ತಾಂತರಿಸುತ್ತಿರುವ ಐಜಿಪಿ ರವಿದೀಪ್ ಸಿಂಗ್ 
ವಿಶೇಷ

ಕೈದಿಗಳೇ ಮಾಡಿದ ಗಣೇಶ ಮೂರ್ತಿಗಳು ಭರ್ಜರಿ ಮಾರಾಟ: ಐದೇ ನಿಮಿಷಗಳಲ್ಲಿ ಎಲ್ಲಾ ಸೇಲ್

ಮುಂಬರುವ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನ, ಬೇಕರಿ, ಕ್ಯಾಂಟೀನ್ ಮತ್ತು ಗೋಶಾಲೆ ನಿರ್ಮಾಣ ಯೋಜನೆಯನ್ನು ಕಾರಾಗೃಹ ಅಧಿಕಾರಿಗಳು ಹೊಂದಿದ್ದಾರೆ. 

ಪುದುಚೆರಿ: ಗಣೇಶ ಚತುರ್ಥಿಯ ದಿನ ಸಕಲರಿಗೂ ಒಳ್ಳೆಯದನ್ನು ಮಾಡುವುದೆಂಬ ನಂಬಿಕೆ ಪುದುಚೆರಿ ಕೈದಿಗಳ ವಿಚಾರದಲ್ಲಿ ನಿಜವಾಗಿದೆ. ಅವರು ತಯಾರಿಸಿದ್ದ 51 ಮೂರ್ತಿಗಳು ಕೇವಲ ಐದೇ ನಿಮಿಷಗಳಲ್ಲಿ ಸೇಲಾಗಿರುವುದು ಅದಕ್ಕೆ ಸಾಕ್ಷಿ. ಕೈದಿಗಳ ಸುಧಾರಣಾ ಕಾರ್ಯಕ್ರಮದ ಅಂಗವಾಗಿ ಕಾರಾಗೃಹ ಅಧಿಕಾರಿಗಳು ಕೈದಿಗಳ ಕೈಲಿ ವಿಗ್ರಹಗಳನ್ನು ಮಾಡಿಸಿದ್ದರು.

ಪುದುಚೆರಿ ಜೈಲಿನಲ್ಲಿ ವಿಗ್ರಹ ರಚನೆ ಸೇರಿದಂತೆ ಬಟ್ಟೆ ಹೊಲಿಯುವುದು, ಯೋಗ ಮತ್ತಿತರ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಅರಬಿಂದೊ ಸೊಸೈಟಿ ಸಹಯೋಗದಲ್ಲಿ ಜೈಲು ಸುಧಾರಣಾ ಕಾರ್ಯಕ್ರಮ ನಡೆಸಲಾಗುತ್ತಿದೆ.

ಗಣೇಶ ವಿಗ್ರಹ ಮಾರಾಟದಿಂದ ಸಂತುಷ್ಟರಾಗಿರುವ ಅಧಿಕಾರಿ ವರ್ಗ ವಿಗ್ರಹಗಳಿಗೆ ಇನ್ನೂ ಬೇಡಿಕೆ ಬರುತ್ತಲೇ ಇದೆ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನ, ಬೇಕರಿ, ಕ್ಯಾಂಟೀನ್ ಮತ್ತು ಗೋಶಾಲೆ ನಿರ್ಮಾಣ ಯೋಜನೆಯನ್ನು ಕಾರಾಗೃಹ ಅಧಿಕಾರಿಗಳು ಹೊಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT