ರಿಕ್ಷಾದಲ್ಲೇ ಉದ್ಯಾನ ಸೃಷ್ಟಿಸಿರುವ ಪರಿಸರ ಪ್ರೇಮಿ ಅಟೋ ಚಾಲಕ ಬಾಬು 
ವಿಶೇಷ

ರಿಕ್ಷಾದೊಳಗೆ ಉದ್ಯಾನ ನಿರ್ಮಿಸಿದ ಪರಿಸರಪ್ರೇಮಿ ಆಟೋ ಚಾಲಕ: ತಿರುಪತಿಯಲೊಂದು ವಿಶಿಷ್ಟ ಆಟೋ ರಿಕ್ಷಾ

ಅನೇಕರು ಮನೆ ಮುಂದೆ ಉದ್ಯಾನವನ ನಿರ್ಮಿಸಿಕೊಳ್ಳುತ್ತಾರೆ. ಟೆರೇಸ್ ಮೇಲುಗಡೆಯೂ ಕೆಲವರು ಪುಟ್ಟ ಉದ್ಯಾನವನ ನಿರ್ಮಿಸುತ್ತಾರೆ. ಆದರೆ ತಿರುಪತಿಯ ಕಂಪಲ ಬಾಬು ಅವರು ತಮ್ಮ ಆಟೋ ರಿಕ್ಷಾ ಒಳಗೇ ಉದ್ಯಾನ ನಿರ್ಮಿಸಿಕೊಂಡಿದ್ದಾರೆ. 

ತಿರುಪತಿ: ತಿರುಪತಿ ನಿವಾಸಿ ಆಟೋ ರಿಕ್ಷಾ ಚಾಲಕ ಕೊಂಪಲ ಬಾಬು ಅವರು ಓರ್ವ ಪರಿಸರ ಪ್ರೇಮಿ. 58 ವರ್ಷದ ಅವರು ಕಳೆದ ಹಲವು ವರ್ಷಗಳಿಂದ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತಮ್ಮ ಪರಿಸರ ಪ್ರೇಮವನ್ನು ಸಾರಲು ಅವರು ಬಳಸಿಕೊಂಡಿದ್ದು ತಮ್ಮ ರಿಕ್ಷಾವನ್ನೇ.

ಅನೇಕರು ಮನೆ ಮುಂದೆ ಉದ್ಯಾನವನ ನಿರ್ಮಿಸಿಕೊಳ್ಳುತ್ತಾರೆ. ಟೆರೇಸ್ ಮೇಲುಗಡೆಯೂ ಕೆಲವರು ಪುಟ್ಟ ಉದ್ಯಾನವನ ನಿರ್ಮಿಸುತ್ತಾರೆ. ಆದರೆ ತಿರುಪತಿಯ ಕಂಪಲ ಬಾಬು ಅವರು ತಮ್ಮ ಆಟೋ ರಿಕ್ಷಾ ಒಳಗೇ ಉದ್ಯಾನ ನಿರ್ಮಿಸಿಕೊಂಡಿದ್ದಾರೆ. 

ಇದರಿಂದಾಗಿ ಪ್ರಯಾಣಿಕರು ರಿಕ್ಷಾಗೆ ಆಕರ್ಷಿತರಾಗುತ್ತಿದ್ದಾರೆ. ಹಲವು ಮಂದಿ ಪ್ರಯಾಣಿಕರು ಈ ರಿಕ್ಷಾದಲ್ಲಿ ಕುಳಿತರೆ ಉದ್ಯಾನವನದಲ್ಲಿ ಕುಳಿತ ಅನುಭವವಾಗುತ್ತದೆ ಎಂದು ಹೇಳಿರುವುದಾಗಿ ಬಾಬು ಅವರು ಹೇಳುತ್ತಾರೆ. 

ಸುಮಾರು 300 ಮಂದಿ ಕಾಯಂ ಪ್ರಯಾಣಿಕರು ಬಾಬು ಅವರ ಫೋನ್ ನಂಬರ್ ಪಡೆದುಕೊಂಡಿದ್ದಾರೆ. ಏನೇ ಅಗತ್ಯವಿದ್ದರೂ ಬಾಬು ಅವರ ರಿಕ್ಷಾವನ್ನು ಬಳಸಿಕೊಳ್ಳುತ್ತಿದ್ದಾರೆ. ಬಾಬು ತಮ್ಮ ಮನೆಯಲ್ಲಿ ನರ್ಸರಿ ಹೊಂದಿದ್ದಾರೆ. ಆಸಕ್ತಿ ಇದ್ದವರಿಗೆ ಉಚಿತವಾಗಿ ಗಿಡಗಳನ್ನು ನೀಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT