ಪರಿಸರ ನಾಶ ವಿರುದ್ಧ ಸೈಕ್ಲಿಸ್ಟ್ ಸಹೋದರರ ಸವಾಲ್: 48 ಗಂಟೆಗಳಲ್ಲಿ 5,000 ಸಸಿ ನೆಟ್ಟು ದಾಖಲೆ

ಪುಸ್ತಕ ತಿರುವಿ ಹಾಕುವಾಗ ಅಮ್ಮ ಇಟ್ಟಿದ್ದ ಎಲೆಯೊಂದು ಕೆಳಕ್ಕೆ ಬಿದ್ದಿತ್ತು. ಅದನ್ನು ಇಬ್ಬರೂ ಸೇರಿ ನೆಟ್ಟಿದ್ದರು. ಹೀಗೆ ಲಾಕ್ ಡೌನ್ ಸಮಯದಲ್ಲಿ ಪ್ರತಿದಿನ ಗಿಡ ನೆಡುವ ಹವ್ಯಾಸವನ್ನು ಇಬ್ಬರೂ ರೂಢಿಸಿಕೊಂಡಿದ್ದರು. 
ಸೈಕ್ಲಿಸ್ಟ್ ಸೋದರರು
ಸೈಕ್ಲಿಸ್ಟ್ ಸೋದರರು
Updated on

ಚೆನ್ನೈ: ಲಾಕ್ ಡೌನ್ ಸಮಯದಲ್ಲಿ ಶುರುವಾದ ಹವ್ಯಾಸವೊಂದು ಸೋದರರಿಬ್ಬರಿಗೆ ಖ್ಯಾತಿ ತಂದುಕೊಟ್ಟಿದೆ. ಅದೂ ಸದುದ್ದೇಶಕ್ಕೆ ಸಿಕ್ಕ ಮನ್ನಣೆ. ತಮಿಳುನಾಡಿನ ವೆಂಬಕೊಟ್ಟೈ ನಗರದ ನಿವಾಸಿಗಳಾದ ಅರುಣ್(25) ಮತ್ತು ಶ್ರೀಕಾಂತ್(22) ಇಬ್ಬರೂ ಲಾಕ್ ಡೌನ್ ಸಮಯದಲ್ಲಿ ಪುಸ್ತಕವನ್ನು ತಿರುವಿ ಹಾಕುತ್ತಿದ್ದರು. 

ಆ ಸಂದರ್ಭದಲ್ಲಿ ಅಮ್ಮ ಇಟ್ಟಿದ್ದ ಎಲೆಯೊಂದು ಕೆಳಕ್ಕೆ ಬಿದ್ದಿತ್ತು. ಅದನ್ನು ಇಬ್ಬರೂ ಸೇರಿ ನೆಟ್ಟಿದ್ದರು. ಹೀಗೆ ಲಾಕ್ ಡೌನ್ ಸಮಯದಲ್ಲಿ ಪ್ರತಿದಿನ ಗಿಡ ನೆಡುವ ಹವ್ಯಾಸವನ್ನು ಇಬ್ಬರೂ ರೂಢಿಸಿಕೊಂಡಿದ್ದರು. 

ಸಸಿ ನೆಡುತ್ತಿರುವ ಅರುಣ್ ಮತ್ತು ಶ್ರೀಕಾಂತ್
ಸಸಿ ನೆಡುತ್ತಿರುವ ಅರುಣ್ ಮತ್ತು ಶ್ರೀಕಾಂತ್

ಸಹೋದರರಿಬ್ಬರೂ ಸೈಕ್ಲಿಸ್ಟ್ ಗಳು. ಶ್ರೀಕಾಂತ್ ರಾಷ್ಟ್ರಮಟ್ಟದ ಸೈಕಲ್ ಪಟು. ಇಬ್ಬರೂ ಸೇರಿ 2 ದಿನಗಳ ಕಾಲ ಸೈಕಲ್ ತುಳಿಯುತ್ತಲೇ 5,000 ಸಸಿಗಳನ್ನು ನೆಟ್ಟಿದ್ದಾರೆ. ಅದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಪಾತ್ರವಾಗಿದೆ.

ಕೊರೊನಾ ಬರುವುದಕ್ಕೂ ಮೊದಲು ಅವರು ಸೈಕ್ಲಿಂಗ್ ಫಾರ್ ರೀಸೈಕ್ಲಿಂಗ್ ಎನ್ನುವ ಸೈಕ್ಲಿಂಗ್ ಅಭಿಯಾನ ನಡೆಸಿದ್ದರು. ಅದರಂತೆ ಸೈಕಲ್ನಲ್ಲಿಯೇ ಇಬ್ಬರೂ ಸೋದರರು ಕನ್ಯಾಕುಮಾರಿ ತನಕ ಪರಿಸರ ಜಾಗೃತಿ ಜಾಥಾ ನಡೆಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com