ಸಾಂದರ್ಭಿಕ ಚಿತ್ರ 
ವಿಶೇಷ

ವಿಮಾನ 2 ಗಂಟೆ ತಡವಾದುದಕ್ಕೆ ಪ್ರಯಾಣಿಕರಿಗೆ ಗಗನಸಖಿಯರ ಪತ್ರ: ಕೋಪ ಶಮನಕ್ಕೆ ವಿನೂತನ ಮಾರ್ಗ

ಕಾಲು ಗಂಟೆ ವಿಮಾನ ಬಸ್ಸು, ರೈಲು ಬರುವುದು ತಡವಾದರೂ ಸಿಡಿಮಿಡಿಗುಟ್ಟುವ ಪ್ರಯಾಣಿಕರು 2 ಗಂಟೆ ವಿಮಾನ ವಿಳಂಬವಾದರೂ ಶಾಂತರಾಗಿದ್ದರು. ಅದಕ್ಕೆ ಕಾರಣವಾಗಿದ್ದು ಇಬ್ಬರು ಗಗನಸಖಿಯರ ವಿನೂತನ ಮಾರ್ಗ 

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಆಂಧ್ರಪ್ರದೇಶದ ಕರ್ನೂಲಿಗೆ ಹೊರಡಲಿದ್ದ ವಿಮಾನ 2 ಗಂಟೆ ತಡವಾಗಿತ್ತು. ಏರ್ ಇಂಡಿಗೊ ವಿಮಾನದಲ್ಲಿ ಈ ಘಟನೆ ನಡೆದಿದೆ.

ಕಾಲು ಗಂಟೆ ವಿಮಾನ ಬಸ್ಸು, ರೈಲು ಬರುವುದು ತಡವಾದರೂ ಸಿಡಿಮಿಡಿಗುಟ್ಟುವ ಪ್ರಯಾಣಿಕರು 2 ಗಂಟೆ ವಿಮಾನ ವಿಳಂಬವಾದರೂ ಶಾಂತರಾಗಿದ್ದರು. ಅದಕ್ಕೆ ಕಾರಣವಾಗಿದ್ದು ಇಬ್ಬರು ಗಗನಸಖಿಯರ ವಿನೂತನ ಮಾರ್ಗ 

ಕರ್ನೂಲಿನಲ್ಲಿ ವಿಪರೀತ ಮಳೆ ಇದ್ದುದರಿಂದ ಅಲ್ಲಿನ ಎಟಿಸಿ ವಿಮಾನ ಇಳಿಸಲು ಅನುಮತಿ ನೀಡಿರಲಿಲ್ಲ. ಹೀಗಾಗಿ ಬೆಂಗಳೂರಿನಿಂದ ಬೆಳಿಗ್ಗೆ 9 ಗಂಟೆಗೆ ಹೊರಡಬೇಕಿದ್ದ ವಿಮಾನ ಹೊರಟಿರಲಿಲ್ಲ. 

ಪ್ರಯಾಣಿಕರು ಕೋಪಗೊಳ್ಳುವ ಸೂಚನೆ ಸಿಕ್ಕಾಕ್ಷಣವೇ  ಇಬ್ಬರು ಗಗನಸಖಿಯರಾದ ಮೃದುಲ ಮತ್ತು ಮೆರೆಂತುಲಾ ಅವರು ತಾವೇ ಖುದ್ದಾಗಿ ಪ್ರತಿ ಪ್ರಯಾಣಿಕರಿಗೂ ವಿಳಂಬಕ್ಕೆ ಕ್ಷಮೆ ಕೋರಿ ಪತ್ರ ಬರೆದಿದ್ದರು.

ಹವಾಮಾನ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಹೀಗಾಗಿ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ವಿಮಾನ ಹಾರಾಟ ತಡವಾಗುತ್ತಿದೆ. ಕರ್ನೂಲು ಎಟಿಸಿ ಯಿಂದ ವಿಮಾನ ಲ್ಯಾಂಡಿಂಗ್ ಗೆ ಅನುಮತಿ ಸಿಕ್ಕ ಕೂಡಲೆ ವಿಮಾನ ಹೊರಡಲಿದೆ ಎಂಬುದಾಗಿ ಪತ್ರದಲ್ಲಿ ಬರೆಯಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT