ವಿಶೇಷ

ಕೊಪ್ಪಳ: ಈ ಗ್ರಾಮಗಳ ಪ್ರತಿಯೊಂದು ಮನೆಗಳಲ್ಲಿ ಮಲಿಯಪ್ಪ, ಮಲಿಯವ್ವ ಹೆಸರಿನವರು ಇರುತ್ತಾರೆ ಏಕೆ?

Sumana Upadhyaya

ಕೊಪ್ಪಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರತಿ ಮನೆಯಲ್ಲೂ ಮಲಿಯಪ್ಪ ಅಥವಾ ಮಲಿಯವ್ವ ಎಂಬ ಪುರುಷ, ಮಹಿಳೆ ಇದ್ದಾರೆ. ಶತಮಾನದಿಂದಲೂ ಈ ಊರಿನವರು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದು, ಮಳೆ ದೇವರನ್ನು ಒಲಿಸಿಕೊಳ್ಳಲು ಹಾಗೂ ಈ ಒಣ ಪ್ರದೇಶದಲ್ಲಿ ಬರ ಬರದಂತೆ ತಡೆಯಲು ಆಗಿದೆ. 

ಈ ಗ್ರಾಮದ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗಾದರೂ ಮಲಿಯಪ್ಪ ಅಥವಾ ಮಲಿಯವ್ವ ಎಂದು ಹೆಸರಿಡದೆ ಇರುವುದಿಲ್ಲ. 15 ಗ್ರಾಮಗಳಲ್ಲಿ ಈ ಹೆಸರಿನ ನೂರಾರು ಗ್ರಾಮಸ್ಥರಿದ್ದಾರೆ. ಮಲಿ ಎಂದರೆ ಮಳೆ ಮತ್ತು ಯಪ್ಪ ಅಥವಾ ಯಮ್ಮ ಉತ್ತರ ಕರ್ನಾಟಕದ ಹಿರಿಯರನ್ನು ಸಂಬೋಧಿಸಲು ಬಳಸುವ ಆಡುಮಾತಿನ ಪದಗಳಾಗಿವೆ.

ಕೊಪ್ಪಳ ಪಟ್ಟಣದಿಂದ 41 ಕಿಲೋ ಮೀಟರ್ ದೂರದಲ್ಲಿರುವ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಇದೇ ಹೆಸರಿನ ದೇವಸ್ಥಾನದ ಆಳ್ವಿಕೆಯ ದೇವರು ಮಲೆ ಮಲ್ಲೇಶ್ವರನ ಭಕ್ತರು ಈ ಗ್ರಾಮಸ್ಥರು. ಹಳ್ಳಿಯ ಹೊರವಲಯದಲ್ಲಿರುವ ಸಣ್ಣ ಬೆಟ್ಟದ ಮೇಲಿರುವ ಈ ಹಳೆಯ, ಸಣ್ಣ ದೇವಾಲಯವು ಈ ಪ್ರದೇಶದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ದೇಗುಲದ ಬಳಿ ಒಂದು ಸರೋವರವಿದೆ, ದೇವಸ್ಥಾನಕ್ಕೆ ಭೇಟಿ ನೀಡುವ ಜನರು ಅದರಿಂದ ಸ್ವಲ್ಪ ಪ್ರಮಾಣದ ನೀರನ್ನು ತಮ್ಮ ಹೊಲಗಳಿಗೆ ಸುರಿಯುತ್ತಾರೆ, ಅದು ಅವರಿಗೆ ಉತ್ತಮ ಬೆಳೆಗಳನ್ನು ನೀಡುತ್ತದೆ ಎಂಬ ನಂಬಿಕೆ. 

ವಜ್ರಬಂಡಿ ನಿವಾಸಿ ವೀರೇಶ ಮಾಲಿ ಪಾಟೀಲ್, ಕೆಲವು ದಿನಗಳ ಹಿಂದೆ ಮಲೆ ಮಲ್ಲೇಶ್ವರ ಜಾತ್ರೆ ನಡೆದಿದ್ದು, ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಪಾಲ್ಗೊಂಡಿದ್ದರು. ಅಂದು ಗ್ರಾಮದಲ್ಲಿ ಸುಮಾರು ಅರ್ಧ ಗಂಟೆ ಮಳೆ ಸುರಿದಿತ್ತು. ಮಲೆ ಮಲ್ಲೇಶ್ವರ ಮಳೆ ದೇವರು, ಪ್ರತಿ ವರ್ಷ ಈ ಕ್ಷೇತ್ರವನ್ನು ಆಶೀರ್ವದಿಸುತ್ತಾನೆ. ಈ ವರ್ಷ ಮುಂಗಾರು ತಡವಾಗಿ ಬಂದರೂ ದೇವರ ಮೇಲೆ ಅಪಾರ ನಂಬಿಕೆ ಇರುವುದರಿಂದ ರೈತರು ಹೆದರಲಿಲ್ಲ.

ಕೆಲವರು ಹಸಿಬೇಳೆ ಬಿತ್ತನೆ ಮಾಡಿ ಲಾಭವನ್ನೂ ಪಡೆದರೆ, ಬೇರೆ ಭಾಗದ ರೈತರು ನಷ್ಟ ಅನುಭವಿಸಿದ್ದಾರೆ. ಕೆಲವರು ಇದನ್ನು ಕಾಕತಾಳೀಯ ಎಂದು ಕರೆಯಬಹುದು, ಆದರೆ ನಾವೆಲ್ಲರೂ ನಮ್ಮ ಮಳೆ ದೇವರನ್ನು ನಂಬುತ್ತೇವೆ ಎನ್ನುತ್ತಾರೆ.

ಕೊಪ್ಪಳದ ಕೃಷಿ ಅಧಿಕಾರಿಯೊಬ್ಬರು, ಗ್ರಾಮಸ್ಥರ ನಂಬಿಕೆ ಬಗ್ಗೆ ಕೇಳಿದ್ದೇವೆ. ಈ ಪ್ರದೇಶದಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ, ಆದರೆ ಕೆಲವು ರೈತರು ಈ ಬಾರಿಯೂ ಲಾಭ ಗಳಿಸಿದ್ದಾರೆ. ದೇವರು ಅವರಿಗೆ ಮಳೆಯನ್ನು ಆಶೀರ್ವದಿಸಿದನೆಂದು ನಾವು ನಂಬಲು ಸಾಧ್ಯವಿಲ್ಲ, ಆದರೆ ಅವರು ಒಳ್ಳೆಯ ನಿರ್ಧಾರ ಮಾಡಿ ಇಳುವರಿಯಲ್ಲಿ ಲಾಭ ಪಡೆದುಕೊಂಡಿರುವುದು ಖುಷಿಯ ಸಂಗತಿ ಎಂದರು.

SCROLL FOR NEXT