ಬಾಲ್ ಬ್ಯಾಂಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ಪ್ರಥಮ 
ಕ್ರೀಡೆ

ಬಾಲ್ ಬ್ಯಾಡ್ಮಿಂಟನ್: ಮಂಗಳೂರು ವಿವಿ ಚಾಂಪಿಯನ್

ಅತ್ಯುತ್ತಮ ಆಟ ಪ್ರದರ್ಶಿಸಿದ ಶೃತಿ ಎ.ಆರ್‌ರವರಿಗೆ ಸರ್ವಾಂಗೀಣ ಪ್ರಶಸ್ತಿ...

ಚೆನ್ನೈ: ಅಖಿಲ ಭಾರತ ಮಹಿಳಾ ಬಾಲ್ ಬ್ಯಾಂಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ಪ್ರಥಮ ಬಹುಮಾನ ಅಲಂಕರಿಸಿದೆ.

ಕ್ವಾಟರ್‌ಫೈನಲ್‌ನಲ್ಲಿ ಕೇರಲದ ಕಲ್ಲಿಕೋಟೆಯನ್ನು ಸೋಲಿಸಿ 11ನೇ ಬಾರಿ ಲೀಗ್ ಹಂತಕ್ಕೆ ಅರ್ಹತೆಯನ್ನು ಪಡೆದ ಮಂಗಳೂರು ವಿವಿ ತಂಡ ಲೀಗ್ ಹಂತದಲ್ಲಿ ಚೆನ್ನೈನ ಅಣ್ಣ ವಿವಿಯನ್ನು 29-19, 29-19, ಆತಿಥೇಯ ಕ್ರೆಸೆಂಟ್ ತಂಡವನ್ನು 29-12, ಹಾಗೂ 29-18 ಹಾಗೂ ನಿರ್ಣಾಯಕ ಫೈನಲ್‌ನಲ್ಲಿ ಚೆನ್ನೈನ ಎಸ್.ಆರ್.ಎಮ್. ವಿವಿಯನ್ನು 29-10, 29-15 ನೇರ ಸೆಟ್‌ಗಳಿಂದ ಸೋಲಿಸಿ 2014-15ನೇ ಸಾಲಿನ ಅಂತರ್ ವಿವಿ ಚಾಂಪಿಯನ್‌ಶಿಪ್‌ನ್ನು ಪಡೆಯಿತು.

ಈ ಸಾಧನೆಗೆ ವಿವಿಯ ಕುಲಪತಿಗಳಾದ ಪ್ರೊ.ಕೆ.ಬೈರಪ್ಪ, ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಕಿಶೋರ್ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಟೂರ್ನಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಶೃತಿ ಎ.ಆರ್‌ರವರಿಗೆ ಸರ್ವಾಂಗೀಣ ಪ್ರಶಸ್ತಿ ಲಭಿಸಿತು. ಮಂಗಳೂರು ವಿಶ್ವ ವಿದ್ಯಾಲಯ ತಂಡದಲ್ಲಿ ಎಂಟು ಮಂದಿ ಆಳ್ವಾಸ್‌ನ ಹಾಗೂ ಎರಡು ಮಂದಿ ಮಂಗಳೂರು ಕ್ಯಾಂಪಸ್ ತಂಡದಲ್ಲಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT