ಬೆಂಗಳೂರು ಎಫ್‌ಸಿ ಮತ್ತು ಮುಂಬೈ ಎಫ್‌ಸಿ 
ಕ್ರೀಡೆ

ಐ-ಲೀಗ್ ಫುಟ್ಬಾಲ್: ಡ್ರಾಗೆ ಬಿಎಫ್‌ಸಿ ತೃಪಿ

ಪಂದ್ಯದ ಅಂತಿಮ ಹಂತದಲ್ಲಿ ಸ್ಟ್ರೈಕರ್ ರಾಬಿನ್ ಸಿಂಗ್ ಅವರು ಗಳಿಸಿದ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಳೂರು...

ಬೆಂಗಳೂರು: ಪಂದ್ಯದ ಅಂತಿಮ ಹಂತದಲ್ಲಿ ಸ್ಟ್ರೈಕರ್ ರಾಬಿನ್ ಸಿಂಗ್ ಅವರು ಗಳಿಸಿದ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ, ಐ-ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಮುಂಬೈ ಎಫ್‌ಸಿ ವಿರುದ್ಧ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿದೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ, ಎದುರಾಳಿ ಮುಂಬೈ ಎಫ್‌ಸಿ ವಿರುದ್ಧ 1-1 ಗೋಲಿನಿಂದ ಡ್ರಾ ಸಾಧಿಸಿತು. ಈ ಮೂಲಕ ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡವು. ಪಂದ್ಯದ ಆರಂಭದಿಂದಲೇ ಬೆಂಗಳೂರು ಎಫ್‌ಸಿ, ಪ್ರವಾಸಿ ತಂಡದ ವಿರುದ್ಧ ನಿಯಂತ್ರಣ ಸಾಧಿಸಿತಾದರೂ ಆರಂಭಿಕ ಹಂತದಲ್ಲಿ ಸಿಕ್ಕ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಸಫಲವಾಗಲಿಲ್ಲ.

8ನೇ ನಿಮಿಷದಲ್ಲಿ ಬೆಂಗಳೂರು ಎಫ್‌ಸಿ ನಾಯಕ ಸುನೀಲ್ ಛೆಟ್ರಿಗೆ ಗೋಲು ದಾಖಲಿಸುವ ಅವಕಾಶ ಲಭಿಸಿತ್ತು. ಆದರೆ ಛೆಟ್ರಿ ಗೋಲು ದಾಖಲಿಸುವ ಪ್ರಯತ್ನವನ್ನು ಎದುರಾಳಿ ಗೋಲ್‍ಕೀಪರ್ ಘೋಶ್ ತಡೆಯುವಲ್ಲಿ ಸಫಲರಾದರು. 19ನೇ ನಿಮಿಷದಲ್ಲಿ ರಿನೊ ಆ್ಯಂಟೊ ಅವರು ನೀಡಿದ ಪಾಸ್ ಅನ್ನು ರೂನಿ ಹೆಡ್ ಮಾಡುವ ಮೂಲಕ ಗೋಲು ಗಳಿಸುವ ಪ್ರಯತ್ನ ನಡೆಸಿದರು. ಆದರೆ, ಘೋಶ್ ಮತ್ತೊಮ್ಮೆ ಚುರುಕಿನ ಪ್ರದರ್ಶನ ನೀಡಿದರು.

32ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್‍ನಲ್ಲಿ ಚೆಂಡನ್ನು ಬಾಕ್ಸ್ ಒಳಗೆ ಕಳುಹಿಸಿದರಾದರೂ, ನಂತರ ರೆಫರಿ ಅದನ್ನು ರದ್ದು ಮಾಡಿದರು. ನಂತರ 53 ಹಾಗೂ 60ನೇ ನಿಮಿಷದಲ್ಲೂ ಬಿಎಫ್‌ಸಿ ಅವಕಾಶ ಕೈಚೆಲ್ಲಿತು. ಪಂದ್ಯದ 68ನೇ ನಿಮಿಷದಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಮುಂಬೈ ಎಫ್‌ಸಿ ಪರ ಭೆಕೆ ಚೆಂಡನ್ನು ಹೆಡ್ ಮಾಡುವ ಮೂಲಕ ತಂಡಕ್ಕೆ ಗೋಲು ತಂದುಕೊಟ್ಟರು.

ಇನ್ನು 88ನೇ ನಿಮಿಷದಲ್ಲಿ ರಾಬಿನ್ ಸಿಂಗ್ ಗೋಲು ದಾಖಲಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಪಂದ್ಯದ ಕೊನೆ ನಿಮಿಷದಲ್ಲಿ ಫೌಲ್ ಮಾಡಿದ ರಾಬಿನ್ ಸಿಂಗ್ ಅವರಿಗೆ ರೆಫರಿ ರೆಡ್ ಕಾರ್ಡ್ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

ಲೂಟಿಕೋರನ ಭಯವೇ? ಖರ್ಗೆಯವರೇ, ಭಿಕ್ಷೆ ಬೇಡುವ 'ದಯನೀಯ ಸ್ಥಿತಿ' ಬರಬಾರದಿತ್ತು! ಜೆಡಿಎಸ್ ಟಾಂಗ್

ಕುರ್ಚಿ ಕದನ: ಡಿಕೆಶಿ ಸಿಎಂ ಆಗುವುದು ಯಾವಾಗ?; ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

SCROLL FOR NEXT