ಭಾರತ- ಓಮನ್ ತಂಡಗಳ ಸೆಣಸಾಟ 
ಕ್ರೀಡೆ

ಭಾರತಕ್ಕೆ ಸೋಲಿನ ಕಹಿ

ಪಂದ್ಯದ ಆರಂಭಿಕ ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಗೋಲು ದಾಖಲಿಸುವ ಅವಕಾಶ ಬಿಟ್ಟುಕೊಟ್ಟ ಭಾರತ ತಂಡ 2018ರ ಫಿಫಾ ವಿಶ್ವಕಪ್ ಪ್ರಾಥಮಿಕ ಅರ್ಹತಾ .....

ಬೆಂಗಳೂರು: ಪಂದ್ಯದ ಆರಂಭಿಕ ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಗೋಲು ದಾಖಲಿಸುವ ಅವಕಾಶ ಬಿಟ್ಟುಕೊಟ್ಟ ಭಾರತ ತಂಡ 2018ರ ಫಿಫಾ ವಿಶ್ವಕಪ್ ಪ್ರಾಥಮಿಕ ಅರ್ಹತಾ ಸುತ್ತಿನ ಪಂದ್ಯದಲ್ಲಿ ಓಮನ್ ವಿರುದ್ಧ ಸೋಲನುಭವಿಸಿದೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಓಮನ್ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮೈದಾನದಲ್ಲಿ  19, 315 ಸಾವಿರ ಪ್ರೇಕ್ಷಕರ ಬೆಂಬಲದೊಂದಿಗೆ  ಕಣಕ್ಕಿಳಿದ ಭಾರತ ತಂಡ ಉತ್ತಮ ಹೋರಾಟ ನೀಡಿತಾದರೂ ಪ್ರವಾಸಿ ತಂಡದ ಆಕ್ರಮಣದ ಮುಂದೆ ಎಡವಿತು.

ಆರಂಭದಲ್ಲೇ ಹಿನ್ನಡೆ: ಭಾರತ ತಂಡ ನಿರೀಕ್ಷಿತ ಮಟ್ಟದಲ್ಲಿ ಆರಂಭ ಪಡೆಯಲಿಲ್ಲ. ಆರಂಭಿಕ 20 ಸೆಕೆಂಡ್ ಗಳಲ್ಲಿ ಭಾರತ ತಂಡದ ರಕ್ಷಣಾತ್ಮಕ  ವಿಭಾಗವನ್ನು ಮೆಟ್ಟಿನಿಂತ ಓಮನ್ ಆಟಗಾರರು ಗೋಲು ದಾಖಲಿಸುವ ಶುಭಾರಂಭ ಮಾಡಿದರು. ಈ ಮೂಲಕ ಪ್ರವಾಸಿ ತಂಡ ಮೊದಲ ನಿಮಿಷದಲ್ಲೇ ಆತಿಥೇಯರ ಮೇಲೆ ಬಿಗಿ ಹಿಡಿತ ಸಾಧಿಸಿತು.
ಈ ವೇಳೆ ಒತ್ತಡಕ್ಕೆ ಸಿಲುಕಿದ ಭಾರತೀಯ ಆಟಗಾರರು ಪಂದ್ಯದಲ್ಲಿ ಮತ್ತೆ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಸಿದರು. ಈ ವೇಳೆ ಆಕ್ರಮಣಕಾರಿ ಆಟ ಮುಂದುವರಿಸಿದ ಓಮನ್ ತಂಡ ನಂತರದ ಹಂತದಲ್ಲಿ ಗೋಲು ದಾಖಲಿಸುವ ಪ್ರಯತ್ನ ಮುಂದುವರಿಸಿತು. ಆದರೆ ತಂಡದ ಗೋಲ್ ಕೀಪರ್ ಸುಬ್ರತಾ ಪಾಲ್ ಅತ್ಯುತ್ತಮ ರೀತಿಯಲ್ಲಿ ಎದುರಾಳಿ ತಂಡದ ಪ್ರಯತ್ನವನ್ನು ವಿಫಲಗೊಳಿಸಿದರು.

ಛೆಟ್ರಿ ಆಸರೆ: ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಆಸರೆಯಾಗಿದ್ದು ಪ್ರಮುಖ ಆಟಗಾರ ಸುನೀಲ್ ಛೆಟ್ರಿ. ಪಂದ್ಯದ 26 ನೇ ಮಿಮಿಷದಲ್ಲಿ ರಿನೋ ಆಂಟೋ ಅವರಿಂದ ಅತ್ಯುತ್ತಮ ಪಾಸ್ ಪಡೆದ ಛೆಟ್ರಿ ಎದುರಾಳಿ ತಂಡದ ಆಟಗಾರರನ್ನು ತಮ್ಮ ಚುರುಕಿನ ಪ್ರದರ್ಶನದಿಂದ ಕಟ್ಟಿ ಹಾಕಿದರು. ಈ ವೇಳೆ ಚೆಂಡನ್ನು ಗೋಲಿನತ್ತ ಕಳುಹಿಸಿದರು. ಚೆಂಡು ಎದುರಾಳಿ ಗೋಲ್ ಕೀಪರ್ ಆಲ್ ಹಬ್ಸಿ ಕೈಗೆ ಸಿಗದಂತೆ ಗೋಲು ಪೆಟ್ಟಿಗೆಯ ಬಲ ಕಂಬಕ್ಕೆ ಬಡಿದು ಒಳಗೆ ಸೇರಿಸುವ ಮೂಲಕ ಭಾರತಕ್ಕೆ ಮೊದಲ ಗೋಲು ದಾಖಲಾಯಿತು. ಈ ಮೂಲಕ ಭಾರತ ಪಂದ್ಯದಲ್ಲಿ ಸಮಬಲ ಸಾಧಿಸಿತು.
ಈ ಹಿಂದೆ ಓಮನ್ ವಿರುದ್ಧ ಭಾರತ 9 ಗೋಲು ದಾಖಲಿಸಿದ್ದು ಅದರಲ್ಲಿ 7 ಗೋಲು ಸುನೀಲ್ ಛೆಟ್ರಿ ದಾಖಲಿಸಿದ್ದರು. ಈ ಪಂದ್ಯದಲ್ಲೂ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ತಂಡಕ್ಕೆ ಆಸರೆಯಾದರು.
ಮುಳುವಾದ ಪೆನಾಲ್ಟಿ: ಪಂದ್ಯದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿದ್ದವು. 40 ನೇ ನಿಮಿಷದಲ್ಲಿ ಭಾರತದ ಆಟಗಾರರು ಫೌಲ್ ಮಾಡಿದ ಹಿನ್ನೆಲೆಯಲ್ಲಿ ಓಮನ್ ಗೆ ಪೆನಾಲ್ಟಿ ಅವಕಾಶ ಸಿಕ್ಕಿತು. ಈ ವೇಳೆ ಆಲ್ ಹೋಸನಿ ಗೋಲು ದಾಖಲಿಸಿ ತಂಡ ಮತ್ತೆ ಮುನ್ನಡೆ ಸಾಧಿಸುವಂತೆ ಮಾಡಿದರು. ಈ ಮೂಲಕ ಪಂದ್ಯದ ಮೊದಲಾರ್ಧದಲ್ಲಿ 2-1ರ ಮೇಲುಗೈ ಸಾಧಿಸಿತ್ತು,
ಪಂದ್ಯದ ದ್ವೀತಿಯಾರ್ಧದಲ್ಲಿ 68ನೇ ನಿಮಿಷದಲ್ಲಿ ಯುಗೆನ್ಸನ್ ಗೋಲು ದಾಖಲಿಸಿದರಾದರೂ ರಾಬಿನ್ ಸಿಂಗ್  ಆಫ್ ಸೈಡ್ ಇದ್ದ ಕಾರಣ ಭಾರತಕ್ಕೆ ಗೋಲು ಸಿಗಲಿಲ್ಲ. ಇದಾದ ನಂತರವೂ ಭಾರತ ಅಂತಿಮ ಕ್ಷಣದವರೆಗೂ ಹೊರಾಟ ನಡೆಸಿತಾದರೂ ಮತ್ತೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

SCROLL FOR NEXT