ಶೇನ್ ವಾರ್ನ್- ಸಚಿನ್ ತೆಂಡೂಲ್ಕರ್ 
ಕ್ರೀಡೆ

ಮತ್ತೆ ಸಚಿನ್- ಶೇನ್ ಹಣಾಹಣಿ: ನಿವೃತ್ತ ಕ್ರಿಕೆಟಿಗರ ಚುಟುಕು ಕಾದಾಟಕ್ಕೆ ಕ್ಷಣಗಣನೆ

ಸಚಿನ್ ತೆಂಡೂಲ್ಕರ್ ಹಾಗೂ ಸ್ಪಿನ್ ದಂತಕತೆ ಶೇನ್ ವಾರ್ನ್ ಕನಸಿನ ಕೂಸಾದ ಆಲ್ ಸ್ಟಾರ್ಸ್ ಟಿ೨೦ ಲೀಗ್ ಪಂದ್ಯಾವಳಿಯು ಇಂದಿನಿಂದ ನಡೆಯಲಿದೆ.

ನ್ಯೂಯಾರ್ಕ್: ಕ್ರಿಕೆಟ್ ಎಂದರೆ ಮೂಗು ಮುರಿಯುವ ಅಮೆರಿಕದಲ್ಲಿ, ಅದರ ಜನಪ್ರಿಯತೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಸ್ಪಿನ್ ದಂತಕತೆ ಶೇನ್ ವಾರ್ನ್ ಕನಸಿನ ಕೂಸಾದ ಆಲ್ ಸ್ಟಾರ್ಸ್ ಟಿ೨೦ ಲೀಗ್ ಪಂದ್ಯಾವಳಿಯು ಇಂದಿನಿಂದ ನಡೆಯಲಿದೆ.
ಅಮೆರಿಕನ್ನರಿಗೆ ಕ್ರಿಕೆಟ್ ಬಗ್ಗೆ ಹೆಚ್ಚಿನ ಒಲವಿಲ್ಲ. ಆದರೆ, ಕ್ರಿಕೆಟ್ ಅನ್ನೇ ಹೋಲುವ ಬೇಸ್‍ಬಾಲ್, ಇವರ ನೆಚ್ಚಿನ ಕ್ರೀಡೆಗಳಲ್ಲಿ ಒಂದಾಗಿದ್ದು, ಇದೇ ನೆಲೆಯಲ್ಲಿ ಕ್ರಿಕೆಟ್‍ಗೂ ಬೇಡಿಕೆ ಹೆಚ್ಚಿಸುವುದು ಸಚಿನ್-ಶೇನ್‍ವಾರ್ನ್ ಪಣವಾಗಿದೆ. ಆಲ್‍ಸ್ಟಾರ್ಸ್ ಲೀಗ್ ನಲ್ಲಿ ಈ ಬಾರಿ ಸಚಿನ್ ಬ್ಲಾಸ್ಟರ್ಸ್ ಮತ್ತು ವಾರ್ನ್ ವಾರಿಯರ್ಸ್ ತಂಡಗಳ ನಡುವೆ ಒಟ್ಟು ಮೂರು ಪಂದ್ಯಗಳು ನಡೆಯಲಿದೆ. ನ.7 ರಂದು ನ್ಯೂಯಾರ್ಕ್ ನ ಸಿಟಿ ಫೀಲ್ಡ್ ನಲ್ಲಿ ಮೊದಲ ಪಂದ್ಯ ನಡೆಯಲಿದೆ.
ನ.11 ರಂದು ಹೌಸ್ಟನ್ ನ ಮಿನಿಟ್ ಮೇಡ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ಹಾಗೂ ನ.14 ರಂದು ಲಾಸ್ ಏಂಜಲಿಸ್ ನ ಡಾಡ್ಗರ್ ಕ್ರೀಡಾಂಗಣದಲ್ಲಿ ಮೂರನೇ ಪಂದ್ಯ ನಡೆಯಲಿದೆ. ಈ ಮೂರು ಪಂದ್ಯಗಳು ನಡೆಯುತ್ತಿರುವುದು ಬೇಸ್ ಬಾಕ್ ಕ್ರೀಡಾಂಗಣದಲ್ಲೇ. ಇಲ್ಲಿ ಕ್ರಿಕೆಟ್ ಪಿಚ್ ತಯಾರಿಸಿ ಅಲ್ಲಿ ಟಿ 20 ಮಾದರಿಯ ಕ್ರಿಕೆಟ್ ಆಡಿಸಲಾಗುತ್ತಿದೆ. ಸಿಟಿ ಫೀಲ್ಡ್ ಕ್ರೀಡಾಂಗಣ 45 ಸಾವಿರ, ಮಿನಿಟ್ ಮೇಡ್ ಕ್ರೀಡಾಂಗಣ 41 ಡಾಡ್ಗರ್ ಕ್ರೀಡಾಂಗಣ 56 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ.
ವಿಶ್ವ ಕ್ರಿಕೆಟ್ ನ ದಂತಕತೆಗಳ ಆಟವನ್ನು ಕಣ್ತುಂಬಿಕೊಳ್ಳಲು ಅಮೇರಿಕದ ಕ್ರೀಡಾ ರಸಿಕರು ಉತ್ಸುಕರಾಗಿದ್ದಾರೆ. ಮೊದಲ ಪಂದ್ಯಕ್ಕೆ ನಿಗದಿಪಡಿಸಲಾಗಿದ್ದ 25 -50 ಅಮೇರಿಕನ್ ಡಾಲರ್ ಮೊತ್ತದ ಟಿಕೆಟ್ ಗಳು ಸಂಪೂರ್ಣವಾಗಿ ಮಾರಾಟವಾಗಿದ್ದು ಈಗ 175 ಅಮೇರಿಕನ್ ಡಾಲರ್ ಮೊತ್ತದ ಕೆಲವು ಟಿಕೆಟ್ ಗಳು ಮಾತ್ರ ಲಭ್ಯವಿರುವುದಾಗಿ ವರದಿಗಳು ಬಂದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

SCROLL FOR NEXT