ಸಾಯಿ ಪ್ರಣೀತ್ 
ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಸಾಯಿ ಪ್ರಣೀತ್ ಗೆ ಸೋಲು, ಆರ್ಚರಿ ಮಿಶ್ರ ವಿಭಾಗದ ಕ್ವಾರ್ಟರ್‌ಫೈನಲ್ಸ್‌ನಲ್ಲಿ ಭಾರತಕ್ಕೆ ನಿರಾಸೆ

ಒಲಂಪಿಕ್ಸ್‌ನಲ್ಲಿ ಶನಿವಾರ ನಡೆದ ಆರ್ಚರಿ ಮಿಶ್ರ ತಂಡ ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಸೋಲು ಅನುಭವಿಸಿದ್ದಾರೆ.

ಟೋಕಿಯೊ: ಒಲಂಪಿಕ್ಸ್‌ನಲ್ಲಿ ಶನಿವಾರ ನಡೆದ ಆರ್ಚರಿ ಮಿಶ್ರ ತಂಡ ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಸೋಲು ಅನುಭವಿಸಿದ್ದಾರೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊರಿಯಾ ಜೋಡಿ ಆನ್ ಸ್ಯಾನ್ ಮತ್ತು ಕಿಮ್ ಜೇ ಡಿಯೊ ವಿರುದ್ಧ 2-6 ಗೋಲುಗಳಿಂದ ಸೋತ ನಂತರ ಭಾರತದ ಬಿಲ್ಲುಗಾರರಾದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಸಿರಾಸೆ ಅನುಭವಿಸಿದರು.

ಅಗ್ರ ಶ್ರೇಯಾಂಕದ ಕೊರಿಯನ್ನರು ಮೊದಲ ಸೆಟ್‌ನ್ನು 35-32ರಿಂದ ಗೆದ್ದರೆ, ದೀಪಿಕಾ ಮತ್ತು ಪ್ರವೀಣ್ ಎರಡು 8 ಎಸ್ ಮತ್ತು 7 ಎಲ್ ಗಳಿಸಿದರು. ಎರಡನೇ ಸೆಟ್‌ನಲ್ಲಿ, ಪ್ರವೀಣ್ ತಮ್ಮ ಎರಡು ಪ್ರಯತ್ನಗಳಲ್ಲಿ ಪರಿಪೂರ್ಣ 10 ಅಂಕಗಳನ್ನು ಪಡೆದರು. ಆದರೆ ದೀಪಿಕಾ ಗುರಿ ತಪ್ಪಿದರು. ಪರಿಣಾಮ ಕೊರಿಯಾ 38-37ರಿಂದ ಒಂದು ಸೆಟ್ ಗೆದ್ದಿತು.

ಎರಡನೇ ಗೇಮ್ ಸಹ ಎದುರಾಳಿ ತಂಡದ ಪಾಲಾಯಿತು. ಆದರೆ, ಮೂರನೇ ಗೇಮ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ ಜಯ ಸಾಧಿಸಿತು. ನಾಲ್ಕನೇ ಗೇಮ್ ನಲ್ಲಿ ಕೊರಿಯಾ ಆಟಗಾರರು ಗುರಿ ತಪ್ಪದೇ ಅಂಕ ಕಲೆ ಹಾಕಿ ಅಬ್ಬರಿಸಿದರು.

ಭರವಸೆಯ ಆಟಗಾರ ಪ್ರಣೀತ್ ಗೆ ಸೋಲು!
ಟೋಕಿಯೊ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಬಿ ಸಾಯಿ ಪ್ರಣೀತ್ ಒಲಿಂಪಿಕ್ಸ್ ನ ತಮ್ಮ ಮೊದಲ ಗುಂಪು ಪಂದ್ಯದಲ್ಲೇ ಸೋಲು ಅನುಭವಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪ್ರಣೀತ್ 17-21, 15-21 ರಿಂದ ಇಸ್ರೇಲ್ ನ ಮಿಶ್ರಾ ಜಿಲ್ಬರ್ಮನ್ ವಿರುದ್ಧ ಸೋಲು ಕಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT