ಭಾರತದ ಬಾಕ್ಸರ್ ನಿಖತ್ ಜರೀನ್ 
ಕ್ರೀಡೆ

ಹಿಂದು-ಮುಸ್ಲಿಂ ಮುಖ್ಯವಲ್ಲ; ನಾನು ಪ್ರತಿನಿಧಿಸುತ್ತಿರುವುದು ಸಮುದಾಯವನ್ನಲ್ಲ, ಬದಲಿಗೆ ಭಾರತ ದೇಶವನ್ನು: ನಿಖತ್ ಜರೀನ್

ಕ್ರೀಡಾಪಟುವಾಗಿ ನಾನು ಭಾರತವನ್ನು ಪ್ರತಿನಿಧಿಸುತ್ತೇನೆ, ನನಗೆ ಹಿಂದೂ-ಮುಸ್ಲಿಂ ಮುಖ್ಯವಲ್ಲ. ನಾನು ಸಮುದಾಯವನ್ನು ಪ್ರತಿನಿಧಿಸುತ್ತಿಲ್ಲ ಬದಲಿಗೆ ನನ್ನ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ ಇದು ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಮಾತು. ಆಕೆಯ ಸಾಧನೆಗಳಿಗಿಂತ ಆಕೆಯ ಧಾರ್ಮಿಕ ಹಿನ್ನೆಲೆಯ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದಾಗ ಈಕೆಯ ದಿಟ್ಟ

ನವದೆಹಲಿ: ಕ್ರೀಡಾಪಟುವಾಗಿ ನಾನು ಭಾರತವನ್ನು ಪ್ರತಿನಿಧಿಸುತ್ತೇನೆ, ನನಗೆ ಹಿಂದೂ-ಮುಸ್ಲಿಂ ಮುಖ್ಯವಲ್ಲ. ನಾನು ಸಮುದಾಯವನ್ನು ಪ್ರತಿನಿಧಿಸುತ್ತಿಲ್ಲ ಬದಲಿಗೆ ನನ್ನ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ ಇದು ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಮಾತು. ಆಕೆಯ ಸಾಧನೆಗಳಿಗಿಂತ ಆಕೆಯ ಧಾರ್ಮಿಕ ಹಿನ್ನೆಲೆಯ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದಾಗ ಈಕೆಯ ದಿಟ್ಟ ಉತ್ತರವಿದು. 

"ನನ್ನ ದೇಶಕ್ಕಾಗಿ ಪದಕ ಗೆಲ್ಲಲು ನನಗೆ ಸಂತೋಷವಾಗಿದೆ" ಎಂದು ತೆಲಂಗಾಣ ಮೂಲದ 25 ವರ್ಷದ ಕ್ರೀಡಾಪಟು ಸಂವಾದ ವೇಳೆ ಹೇಳಿದ್ದಾರೆ. ಕ್ರೀಡಾಕೂಟಗಳಲ್ಲಿ ಮಾನಸಿಕ ಒತ್ತಡವನ್ನು ನಿಭಾಯಿಸಲು ಬೆಂಬಲದ ಅಗತ್ಯವನ್ನು ಒತ್ತಿ ಹೇಳಿದರು.

ಜರೀನ್ ಕಳೆದ ತಿಂಗಳು ಟರ್ಕಿಯಲ್ಲಿ ನಡೆದ ಚಾಂಪಿಯನ್‌ಶಿಪ್‌ನ ಫ್ಲೈವೇಟ್ ವಿಭಾಗದಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುತಾಮಾಸ್ ಅವರನ್ನು 5-0 ಅಂತರದಿಂದ ಸೋಲಿಸಿ ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದ ಐದನೇ ಭಾರತೀಯ ಮಹಿಳೆಯಾಗಿದ್ದಾರೆ.

ಸಾಂಪ್ರದಾಯಿಕ ಸಮಾಜವಾದ ಮುಸ್ಲಿಂ ಸಮುದಾಯದಿಂದ ಬಂದಿರುವ ಜರೀನ್ ಬಾಕ್ಸಿಂಗ್‌ನಲ್ಲಿ ವೃತ್ತಿಜೀವನಕ್ಕೆ ಸಾಮಾಜಿಕ ಪಿಡುಗನ್ನು ಮೊದಲು ತೊಲಗಿಸಬೇಕು ಎಂದಿದ್ದಾರೆ.

ಭಾರತೀಯ ಕ್ರೀಡಾಪಟುಗಳಲ್ಲಿ ಮಾನಸಿಕ ಒತ್ತಡ ಬಹಳವಾಗಿದ್ದು, ಅದನ್ನು ನಿಭಾಯಿಸುವುದನ್ನು ಕ್ರೀಡಾಪಟುಗಳು ಕಲಿಯಬೇಕಿದೆ, ಈ ನಿಟ್ಟಿನಲ್ಲಿ ಆದ್ಯತೆ ತರಬೇತಿ ಮುಖ್ಯ ಎಂದಿದ್ದಾರೆ. ಭಾರತೀಯ ಅಥ್ಲೀಟ್‌ಗಳು ನಿಯಮಿತ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಪ್ರವೃತ್ತಿಯನ್ನು ಹೊಂದಿದ್ದಾರೆ ಆದರೆ ಒಲಿಂಪಿಕ್ಸ್ ಅಥವಾ ವಿಶ್ವ ಚಾಂಪಿಯನ್‌ಶಿಪ್‌ನಂತಹ ದೊಡ್ಡ ಹಂತದಲ್ಲಿ ಎಡವುತ್ತಾರೆ.

ನಮ್ಮ ಭಾರತೀಯ ಬಾಕ್ಸರ್‌ಗಳು ತುಂಬಾ ಪ್ರತಿಭಾವಂತರು, ನಾವು ಯಾರಿಗೂ ಕಡಿಮೆ ಇಲ್ಲ. ನಮ್ಮಲ್ಲಿ ಶಕ್ತಿ, ವೇಗ ಮತ್ತು ಶಕ್ತಿ..ಎಲ್ಲವೂ ಇದೆ ಎಂದರು. ಎತ್ತರಕ್ಕೆ ತಲುಪಿದಾಗ ಭಾರತೀಯ ಬಾಕ್ಸರ್‌ಗಳಿಗೆ ಮಾನಸಿಕ ಒತ್ತಡವನ್ನು ನಿಭಾಯಿಸಲು ತರಬೇತಿ ನೀಡಬೇಕು ಎಂದರು.

ಕಳೆದ ತಿಂಗಳು ಫ್ಲೈವೇಟ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡ ಜರೀನ್, ಜುಲೈ 28 ರಿಂದ ಪ್ರಾರಂಭವಾಗುವ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ಗೆ ಸಹ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT