ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್‌ನ ಅಂತಿಮ ಸುತ್ತಿನ ಸಂದರ್ಭದಲ್ಲಿ ದಿವ್ಯಾ ದೇಶಮುಖ್ ಮತ್ತು ಗುಕೇಶ್ ಡಿ.  
ಕ್ರೀಡೆ

ಚೆಸ್ ಒಲಿಂಪಿಯಾಡ್: ಭಾರತಕ್ಕೆ ಐತಿಹಾಸಿಕ ಅವಳಿ ಚಿನ್ನದ ಪದಕ

ಅಂತಿಮ ಸುತ್ತಿಗೆ ಮುನ್ನಡೆದ ಭಾರತ 19 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚೀನಾ ಮತ್ತು ಸ್ಲೊವೇನಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಬುಡಾಪೆಸ್ಟ್(ಹಂಗೇರಿ): ಇಂದು ಭಾನುವಾರ ನಡೆದ 2024 ಚೆಸ್ ಒಲಿಂಪಿಯಾಡ್‌ನ ಆರಂಭ ವಿಭಾಗದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎರಡನೇ ಸ್ಥಾನದಲ್ಲಿರುವ ಚೀನಾ ಯುಎಸ್ಎ ವಿರುದ್ಧ ಎರಡು ಬೋರ್ಡ್‌ಗಳಲ್ಲಿ ಪಾಯಿಂಟ್‌ಗಳನ್ನು ಕಳೆದುಕೊಂಡ ನಂತರ ತಂಡವು ಕೊನೆಯ ಸುತ್ತಿನಲ್ಲಿ ತನ್ನ ಮೊದಲ ಚಿನ್ನದ ಪದಕ ಗಳಿಸಿತು. ಭಾರತದ ಅರ್ಜುನ್ ಎರಿಗೈಸಿ ಮತ್ತು ಡಿ ಗುಕೇಶ್ ತಂಡಕ್ಕೆ ಗೆಲುವು ಸಾಧಿಸಿಕೊಟ್ಟರು.

ಗುಕೇಶ್ ಅವರು ರಷ್ಯಾದ ವ್ಲಾಡಿಮಿರ್ ಫೆಡೋಸೀವ್ ವಿರುದ್ಧ ಜಯಗಳಿಸುವ ಮೂಲಕ ಒಲಿಂಪಿಯಾಡ್ ಮುಕ್ತಾಯಗೊಳಿಸಿದರು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆಲ್ಲಲು ಇವರ ಆಟ ಸಹಾಯವಾಯಿತು. ಇಂದು ಅರ್ಜುನ್ ಎರಿಗೈಸಿ ಸರ್ಬಿಯಾದ ಜಾನ್ ಸುಬೆಲ್ಜ್ ವಿರುದ್ಧ ಗೆಲುವು ಸಾಧಿಸಿದರು. ಪ್ರಗ್ನಾನಂದ ಅವರು ತಮ್ಮ ಅಭಿಯಾನವನ್ನು ಗೆಲುವಿನೊಂದಿಗೆ ಕೊನೆಗೊಳಿಸಿದರು.

ಭಾರತ ಮತ್ತೆ ಪುಟಿದೆದ್ದು, ಅಂತಿಮ ಸುತ್ತಿನಲ್ಲಿ ಅಮೆರಿಕವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಮುಕ್ತ ವಿಭಾಗದ ಪುರುಷರ ತಂಡವು ಗುಕೇಶ್, ಎರಿಗೈಸಿ, ಪ್ರಗ್ನಾನಂದ ಆರ್, ವಿದಿತ್ ಗುಜರಾತಿ, ಪೆಂಟಾಲ ಹರಿಕೃಷ್ಣ ಮತ್ತು ಶ್ರೀನಾಥ್ ನಾರಾಯಣನ್ ಅವರನ್ನು ಒಳಗೊಂಡಿತ್ತು. ಇದು ಭಾರತದ ಮೊದಲ ಒಲಿಂಪಿಯಾಡ್ ಚಿನ್ನವನ್ನು ಗುರುತಿಸುತ್ತದೆ,

ಅಂತಿಮ ಸುತ್ತಿಗೆ ಮುನ್ನಡೆದ ಭಾರತ 19 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚೀನಾ ಮತ್ತು ಸ್ಲೊವೇನಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಚಿನ್ನಕ್ಕೆ ಕೊರಳೊಡ್ಡಿದ ಮಹಿಳಾ ತಂಡ: 45ನೇ ಫಿಡೆ ಮಹಿಳಾ ಚೆಸ್ ಒಲಿಂಪಿಯಾಡ್‌ನಲ್ಲೂ ಭಾರತ ಮಹಿಳಾ ತಂಡ ಚಿನ್ನಕ್ಕೆ ಕೊರಳೊಡ್ಡಿದೆ. ಭಾರತ ಮಹಿಳಾ ತಂಡದಲ್ಲಿ ಹರಿಕಾ ದ್ರೋಣವಲ್ಲಿ, ವೈಶಾಲಿ ರಮೇಶ್‌ಬಾಬು, ದಿವ್ಯಾ ದೇಶಮುಖ್, ವಾಂತಿಕಾ ಅಗರವಾಲ್, ತಾನಿಯಾ ಸಚ್‌ದೇವ್ ಮತ್ತು ಅಭಿಜಿತ್ ಕುಂಟೆ ಇದ್ದರು.

ಅಂತಿಮ ಸುತ್ತಿನಲ್ಲಿ ದಿವ್ಯಾ ದೇಶಮುಖ್, ಡಿ ಹರಿಕಾ ಮತ್ತು ವಾಂತಿಕಾ ಅಗರ್ವಾಲ್ ತಮ್ಮ ಎದುರಾಳಿಗಳ ವಿರುದ್ಧ ಗೆದ್ದರು, ಆರ್ ವೈಶಾಲಿ ಡ್ರಾಗೆ ತೃಪ್ತಿಪಡಬೇಕಾಯಿತು.

ಪ್ರಶಸ್ತಿ ಬೆನ್ನತ್ತಿದ ಕಜಕಸ್ತಾನವನ್ನು ಡ್ರಾ ಮಾಡಿಕೊಂಡಿದ್ದ ಅಮೆರಿಕ, ಭಾರತದ ವನಿತೆಯರು ಚೊಚ್ಚಲ ಚಿನ್ನಕ್ಕೆ ಕೊರಳೊಡ್ಡಲು ನೆರವಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT