ಬೈಟುಕಾಫಿ

ಸರಿಯೋ ತಪ್ಪೋ?

ಕೆಲವು ಕಾಲಧರ್ಮಗಳಿರುತ್ತವೆ. ಅವುಗಳ ಕುರಿತು ಸರಿ ತಪ್ಪುಗಳ ನಿರ್ಧಾರಕ್ಕೆ ಬರಲಾಗುವುದಿಲ್ಲ. ವಾಸ್ತವವಾಗಿ ಸನ್ನಿವೇಶದ ಒತ್ತಡಕ್ಕೆ ಸಿಲುಕಿ ನಾವು ಏನೋ ಒಂದು ಮಾಡಿ ಬಿಟ್ಟಿರುತ್ತೇವೆ. ಹಾಗೇ ನೋಡಿದರೆ ಮೇಲ್ನೋಟಕ್ಕೆ ಅದು ತಪ್ಪೇ ಆಗಿರುತ್ತದೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಸರಿಯೇ ಆಗಿರುತ್ತದೆ. ಅದನ್ನೇ ಕಾಲ ಧರ್ಮವೆನ್ನುತ್ತೇವೆ. ಒಂದು ದೊಡ್ಡ ಅವಘಡ, ಅಘಟಿತ, ಅಪಾಯವನ್ನು ತಪ್ಪಿಸಲು ಒಂದು ಸಣ್ಣ ತಪ್ಪು ಮಾಡಿದರೆ, ಅಥವಾ ಸಣ್ಣದ್ದೊಂದು ಸುಳ್ಳನ್ನು ಹೇಳಿದರೆ ಅದು ಖಂಡಿತಾ ಅಪರಾಧವಾಗುವುದಿಲ್ಲ. ಹೌದು, ಕಠೋರ ಸತ್ಯವನ್ನು ಬಿಚ್ಚಿಡುವುದರಿಂದ ಒಂದು ಜೀವನವೇ ನಾಶವಾಗುವುದಾದರೆ, ಏನೇ ಆದರೂ ರಾಜಿಯಾಗುವುದೇ ಇಲ್ಲವೆಂಬ ಹಠಕ್ಕೆ ಬಿದ್ದು ಒಂದಿಡೀ ಬದುಕನ್ನೇ ಚಿತ್ರಹಿಂಸೆಗೊಡ್ಡಿಕೊಳ್ಳುವುದಾದರೆ ಅದು ಸರ್ವಥಾ ಧರ್ಮಸಮ್ಮತವೆನಿಸಿಕೊಳ್ಳುವುದಿಲ್ಲ. ವ್ಯಾವಹಾರಿಕ ದೃಷ್ಟಿಯಿಂದ, ಸ್ವಸ್ಥ ಸಮಾಜದ ಹಿತ ದೃಷ್ಟಿಯಿಂದಲೂ ಅದು ಶ್ಲಾಘನೀಯವೆನಿಸಿಕೊಳ್ಳುವುದಿಲ್ಲ. ಅದರ ಬದಲು ಒಳಿತಾಗುವುದಿದ್ದರೆ, ಒಂದು ಬದುಕು ಹಸನಾಗಿ ನಡೆದುಕೊಂಡು ಹೋಗುವುದಿದ್ದರೆ, ಒಂದು ದೊಡ್ಡ ಧರ್ಮ ಉಳಿಯುವುದಿದ್ದರೆ ಪುಟ್ಟ ಸುಳ್ಳನ್ನು ಹೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಪುಟ್ಟ ತಪ್ಪನ್ನು ಮಾಡುವುದರಲ್ಲಿ ಯಾವ ಅಧರ್ಮವೂ ಇಲ್ಲ. ಆದರೆ ಇಲ್ಲಿ ಗಮನಾರ್ಹ ಸಂಗತಿಯೆಂದರೆ ನಮ್ಮ ಅಸತ್ಯದ ಹಿಂದಿನ ಉದ್ದೇಶ. ಸ್ವಾರ್ಥಕ್ಕೋಸ್ಕರ ಮಾಡುವ ಕೆಟ್ಟಕೆಲಸ, ಸುಳ್ಳು ಸಮರ್ಥನೀಯವಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Vice President Election 2025: ಮತದಾನ ಪ್ರಕ್ರಿಯೆ ಆರಂಭ, ಪ್ರಧಾನಿ ಮೋದಿ-ದೇವೇಗೌಡ ಸೇರಿ ಹಲವು ಗಣ್ಯರಿಂದ ಮತದಾನ

ಇಂದು ಉಪರಾಷ್ಟ್ರಪತಿ ಚುನಾವಣೆ: ಮತದಾನದಿಂದ 12 ಸಂಸದರು ದೂರ; NDA ಅಭ್ಯರ್ಥಿ C.P ರಾಧಾಕೃಷ್ಣನ್‌ ಗೆಲುವು ಬಹತೇಕ ಖಚಿತ!

'ಹಿಂದೂ ವಿರೋಧಿ' ನಡೆ: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಕಮಲ ಪಾಳಯ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ

ತೇಜಸ್ವಿ ಯಾದವ್ ಪತ್ನಿ 'ಜೆರ್ಸಿ ಹಸು': ಬಿಹಾರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ RJD ಮಾಜಿ ಶಾಸಕನ ಹೇಳಿಕೆ

ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ 'ಸೆಂಟ್ ಮೇರಿ' ಹೆಸರು; ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

SCROLL FOR NEXT