ಹುಬ್ಬಳ್ಳಿ: ಕಳಸಾಬಂಡೂರಿ ಯೋಜನೆ ಜಾರಿ ಮಾಡುವ ಬಗ್ಗೆ ಪ್ರಧಾನಿ ಮೋದಿಗೆ ರಾಜ್ಯದ ನಿಲುವನ್ನು ಸರಿಯಾಗಿ ಪ್ರತಿಪಾದಿಸಲಿಲ್ಲ ಎಂದು ಆರೋಪಿಸಿ ಹೋರಾಟಗಾರರು
ಮತ್ತು ರೈತರು ಬುಧವಾರ ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಶಿ, ಜಗದೀಶ ಶೆಟ್ಟರ್, ಶಿವಕುಮಾರ ಉದಾಸಿ ನಿವಾಸ, ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದರು.
ಜತೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್ಗಳಲ್ಲಿ ಬಂದಿದ್ದ ಧಾರವಾಡ ಜಿಲ್ಲೆಯ ಸಾವಿರಾರು ರೈತರು ಇಲ್ಲಿನ ಬಾದಾಮಿ ನಗರದ ಶೆಟ್ಟರ್ ಮನೆ, ಭವಾನಿನಗರದ ಜೋಶಿ ಮನೆಗೆಸುಮಾರು ಎರಡೂವರೆ ತಾಸು ಮುತ್ತಿಗೆ ಹಾಕಿದ್ದರು. ಪೊಲೀಸರ ಬಿಗಿ ಕಾವಲು ಭೇದಿಸಿ ಚಪ್ಪಲಿಗಳನ್ನು ತೂರಾಡಿದರು. `ಕಳಸಾಬಂಡೂರಿ ಯೋಜನೆ, ಮಹ
ದಾಯಿ ಹೆಸರು ಹೇಳಿ ನೀವು ಮುಖ್ಯ ಮಂತ್ರಿ, ಸಂಸದರಾಗಿದ್ದೀರಿ. ಯೋಜನೆಗೆ ನ್ಯಾಯ ಕೊಡಿಸಲು ನಿಮ್ಮಿಂದ ಆಗಿಲ್ಲ. ನಮ್ಮ ವಿಶ್ವಾಸಕ್ಕೆ ನೀವು ದ್ರೋಹ ಬಗೆದಿದ್ದೀರಿ. ತಕ್ಷಣ ರಾಜಿನಾಮೆ ನೀಡಿ.
ಇಲ್ಲದಿದ್ದರೆ ರಾಜಿನಾಮೆ ನೀಡುವವರೆಗೆ ನಿಮ್ಮ ಮನೆಗಳ ಎದುರು ಆಮರಣ ಉಪವಾಸ ಮಾಡುತ್ತೇವೆ' ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಗೋವಾ ಬಸ್ಸಿಗೆ ಬೆಂಕಿ: ಬೆಳಗ್ಗೆ ಗೋವಾ ದಿಂದ ನಗರಕ್ಕೆ ಆಗಮಿಸಿದ ಗೋವಾ ಸರ್ಕಾರದ ಬಸ್ಸಿಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಭೇಟಿ ಬಳಿಕದ ಬೆಳವಣಿಗೆಯಲ್ಲಿ
ರಾಜ್ಯ ಸರ್ಕಾರದ 4 ಬಸ್ಸುಗಳಿಗೆ ಬೆಂಕಿ, 15ಕ್ಕೂ ಹೆಚ್ಚು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ತಮ್ಮ ಸಿಟ್ಟು ಪ್ರದರ್ಶಿಸಿದ್ದ ರೈತರ ಕೆಂಗಣ್ಣು ಬುಧವಾರ ಗೋವಾ ಬಸ್ಸಿನ ಮೇಲೆ ಬಿದ್ದಿತ್ತು.
ಯೋಜನೆಗಾಗಿ ರಾಜ್ಯ ಸರ್ಕಾರ ಏನು ಮಾಡಬೇಕಾಗಿದೆಯೋ ಅದನ್ನು ಮಾಡಿದೆ. ಆದರೆ ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅವರು ಕಣಿವೆ ರಾಜ್ಯದ ಸಿಎಂಗಳ ಸಭೆ ಕರೆದಿಲ್ಲ. ಹೀಗಾಗಿ, ಆಯಾ ರಾಜ್ಯಗಳ ಪ್ರತಿಪಕ್ಷಗಳ ನಾಯಕರ ಮನವೊಲಿಸುವ ಪ್ರಶ್ನೆ ಹೇಗೆ ಉದ್ಭವವಾಗುತ್ತದೆ? ಅಂತಾರಾಜ್ಯ ಜಲವಿವಾದಕ್ಕೆ ಸಂಬಂಧಿಸಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.
-ಸಿದ್ದರಾಮಯ್ಯ ಮುಖ್ಯಮಂತ್ರಿ