ಬೇಹುಗಾರಿಕೆ ಆರೋಪದ ಮೇಲೆ ಬಂಧಿತರಾಗಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಯಾದವ್ 
ವಿದೇಶ

ಪಾಕ್ ನಿಂದ ಭಾರತೀಯ ಗೂಢಚಾರನ ತಪ್ಪೊಪ್ಪಿಗೆ ವಿಡಿಯೋ ಬಿಡುಗಡೆ; ಆರೋಪ ತಳ್ಳಿಹಾಕಿದ ಭಾರತ

ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಲೂಚಿಸ್ತಾನದಲ್ಲಿ ಬಂಧನಕ್ಕೊಳಗಾದ, ಭಾರತದ ಗೂಢಚರ...

ಇಸ್ಲಾಮಾಬಾದ್/ನವದೆಹಲಿ: ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ  ಬಲೂಚಿಸ್ತಾನದಲ್ಲಿ  ಬಂಧನಕ್ಕೊಳಗಾದ, ಭಾರತದ ಗೂಢಚರ ಎನ್ನಲಾದ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷನ್ ಯಾದವ್ "ತಪ್ಪೊಪ್ಪಿಗೆ' ಕುರಿತ ವೀಡಿಯೋವನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ. ಪಾಕಿಸ್ತಾನ ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಭಾರತ ಹೇಳಿದೆ. ಕುಲಭೂಷನ್ ಅಪಹರಣವಾಗಿರಬಹುದು ಎಂದು ಕೂಡ ಅದು ಹೇಳಿದೆ.

ಬಲೂಚಿಸ್ತಾನದಲ್ಲಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾಗಿ ಆರು ನಿಮಿಷಗಳ "ತಪ್ಪೊಪ್ಪಿಗೆ' ಇರುವ ವೀಡಿಯೋವನ್ನು ಪಾಕ್‌ ಸೇನೆಯ ಆಂತರಿಕ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಲೆ.ಜ.ಅಸೀಂ ಬುಜ್ವಾ ಮತ್ತು ಪಾಕ್‌ನ ಮಾಹಿತಿ ಸಚಿವ ಪರ್ವೇಶ್‌ ರಶೀದ್‌ ಅವರು ಇಸ್ಲಾಮಾಬಾದ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ನಿನ್ನೆ ಬಿಡುಗಡೆ ಮಾಡಿದ್ದರು. ಬಂಧಿತ ಭಾರತೀಯ ಗೂಢಚರ ಕುಲಭೂಷಣ್‌ ಯಾದವ್‌ ವೀಡಿಯೋದಲ್ಲಿ ತಾವು ಭಾರತದ ಗೂಢಚರ ಸಂಸ್ಥೆ "ರಾ' ಪರ ಪರ ಕೆಲಸ ಮಾಡುತ್ತಿದ್ದು, ಬಲೂಚಿಸ್ತಾನದಲ್ಲಿ ತೊಂದರೆ ನೀಡಲು ಕೆಲಸ ಮಾಡುತ್ತಿದ್ದುದಾಗಿ ಮತ್ತು ತಾನು ಈಗಲೂ ಭಾರತೀಯ ನೌಕಾಪಡೆಯಲ್ಲಿದ್ದು, 2022ಕ್ಕೆ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ ಎಂದು ರಶೀದ್ ತಿಳಿಸಿದ್ದಾರೆ. ಈ ವಿಡಿಯೋದಿಂದ ಪಾಕ್‌ನ ವಿಚಾರದಲ್ಲಿ ಭಾರತ ಮೂಗುತೂರಿಸುತ್ತಿದೆ ಎಂಬುದಕ್ಕೆ ನೇರ ಸಾಕ್ಷ್ಯ ಎಂದವರು ಹೇಳಿದ್ದಾರೆ.

ಆದರೆ ಇತ್ತ ಪಾಕ್‌ನ ವೀಡಿಯೋ ಬಿಡುಗಡೆಯನ್ನು ಭಾರತ ತಳ್ಳಿಹಾಕಿದ್ದು, ತನ್ನ ನೆಲದಲ್ಲಿನ ಭಯೋತ್ಪಾದನೆ ಸಮಸ್ಯೆಯನ್ನು ಮರೆಮಾಚುವ ಕೆಲಸಗಳನ್ನು ಪಾಕ್‌ ಮಾಡುತ್ತಿದೆ ಎಂದು ಟೀಕಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT