ಸಾಂದರ್ಭಿಕ ಚಿತ್ರ 
ವಿದೇಶ

1 ವಾರದಲ್ಲಿ 1,500 ಟಾಯ್ಲೆಟ್ ಪೇಪರ್ ರೋಲ್ ಕಳ್ಳತನ, ಶೌಚಾಲಯದಲ್ಲಿ ಕ್ಯಾಮರಾ ಅಳವಡಿಸಿದ ಚೀನಾ ಸರ್ಕಾರ!

ಚೀನಾದಲ್ಲಿ ಹಾಗಾಗ ಚಿತ್ರ ವಿಚಿತ್ರ ಘಟನೆಗಳು ವರದಿಯಾಗುತ್ತಿರುತ್ತವೆ. ಈಗ ನಟೋರಿಯಸ್ ಟಾಯ್ಲೆಟ್ ಪೇಪರ್ ಕಳ್ಳನೊಬ್ಬ....

ಬೀಜಿಂಗ್: ಚೀನಾದಲ್ಲಿ ಹಾಗಾಗ ಚಿತ್ರ ವಿಚಿತ್ರ ಘಟನೆಗಳು ವರದಿಯಾಗುತ್ತಿರುತ್ತವೆ. ಈಗ ನಟೋರಿಯಸ್ ಟಾಯ್ಲೆಟ್ ಪೇಪರ್ ಕಳ್ಳನೊಬ್ಬ ಒಂದು ವಾರದಲ್ಲಿ ಬರೊಬ್ಬರಿ 1,500 ಟಾಯ್ಲೆಟ್ ಪೇಪರ್ ರೋಲ್ ಗಳನ್ನು ಕಳ್ಳತನ ಮಾಡಿದ್ದು, ಕಳ್ಳನ ಗುರುತು ಪತ್ತೆಗಾಗಿ ಚೀನಾ ಸರ್ಕಾರ ಚೆಂಗ್ಡು ನಗರದ ಸಾರ್ವಜನಿಕ ಶೌಚಾಲಯದಲ್ಲಿ ಕ್ಯಾಮರಾ ಅಳವಡಿಸಿದೆ.
ಟಾಯ್ಲೆಟ್ ಪೇಪರ್ ಕಳ್ಳತನ ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಮುಖ ಗುರುತಿಸುವ ತಂತ್ರಾಂಶವುಳ್ಳ ಕ್ಯಾಮರಾ ಇದಾಗಿದೆ. ಚೆಂಗ್ಡುನ ಶೌಚಾಲಯಗಳಲ್ಲಿ ಈ ಕ್ಯಾಮರಾ ಅಳವಡಿಸಲಾಗಿದೆ ಎಂದು ಚೆಂಗ್ಡು ಬ್ಯುಸಿನೆಸ್ ಡೈಲಿ ವರದಿ ಮಾಡಿದೆ.
ಗೋಡೆಗೆ ಅಳವಡಿಸಲಾಗಿರುವ ಈ ಕ್ಯಾಮರಾವನ್ನು ಶೌಚಾಲಯಕ್ಕೆ ಬಂದ ವ್ಯಕ್ತಿ ಎದುರಿಸಬೇಕಾಗಿದೆ. ಟಾಯ್ಲೆಟ್ ಪೇಪರ್ ತೆಗೆದುಕೊಂಡ ವ್ಯಕ್ತಿಯ ಮುಖವನ್ನು ತಂತ್ರಜ್ಞಾನ ನೆನಪಿಟ್ಟುಕೊಂಡಿರುತ್ತದೆ. ಅದೇ ವ್ಯಕ್ತಿ ನಿರ್ಧಿಷ್ಟ ಅವಧಿಯಲ್ಲಿ ಮತ್ತೆ ಕಾಣಿಸಿಕೊಂಡರೆ ಪೇಪರ್ ನೀಡಲು ತಂತ್ರಜ್ಞಾನ ನಿರಾಕರಿಸುತ್ತದೆ.
ಕಳೆದ ಒಂದು ವಾರದಲ್ಲಿ ಭಾರಿ ಪ್ರಮಾಣದಲ್ಲಿ ಟಾಯ್ಲೆಟ್ ಪೇಪರ್ ಕಳ್ಳತನವಾಗುತ್ತಿದ್ದು, ನಟೋರಿಯಸ್ ಕಳ್ಳ ಒಂದು ಗಂಟೆಯಲ್ಲಿ 30 ಟಾಯ್ಲೆಟ್ ರೂಂಗಳಿಂದ ಟಾಯ್ಲೆಟ್ ಪೇಪರ್ ಕದ್ದಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಅಧಿಕಾರಿಳು ತಿಳಿಸಿರುವುದಾಗಿ ವರದಿ ಮಾಡಲಾಗಿದೆ. 
ಚೀನಾದಲ್ಲಿ ಶೌಚಾಲಯದಲ್ಲಿ ಟಾಯ್ಲೆಟ್ ಪೇಪರ್ ಕಳ್ಳತನ ಜೋರಾಗಿದ್ದು, ಸಾರ್ವಜನಿಕ ಶೌಚಾಲಯದ ಟಾಯ್ಲೆಟ್ ಪೇಪರನ್ನು ಸಾರ್ವಜನಿಕರು ಮನೆಗಳಲ್ಲಿ ಉಪಯೋಗಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!