ಇಸ್ರೇಲ್- ಹಮಾಸ್ ಸಂಘರ್ಷದ ದೃಶ್ಯ (ಸಂಗ್ರಹ ಚಿತ್ರ 
ವಿದೇಶ

ಸಾವಿರಾರು ಮಂದಿ ಸಾವು, ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ: ಹಮಾಸ್-ಇಸ್ರೇಲ್ ಸಂಘರ್ಷದ ಕುರಿತು ವಿಶ್ವಸಂಸ್ಥೆ ಕಳವಳ

ಯುದ್ಧದಲ್ಲಿ ಸಾವಿರಾರು ಮಕ್ಕಳು ಸಾವನ್ನಪ್ಪಿದ್ದು, ಯಾರೂ ವಿಜೇತರಾಗಿರುವುದಿಲ್ಲ ಎಂದು ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಸಮಿತಿ ಹೇಳಿದೆ.

ವಿಶ್ವಸಂಸ್ಥೆ: ಯುದ್ಧದಲ್ಲಿ ಸಾವಿರಾರು ಮಕ್ಕಳು ಸಾವನ್ನಪ್ಪಿದ್ದು, ಯಾರೂ ವಿಜೇತರಾಗಿರುವುದಿಲ್ಲ ಎಂದು ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಸಮಿತಿ ಹೇಳಿದೆ.

ಜಾಗತಿಕ ಮಟ್ಟದ ಈ ಸಮಿತಿ ಗಾಜಾ ಪಟ್ಟಿಯಲ್ಲಿ ತೀವ್ರವಾದ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿದೆ. ಮಕ್ಕಳ ಹಕ್ಕುಗಳ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ವಿವಿಧ ದೇಶಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುವ ಸಮಿತಿಯು ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ "ಮಕ್ಕಳು ಎದುರಿಸುತ್ತಿರುವ ಸಂಕಟದ ಬಗ್ಗೆ ತನ್ನ ಆಕ್ರೋಶವನ್ನು" ವ್ಯಕ್ತಪಡಿಸಿದೆ.

"ಗಾಝಾ ಸ್ಟ್ರಿಪ್‌ನಲ್ಲಿ ಮಕ್ಕಳ ವಿರುದ್ಧದ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಗಳು ಪ್ರತಿ ನಿಮಿಷಕ್ಕೆ ಹೆಚ್ಚಳವಾಗುತ್ತಿದೆ. ಸಾವಿರಾರು ಮಕ್ಕಳು ಕೊಲ್ಲಲ್ಪಟ್ಟ ಯುದ್ಧದಲ್ಲಿ ಜಯ ಎಂಬುದು ಯಾರದ್ದೂ ಆಗಿರುವುದಿಲ್ಲ ಎಂದು ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ.

ಇಸ್ರೇಲಿ ಅಧಿಕಾರಿಗಳ ಪ್ರಕಾರ, ಹಮಾಸ್ ಬಂದೂಕುಧಾರಿಗಳು ಅಕ್ಟೋಬರ್ 7 ರಂದು ಗಡಿಯುದ್ದಕ್ಕೂ ನುಗ್ಗಿ 1,400 ಜನರನ್ನು ಕೊಂದ ನಂತರ ಗಾಜಾದ ಮೇಲೆ ಭಾರಿ ಬಾಂಬ್ ದಾಳಿ ನಡೆಸಿದೆ, ಹೆಚ್ಚಾಗಿ ನಾಗರಿಕರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 240 ಜನರನ್ನು ಅಪಹರಿಸಿದ್ದಾರೆ.

ಇಸ್ರೇಲಿ ಅಧಿಕಾರಿಗಳ ಪ್ರಕಾರ, ಹಮಾಸ್ ಬಂದೂಕುಧಾರಿಗಳು ಅಕ್ಟೋಬರ್ 7 ರಂದು ಗಡಿಯುದ್ದಕ್ಕೂ ನುಗ್ಗಿ 1,400 ಜನರನ್ನು ಕೊಂದ ನಂತರ ಇಸ್ರೇಲ್ ಗಾಜಾದ ಮೇಲೆ ಭಾರಿ ಬಾಂಬ್ ದಾಳಿ ನಡೆಸಿದೆ. ಹಮಾಸ್ ಉಗ್ರರು ಹೆಚ್ಚಾಗಿ ನಾಗರಿಕರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 240 ಜನರನ್ನು ಅಪಹರಿಸಿದ್ದಾರೆ.

ಇಸ್ರೇಲ್‌ನೊಂದಿಗಿನ ಯುದ್ಧವು ಭುಗಿಲೆದ್ದ ನಂತರ ಸುಮಾರು 8,800 ಜನರು ಸಾವನ್ನಪ್ಪಿದ್ದಾರೆ ಮತ್ತು 22,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.

ಇದೇ ವೇಳೆ ಇಸ್ರೇಲ್ ನ ಸಂತ್ರಸ್ತರ ಬಗ್ಗೆಯೂ ಮಾತನಾಡಿರುವ ವಿಶ್ವಸಂಸ್ಥೆ, "ಒತ್ತೆಯಾಳುಗಳಾಗಿ ಮುಂದುವರಿಯುವ ಮಕ್ಕಳ ಬಗ್ಗೆ ನಾವು ಆಳವಾದ ಕಾಳಜಿಯನ್ನು ಹೊಂದಿದ್ದೇವೆ" ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT