ಹರ್ದೀಪ್ ನಿಜ್ಜರ್ 
ವಿದೇಶ

ತನಿಖೆ ನಡೆಸದೆ ನಿಜ್ಜರ್ ಹತ್ಯೆಯಲ್ಲಿ ಭಾರತವನ್ನು ದೋಷಿ ಎಂದು ಪರಿಗಣಿಸಲಾಗಿದೆ: ಭಾರತೀಯ ರಾಯಭಾರಿ

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಭಾರತ ಹತ್ಯೆ ಮಾಡಿಸಿದೆ ಎಂದು ಕೆನಡಾ ಆರೋಪಿಸಿದ್ದು ಅಂದಿನಿಂದ ಕೆನಡಾ ಮತ್ತು ಭಾರತ ನಡುವಿನ ಸಂಬಂಧ ಹಳಸಿದೆ.

ಒಟ್ಟಾವಾ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಭಾರತ ಹತ್ಯೆ ಮಾಡಿಸಿದೆ ಎಂದು ಕೆನಡಾ ಆರೋಪಿಸಿದ್ದು ಅಂದಿನಿಂದ ಕೆನಡಾ ಮತ್ತು ಭಾರತ ನಡುವಿನ ಸಂಬಂಧ ಹಳಸಿದೆ. 

ಇನ್ನು ಕೆನಡಾದ ಸುದ್ದಿವಾಹಿನಿ ಸಿಟಿವಿ ನ್ಯೂಸ್‌ಗೆ ನೀಡಿದ ಸಂದರ್ಶನದ ವೇಳೆ ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾ ಅವರು, ಯಾವುದೇ ತನಿಖೆಯಿಲ್ಲದೆ ನಿಜ್ಜರ್ ಹತ್ಯೆಯಲ್ಲಿ ಭಾರತವನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ಇದು ಕಾನೂನಿನ ನಿಯಮವೇ? ಎಂದು ಪ್ರಶ್ನಿಸಿದ್ದಾರೆ.

ಈ ಘಟನೆ ನಂತರ ತನಿಖೆಗೆ ಸಹಕರಿಸಲು ಭಾರತವನ್ನು ಕೇಳಲಾಯಿತು. ಕ್ರಿಮಿನಲ್ ಗಳನ್ನು ನೋಡುವಂತೆ ಭಾರತವನ್ನು ನೋಡಲಾಯಿತು. ಇನ್ನು ಕೆನಡಾ ಹೇಳಿದಂತೆ ಕೆಲವು ಸಾಕ್ಷ್ಯಗಳಿದ್ದರೆ ಅದನ್ನು ಪ್ರಸ್ತುತಪಡಿಸಬೇಕು ಎಂದು ಭಾರತ ಅಂದಿನಿಂದಲೂ ಹೇಳುತ್ತಿದೆ ಎಂದು ಹೇಳಿದರು.

ಭಾರತ-ಕೆನಡಾ ಸಂಬಂಧಗಳು ಸೆಪ್ಟೆಂಬರ್‌ನಲ್ಲಿ ಮೊದಲಿಗಿಂತ ಉತ್ತಮವಾಗಿವೆ. ಕೆಲವು ಕೆನಡಾದ ನಾಗರಿಕರು ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ತಮ್ಮ ಭೂಮಿಯನ್ನು ಬಳಸುತ್ತಿದ್ದಾರೆ ಎಂಬುದು ಭಾರತದ ದೊಡ್ಡ ಆತಂಕವಾಗಿದೆ. ಭಾರತೀಯ ರಾಜತಾಂತ್ರಿಕರು ಮತ್ತು ಇತರ ಅಧಿಕಾರಿಗಳ ಸುರಕ್ಷತೆಯು ನಮಗೆ ಪ್ರಮುಖ ವಿಷಯವಾಗಿದೆ ಎಂದು ಹೇಳಿದರು.

ಭಾರತ ಸರ್ಕಾರವು ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಹಲವು ದಾಖಲೆಗಳನ್ನು ಕೆನಡಾಕ್ಕೆ ಹಸ್ತಾಂತರಿಸಿದೆ. ಖಲಿಸ್ತಾನಿಗಳು ಭಾರತ ಮತ್ತು ಕೆನಡಾದಲ್ಲಿ ಅಪರಾಧಗಳನ್ನು ಎಸಗಿರುವ ಪುರಾವೆಗಳಿವೆ ಎಂದರು.

ಪಿಎಂ ಟ್ರುಡೊ ಭಾರತದ ವಿರುದ್ಧ ಆರೋಪ ಮಾಡಿದ್ದಲ್ಲದೆ ನಮ್ಮ ರಾಜತಾಂತ್ರಿಕರಲ್ಲಿ ಒಬ್ಬರನ್ನು ಹೊರಹಾಕಿದ್ದು ನಮಗೆ ದೊಡ್ಡ ವಿಷಯವಾಯಿತು. ಆದ್ದರಿಂದ, ನಾವು ಕೆನಡಾದ ರಾಜತಾಂತ್ರಿಕರನ್ನು ಹೊರಹಾಕುವ ಮೂಲಕ ಪ್ರತಿಕ್ರಿಯಿಸಿದ್ದೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT