ಡೀರ್ ಅಲ್-ಬಾಲಾಹ್‌ನಲ್ಲಿರುವ ಆಸ್ಪತ್ರೆಯ ಮೋರ್ಗ್‌ನ ಹೊರಗೆ ಕುಟುಂಬ ಸದಸ್ಯರ ಮೃತ ದೇಹಗಳ ನಡುವೆ ಪ್ಯಾಲೆಸ್ತೀನ್ ಮಗು ಅಳುತ್ತಿರುವುದು  
ವಿದೇಶ

ಉತ್ತರ ಗಾಜಾದ ಶಾಲೆ, ನಿರಾಶ್ರಿತ ಶಿಬಿರಗಳ ಮೇಲೆ ಇಸ್ರೇಲ್ ದಾಳಿ; ಮಕ್ಕಳು ಸೇರಿದಂತೆ 30 ಜನರು ಸಾವು

ಸ್ಥಳೀಯ ಕಾಲಮಾನ ಪ್ರಕಾರ ನಿನ್ನೆ ಶುಕ್ರವಾರ ರಾತ್ರಿ 9:40ಕ್ಕೆ ಮೊದಲು ಸಂಭವಿಸಿದ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 12 ಜನರನ್ನು ಬಲಿತೆಗೆದುಕೊಂಡಿದೆ ಎಂದು ಏಜೆನ್ಸಿಯ ವಕ್ತಾರ ಮಹ್ಮದ್ ಬಾಸ್ಸಲ್ ಹೇಳಿದ್ದಾರೆ.

ಇಸ್ರೇಲ್: ಉತ್ತರ ಗಾಜಾದ ಜಬಾಲಿಯಾ ಪಟ್ಟಣದಲ್ಲಿರುವ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ರ ನಡೆಸಿದ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 30 ಪ್ಯಾಲೆಸ್ಟೀನಿಯಾದವರು ಮೃತಪಟ್ಟಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

ಸ್ಥಳೀಯ ಕಾಲಮಾನ ಪ್ರಕಾರ ನಿನ್ನೆ ಶುಕ್ರವಾರ ರಾತ್ರಿ 9:40ಕ್ಕೆ ಮೊದಲು ಸಂಭವಿಸಿದ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 12 ಜನರನ್ನು ಬಲಿತೆಗೆದುಕೊಂಡಿದೆ ಎಂದು ಏಜೆನ್ಸಿಯ ವಕ್ತಾರ ಮಹ್ಮದ್ ಬಾಸ್ಸಲ್ ಹೇಳಿದ್ದಾರೆ.

ಇನ್ನೂ 14 ಮಂದಿ ನಾಪತ್ತೆಯಾಗಿದ್ದು, ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಬಸ್ಸಾಲ್ ಹೇಳಿದ್ದಾರೆ. ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯಾದವರಿಗೆ ಆಶ್ರಯವಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಬಿರದಲ್ಲಿನ ಎಂಟು ಶಾಲೆಗಳ ಮೇಲೆ ಹಲವಾರು ದಾಳಿಗಳು ಕನಿಷ್ಠ 18 ಜನರನ್ನು ಕೊಂದಿವೆ ಎಂದು ಏಜೆನ್ಸಿಯ ಉತ್ತರ ಗಾಜಾ ನಿರ್ದೇಶಕ ಅಹ್ಮದ್ ಅಲ್-ಕಹ್ಲುತ್ ಹೇಳಿದ್ದಾರೆ.

ಒಟ್ಟಾರೆಯಾಗಿ, ಏಜೆನ್ಸಿ ಒದಗಿಸಿದ ಅಂಕಿಅಂಶಗಳ ಪ್ರಕಾರ ದಿನದ ದಾಳಿಯಲ್ಲಿ ಕನಿಷ್ಠ 110 ಮಂದಿ ಗಾಯಗೊಂಡಿದ್ದಾರೆ. ಜಬಾಲಿಯಾ ಶಿಬಿರದಲ್ಲಿನ ಶಾಲೆಗಳ ಮೇಲಿನ ದಾಳಿಯ ಕುರಿತಾದ ಪ್ರಶ್ನೆಗಳಿಗೆ ಇಸ್ರೇಲಿ ಮಿಲಿಟರಿ ಪ್ರತಿಕ್ರಿಯಿಸಲಿಲ್ಲ ಎಂದು AFP ವರದಿ ಮಾಡಿದೆ.israel

ಇಸ್ರೇಲ್ ಇದುವರೆಗೆ 17,000 ಮಕ್ಕಳು, 11,000 ಕ್ಕೂ ಹೆಚ್ಚು ಮಹಿಳೆಯರು, 1000 ಆರೋಗ್ಯ ವೃತ್ತಿಪರರು ಮತ್ತು 174 ಕ್ಕೂ ಹೆಚ್ಚು ಪತ್ರಕರ್ತರು ಸೇರಿದಂತೆ ಕನಿಷ್ಠ 42,000 ಜನರನ್ನು ಗಾಜಾದ ಮೇಲಿನ ತನ್ನ ಇತ್ತೀಚಿನ ಯುದ್ಧದಲ್ಲಿ ಕೊಂದುಹಾಕಿದೆ. ಇಸ್ರೇಲಿ ಮಿಲಿಟರಿ ಗಾಜಾದಲ್ಲಿನ ಆಸ್ಪತ್ರೆಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಗುರಿಯಾಗಿಟ್ಟು ನಾಶಪಡಿಸಿದೆ. ಅದು ಪ್ಯಾಲೇಸ್ತೀನ್ ಭೂಪ್ರದೇಶವನ್ನು ವಾಯು ಮತ್ತು ಭೂಮಿ ಮೂಲಕ ಬಾಂಬ್ ಸ್ಫೋಟಿಸಿತು, ಕಳೆದ ವರ್ಷ 2.4 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ತನ್ನ ಎಲ್ಲಾ ನಾಗರಿಕ ಜನಸಂಖ್ಯೆಯನ್ನು ಸ್ಥಳಾಂತರಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ತೀರ್ಮಾನಿಸಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

SCROLL FOR NEXT