ಥಾಯ್ ಕಾರ್ಗೋ ಹಡಗಿನಲ್ಲಿ ಬೆಂಕಿ, ಕಪ್ಪು ಹೊಗೆ ಬರುತ್ತಿರುವ ಚಿತ್ರ 
ವಿದೇಶ

ಹಾರ್ಮುಜ್ ಜಲಸಂಧಿ ಬಳಿ ಹಡಗುಗಳ ಮೇಲೆ ದಾಳಿ: ಇಬ್ಬರು ಭಾರತೀಯರು ಸಾವು, ಒಬ್ಬರು ಕಾಣೆ; ಹೊಣೆ ಹೊತ್ತ ಇರಾನ್

ಭಾರತದ ಕಾಂಡ್ಲಾ ಬಂದರಿಗೆ ಹೊರಟ್ಟಿದ್ದ ಥಾಯ್ ಕಂಪನಿಯ ಪ್ರಮುಖ ಶಿಪ್ಪಿಂಗ್ ಕಂಪನಿ PCL ಒಡೆತನದ ಮಯೂರಿ ನಾರೀ ಎಂಬ ಹಡಗು ಯುಎಇಯ ಖಲೀಫಾ ಬಂದರನ್ನು ತೊರೆದು ಹಾರ್ಮುಜ್ ಜಲಸಂಧಿ ಬಳಿ ಸಾಗುವಾಗ ದಾಳಿಗೆ ಒಳಗಾಗಿದೆ.

ಯುಎಇ: ಯುನೈಟೆಡ್ ಅರಬ್ ಎಮಿರೈಟ್ಸ್ ಬಂದರಿನಿಂದ ಹೊರಟ ಥಾಯ್-ಧ್ವಜದ ಕಾರ್ಗೋ ಹಡುಗಿನ ಮೇಲೆ ಬುಧವಾರ ಹಾರ್ಮುಜ್ ಜಲಸಂಧಿ ಬಳಿ ಇರಾನ್ ದಾಳಿ ನಡೆಸಿಿದೆ. ಈ ದಾಳಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದು, ಮತ್ತೊಬ್ಬರು ಕಾಣೆಯಾಗಿದ್ದಾರೆ. ಆದರೆ ಇಪ್ಪತ್ತು ನಾವಿಕರನ್ನು ರಕ್ಷಿಸಲಾಗಿದೆ ಎಂದು ರಾಯಲ್ ಥಾಯ್ ನೌಕಾಪಡೆ ತಿಳಿಸಿದೆ.

ಭಾರತದ ಕಾಂಡ್ಲಾ ಬಂದರಿಗೆ ಹೊರಟ್ಟಿದ್ದ ಥಾಯ್ ಕಂಪನಿಯ ಪ್ರಮುಖ ಶಿಪ್ಪಿಂಗ್ ಕಂಪನಿ PCL ಒಡೆತನದ ಮಯೂರಿ ನಾರೀ ಎಂಬ ಹಡಗು ಯುಎಇಯ ಖಲೀಫಾ ಬಂದರನ್ನು ತೊರೆದು ಹಾರ್ಮುಜ್ ಜಲಸಂಧಿ ಬಳಿ ಸಾಗುವಾಗ ದಾಳಿಗೆ ಒಳಗಾಗಿದೆ. ಇರಾನ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ರಾಯಲ್ ಥಾಯ್ ನೌಕಾಪಡೆಯು ಬಿಡುಗಡೆ ಮಾಡಿದ ಫೋಟೋಗಳಲ್ಲಿ ಹಡಗಿನಿಂದ ದಟ್ಟವಾದ ಕಪ್ಪು ಹೊಗೆ ಬರುತ್ತಿರುವುದನ್ನು ತೋರಿಸುತ್ತವೆ. ಹಡಗು ಸುತ್ತಮುತ್ತಲಿನ ನೀರಿನಲ್ಲಿ life rafts (ಜೀವ ರಕ್ಷಕ ಸಾಧನಗಳು) ಗೋಚರಿಸುತ್ತವೆ.

ದಾಳಿಗೆ ನಿರ್ದಿಷ್ಟ ಕಾರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ರಾಯಲ್ ಥಾಯ್ ನೌಕಾಪಡೆ ಹೇಳಿದೆ. ಈ ಮಧ್ಯೆ ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ. ಒಮಾನಿ ನೌಕಾಪಡೆಯು 20 ನಾವಿಕರನ್ನು ರಕ್ಷಿಸಿದ್ದು, ಉಳಿದ ಮೂವರು ಸಿಬ್ಬಂದಿ ರಕ್ಷಣೆಗೆ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು; ಪ್ರತಿಪಕ್ಷಗಳಿಗೆ ಮುಖಭಂಗ

ತೈಲ ಪೂರೈಕೆಗೆ ರಿಯಾಯಿತಿ ಸ್ಥಗಿತ ಬೆನ್ನಲ್ಲೇ ಎಚ್ಚೆತ್ತ ಭಾರತ; ರಷ್ಯಾ ವಿದೇಶಾಂಗ ಸಚಿವರಿಗೆ ಜೈಶಂಕರ್ ದೂರವಾಣಿ ಕರೆ; ಮಹತ್ವದ ಚರ್ಚೆ!

IPL 2026: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ; ಮಾರ್ಚ್ 28 ರಂದು RCB vs SRH

'ರಕ್ಷಿತ್ ಶೆಟ್ಟಿ-ರಶ್ಮಿಕಾ ನಿಶ್ಚಿತಾರ್ಥ ಮುರಿದುಬೀಳಲು ಇದೇ ಕಾರಣ': ತಾಯಿ ಸುಮನ್ ಮಂದಣ್ಣರದ್ದು ಎನ್ನಲಾದ ಆಡಿಯೋ ವೈರಲ್!

ಗಲ್ಫ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಪ್ರಧಾನಿ ಮೋದಿ ಸಹಾಯದ ಭರವಸೆ; ಕೊಚ್ಚಿಯಲ್ಲಿ 'ವಿಕ್ಸಿತ್ ಕೇರಳಂ'ಗೆ ಚಾಲನೆ

SCROLL FOR NEXT