ಯಾರನ್ನೋ ಮೆಚ್ಚಿಸಲು ಪೈರಸಿ ಮಾಡಿದ್ದನಂತೆ!
ಬೆಂಗಳೂರು: ನಟ ಕಿಚ್ಚಾ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಪೈರಸಿ ಕಾಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಸಿಸಿಬಿ ಪೊಲೀಸರ ಅತಿಥಿಯಾಗಿರುವ ಆರೋಪಿ ರಾಕೇಶ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಪೈಲ್ವಾನ್ ಚಿತ್ರ ಪೈರಸಿ ಮಾಡಿದ ಆರೋಪದಲ್ಲಿ ಬಂಧನವಾಗಿರುವ ಯುವಕ ರಾರೇಶ್ ಇದೀಗ ಪೈರಸಿ ಮಾಡಿದ್ದು ಯಾಕೆ ಎನ್ನುವ ಕಾರಣವನ್ನು ಬಿಚ್ಚಿಟ್ಟಿದ್ದಾನೆ ಎಂದು ವರದಿ ಮಾಡಿದೆ.
ಮಾಧ್ಯಮ ವರದಿಯಲ್ಲಿರುವಂತೆ 'ತನಿಖೆ ವೇಳೆ ಆರೋಪಿ ರಾಕೇಶ್, 'ಒಂದು ವರ್ಗದ ಜನರನ್ನು ಮೆಚ್ಚಿಸೋಕೆ ಪೈರಸಿ ಮಾಡಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ದರ್ಶನ್ ಅಭಿಮಾನಿಗಳನ್ನು ಮೆಚ್ಚಿಸುವ ಸಲುವಾಗಿ ಪೈಲ್ವಾನ್ ಚಿತ್ರವನ್ನು ಪೈರಸಿ ಮಾಡಿದ್ದಾಗ ಆರೋಪಿ ರಾಕೇಶ್ ವಿಚಾರಣೆ ವೇಳೆತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ಕಾರ್ಯಾಚರಣೆ ಹೇಗೆ?
ಪೈಲ್ವಾನ್ ಸಿನಿಮಾ ಪೈರಸಿ ಆಗಿದೆ ಎಂದು ಚಿತ್ರದ ನಿರ್ಮಾಪಕಿ ಸ್ವಪ್ನಾ ಕೃಷ್ಣ ಅವರು ದೂರು ನೀಡಿದ್ದರು. ದೂರು ದಾಖಲಾಗಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಸಿಸಿಬಿಯ ಡಿಸಿಪಿ ರವಿಕುಮಾರ್ ನೇತೃತ್ವದ ತಂಡ ತನಿಖೆ ನಡೆಸಿತ್ತು. ತನಿಖೆಯಲ್ಲಿ ಮೊದಲಿಗೆ ಆರೋಪಿ ರಾಕೇಶ್ ಫೇಸ್ ಬುಕ್ ಐಡಿಯನ್ನು ಪರಿಶೀಲನೆ ನಡೆಸಲಾಗಿತ್ತು. ಬಳಿಕ ಐಪಿ ಅಡ್ರೆಸ್ ಹಾಗೂ ಆರೋಪಿ ರಾಕೇಶ್ ಮೊಬೈಲ್ ನಂಬರ್ ಸಂಗ್ರಹಿಸಲಾಯಿತು. ನಿನ್ನೆ ಇಡೀ ದಿನ ಆರೋಪಿ ರಾಕೇಶ್ ಫೋನ್ ನಂಬರ್ ಲೊಕೇಶನ್ ಸರ್ಚ್ ಮಾಡಲಾಗಿತ್ತು. ಕೊನೆಗೆ ದಾಬಸ್ಪೇಟೆ ಬಳಿ ಲೈವ್ ಲೊಕೇಶನ್ ಪಡೆದಿದ್ದ ಸಿಸಿಬಿ ತಂಡ ಅಲ್ಲಿಯೇ ನಿನ್ನೆ ರಾತ್ರಿ ಆರೋಪಿಯನ್ನು ಬಂಧಿಸಿದ್ದರು. ಪೈಲ್ವಾನ್ ಚಿತ್ರ ಬಿಡುಗಡೆಯಾದ ದಿನವೇ ಸಂಪೂರ್ಣ ಸಿನಿಮಾವನ್ನು ಪೈರಸಿ ಮಾಡಲಾಗಿತ್ತು.
Advertisement