ವಿಕಲ ಚೇತನ ಅಭಿಮಾನಿ ಕಾಲಿನಿಂದ ರಚಿಸಿದ ತನ್ನ ಚಿತ್ರಕ್ಕೆ ಅಮಿತಾಭ್ ಮೆಚ್ಚುಗೆ

ಆಯುಷ್ ಎಂಬ ವ್ಯಕ್ತಿಗೆ ದೇಹದ ಮೇಲೆ ಸ್ವಾಧೀನವಿಲ್ಲ. ಆ ಸ್ಥಿತಿಯಲ್ಲಿಯೂ ತನ್ನ ಆರಾಧ್ಯ ದೈವ ಅಮಿತಾಭ್ ಚಿತ್ರ ಬಿಡಿಸಲು ಆತ ತನ್ನ ಅಂಗವೈಕಲ್ಯವನ್ನು ಮೀರಿ ಪ್ರಯತ್ನಿಸಿದ್ದಾನೆ. 
ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಟ್ವಿಟ್ಟರ್ ನಲ್ಲಿ ತಮ್ಮ ವಿಕಲಚೇತನ ಅಭಿಮಾನಿಯೊಬ್ಬ ಕಾಲಿನಲ್ಲಿ ತಮ್ಮ ಚಿತ್ರವನ್ನು ಬರೆಯುತ್ತಿರುವ ಚಿತ್ರಗಳನ್ನು ಹಂಚಿಕೊಂಡು ಆತನ ಅಭಿಮಾನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. 

ಆಯುಷ್ ಎಂಬ ವ್ಯಕ್ತಿಗೆ ದೇಹದ ಮೇಲೆ ಸ್ವಾಧೀನವಿಲ್ಲ. ಸದಾ ಹಾಸಿಗೆ ಮೇಲೆಯೇ ಮಲಗಿರುತ್ತಾನೆ. ಆದರೆ ಆ ಸ್ಥಿತಿಯಲ್ಲಿಯೂ ತನ್ನ ಆರಾಧ್ಯ ದೈವ ಅಮಿತಾಭ್ ಚಿತ್ರ ಬಿಡಿಸಲು ಆತ ತನ್ನ ಅಂಗವೈಕಲ್ಯವನ್ನು ಮೀರಿ ಪ್ರಯತ್ನಿಸಿದ್ದಾನೆ. 

ಈ ಬಗ್ಗೆ ಅಮಿತಾಭ್ ಆತನ ಜೀವನದಲ್ಲಿ ಪವಡ ಜರುಗಿ ಆತ ಸಹಜ ಸ್ಥಿತಿಗೆ ಮರಳುವಂತಾಗಲಿ ಎಂದು ಹಾರೈಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com