ಐಸಿಸಿ ವಿಶ್ವಕಪ್ 2019: ಕಿವೀಸ್ ಬೌಲಿಂಗ್ ದಾಳಿಗೆ ಸೆಡ್ಡು ಹೊಡೆದ ಜಡ್ಡು, ತಿರುಗಿ ಬಿದ್ದ ಭಾರತ

ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದ್ದು, ಕೆಳಕ್ರಮಾಂಕದ ಬ್ಯಾಟ್ಸ್ ಮನ್ ಆಲ್ರೌಂಡರ್ ರವೀಂದ್ರ ಜಡೇಜಾ ಅರ್ಧಶತಕ ಸಿಡಿಸಿದ್ದಾರೆ.
ಧೋನಿ ಜಡೇಜಾ ಜುಗಲ್ ಬಂಧಿ
ಧೋನಿ ಜಡೇಜಾ ಜುಗಲ್ ಬಂಧಿ
ಲಂಡನ್: ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದ್ದು, ಕೆಳಕ್ರಮಾಂಕದ ಬ್ಯಾಟ್ಸ್ ಮನ್ ಆಲ್ರೌಂಡರ್ ರವೀಂದ್ರ ಜಡೇಜಾ ಅರ್ಧಶತಕ ಸಿಡಿಸಿದ್ದಾರೆ.
ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಆರಂಭಿಕ ಮರ್ಮಾಘಾತಕ್ಕೊಳಗಾಗಿದ್ದ ಭಾರತ ತಂಡ ಪ್ರಸ್ತುತ ಚೇತೋಹಾರಿ ಪ್ರದರ್ಶನ ನೀಡುತ್ತಿದ್ದು, ಕ್ರೀಸ್ ನಲ್ಲಿರುವ ಎಂಎಸ್ ಧೋನಿ ಹಾಗೂ ರವೀಂದ್ರ ಜಡೇಜಾ ಗೆಲುವಿಗಾಗಿ ತಮ್ಮ ಹೋರಾಟ ನಡೆಸುತ್ತಿದ್ದಾರೆ.
ಕೇವಲ 92 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ರವೀಂದ್ರ ಜಡೇಜಾ ಮತ್ತು ಧೋನಿ ಆಪದ್ಭಾಂಧವರಾಗಿ ನಿಂತಿದ್ದು, ಆರ್ಧಶತಕ ಸಿಡಿಸಿರುವ ಜಡೇಜಾ ಮತ್ತು 35 ರನ್ ಗಳಿಸಿರುವ ಧೋನಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ಭಾರತ ತಂಡ 46 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದ್ದು, ಭಾರತ ಗೆಲ್ಲಲು 24 ಎಸೆತಗಳಲ್ಲಿ 42 ರನ್ ಗಳಿಸಬೇಕಿದೆ. ಪ್ರಸ್ತುತ 74 ರನ್ ಗಳಿಸಿರುವ  ರವೀಂದ್ರ ಜಡೇಜಾ ಮತ್ತು 35 ರನ್ ಗಳಿಸಿರುವ ಧೋನಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com