ಸೈನಿಕರಿಗೆ ಗೌರವ: 3ನೇ ಏಕದಿನ ಪಂದ್ಯದ ವೇಳೆ ವಿಶೇಷ ಆರ್ಮಿ ಕ್ಯಾಪ್ ಧರಿಸಿದ ಟೀಂ ಇಂಡಿಯಾ!

ಜಾರ್ಖಂಡ್ ನ ರಾಂಚಿಯಲ್ಲಿ ಆಸ್ಚ್ರೇಲಿಯಾ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ದೇಶದ ಹೆಮ್ಮೆಯ...
ಸೇನಾ ಕ್ಯಾಪ್ ವಿತರಿಸಿದ ಧೋನಿ
ಸೇನಾ ಕ್ಯಾಪ್ ವಿತರಿಸಿದ ಧೋನಿ
ರಾಂಚಿ: ಜಾರ್ಖಂಡ್ ನ ರಾಂಚಿಯಲ್ಲಿ ಆಸ್ಚ್ರೇಲಿಯಾ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ದೇಶದ ಹೆಮ್ಮೆಯ ಸೈನಿಕರಿಗೆ ಗೌರವಾರ್ಪಣೆ ಮಾಡಿದ್ದು, ಇಂದಿನ ಪಂದ್ಯದಲ್ಲಿ ಆಟಗಾರರು ಭಾರತೀಯ ಸೇನೆಯ ಕ್ಯಾಪ್ ಧರಿಸಿ ಆಟವಾಡುತ್ತಿದ್ದಾರೆ.
ಹೌದು.. ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ 44 ಸೈನಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಇಂದು ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಇಂಡಿಯನ್ ಆರ್ಮಿ ಕ್ಯಾಪ್ ಧರಿಸಿದ್ದು. ಎಂದಿನ ತಮ್ಮ ಬ್ಲೂ ಕ್ಯಾಪ್ ಅನ್ನು ಪಕ್ಕಕ್ಕಿಟ್ಟು ಇಡೀ ಪಂದ್ಯವನ್ನು ಈ ಆರ್ಮಿ ಕ್ಯಾಪ್ ಧರಿಸಿಯೇ ಆಡುತ್ತಿದ್ದಾರೆ.
ಈ ಹಿಂದೆ ಸೇನೆಯಿಂದ ಗೌರವ ಸ್ವೀಕಾರ ಮಾಡಿದ್ದ ಟೀಂ ಇಂಡಿಯಾ ಮಾಜಿನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ಎಲ್ಲ ಆಟಗಾರರಿಗೂ ಖುದ್ದಾಗಿ ತಾವೇ ಕ್ಯಾಪ್ ವಿತರಣೆ ಮಾಡಿದ್ದು ವಿಶೇಷವಾಗಿತ್ತು.
ಪಂದ್ಯದ ಸಂಭಾವನೆ ಹುತಾತ್ಮ ಯೋಧರ ಕುಟುಂಬಕ್ಕೆ ಸಲ್ಲಿಕೆ
ಇದೇ ವೇಳೆ ಟೀಂ ಇಂಡಿಯಾದ ಎಲ್ಲ ಆಟಗಾರರೂ ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದ್ದು, ಇದೇ ಕಾರಣಕ್ಕೆ ಇಂದಿನ ಪಂದ್ಯದ ತಮ್ಮ ತಮ್ಮ ಸಂಪೂರ್ಣ ಸಂಭಾವನೆಯನ್ನು ಹುತಾತ್ಮ ಯೋಧರ ಕುಟುಂಬಕ್ಕೆ ಮತ್ತು ರಾಷ್ಟ್ರೀಯ ರಕ್ಷಣಾ ನಿಧಿಗೆ ಸಲ್ಲಿಕೆ ಮಾಡಲಿದ್ದಾರೆ. ಈ ಬಗ್ಗೆ ಮಾತಾನಾಡಿರುವ ತಂಡದ ನಾಯಕ ವಿರಾಟ್ ಕೊಹ್ಲಿ, ತಾವು ಮಾತ್ರವಲ್ಲದೇ ದೇಶದ ಪ್ರಜೆಗಳೂ ಕೂಡ ಸೈನಿಕರ ನಿಧಿಗೆ ಹಣ ನೀಡುವಂತೆ ಮನವಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com